ಇಡ್ಲಿ ಗುರು ಹೋಟೆಲ್ ಮಾಲೀಕನ ವಿರುದ್ಧ ಅಕ್ರಮ ಆರೋಪ
ಸಾಕಷ್ಟು ಜನರಿಗೆ ಲಕ್ಷಗಟ್ಟಲೇ ಹಣ ವಂಚಿಸಿರುವ ಆರೋಪ!
ಮಾಲೀಕ ಕಾರ್ತಿಕ್ ಶೆಟ್ಟಿ, ಕುಟುಂಬ, ಸಿಬ್ಬಂದಿ ವಿರುದ್ಧ ದೂರು
ಬೆಂಗಳೂರು: ಖ್ಯಾತ ತಿಂಡಿ ಹೋಟೆಲ್ ಇಡ್ಲಿಗುರು ಮಾಲೀಕನ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿದೆ. ಫ್ರಾಂಚೈಸಿ ಕೊಡಿಸೋದಾಗಿ ನಂಬಿಸಿ ಸಾಕಷ್ಟು ಜನರಿಗೆ ಲಕ್ಷಾಂತರ ಹಣ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಡ್ಲಿಗುರು ಹೋಟೆಲ್ ಮಾಲೀಕ ಕಾರ್ತಿಕ್ ಶೆಟ್ಟಿ ಮತ್ತವರ ಪತ್ನಿ ಮಂಜುಳಾ ಸೇರಿ ಹಲವರ ವಿರುದ್ಧ ದೂರು ನೀಡಲಾಗಿದೆ.
ಇನ್ನು, ಚೇತನ್ ಎಂಬುವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ಮಾಡಲಾಗಿದೆ. ಕಾರ್ತಿಕ್ ಲಕ್ಷಾಂತರ ರೂಪಾಯಿ ಕೊಟ್ಟು ಫ್ರಾಂಚೈಸಿ ಕೊಡುತ್ತಿದ್ದರು. ಫುಡ್ಕಾರ್ಟ್ ಮೂಲಕ ವ್ಯಾಪರ ಮಾಡಿಸೋ ಭರವಸೆ ನೀಡುತ್ತಿದ್ದರು. ಆದ್ರೆ, ಕಾರ್ತಿಕ್ ಶೆಟ್ಟಿ ಹೇಳಿದಂತೆ ವ್ಯಾಪರ ಆಗುತ್ತಿರಲಿಲ್ಲ. ನಂತರ ಕೇಳಿದ್ರೆ ಬೇರೆ ಎಲ್ಲಾದ್ರೂ ವ್ಯಾಪರ ಮಾಡೋಣ ಎನ್ನುತ್ತಿದ್ದರು ಎಂದು ದೂರಲಾಗಿದೆ.
ಇಷ್ಟೇ ಅಲ್ಲ ಕಮೀಷನ್ ಕೊಡೋದಾಗಿ ಕೂಡ ಹೇಳಿ ಮೋಸ ಮಾಡಿದ್ದಾರೆ. ನಗರದಲ್ಲಿ 10ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾರೆ. ಯಾವಾಗ ಜನ ಸಿಟ್ಟಿಗೆದ್ದರೋ ಆಗ ಕಾರ್ತಿಕ್ ಕುಟುಂಬ ಯಾರಿಗೂ ಸಿಗದೆ ಬೇರೆ ರಾಜ್ಯಕ್ಕೆ ಪರಾರಿಯಾಗಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಡ್ಲಿ ಗುರು ಹೋಟೆಲ್ ಮಾಲೀಕನ ವಿರುದ್ಧ ಅಕ್ರಮ ಆರೋಪ
ಸಾಕಷ್ಟು ಜನರಿಗೆ ಲಕ್ಷಗಟ್ಟಲೇ ಹಣ ವಂಚಿಸಿರುವ ಆರೋಪ!
ಮಾಲೀಕ ಕಾರ್ತಿಕ್ ಶೆಟ್ಟಿ, ಕುಟುಂಬ, ಸಿಬ್ಬಂದಿ ವಿರುದ್ಧ ದೂರು
ಬೆಂಗಳೂರು: ಖ್ಯಾತ ತಿಂಡಿ ಹೋಟೆಲ್ ಇಡ್ಲಿಗುರು ಮಾಲೀಕನ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿದೆ. ಫ್ರಾಂಚೈಸಿ ಕೊಡಿಸೋದಾಗಿ ನಂಬಿಸಿ ಸಾಕಷ್ಟು ಜನರಿಗೆ ಲಕ್ಷಾಂತರ ಹಣ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಡ್ಲಿಗುರು ಹೋಟೆಲ್ ಮಾಲೀಕ ಕಾರ್ತಿಕ್ ಶೆಟ್ಟಿ ಮತ್ತವರ ಪತ್ನಿ ಮಂಜುಳಾ ಸೇರಿ ಹಲವರ ವಿರುದ್ಧ ದೂರು ನೀಡಲಾಗಿದೆ.
ಇನ್ನು, ಚೇತನ್ ಎಂಬುವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ಮಾಡಲಾಗಿದೆ. ಕಾರ್ತಿಕ್ ಲಕ್ಷಾಂತರ ರೂಪಾಯಿ ಕೊಟ್ಟು ಫ್ರಾಂಚೈಸಿ ಕೊಡುತ್ತಿದ್ದರು. ಫುಡ್ಕಾರ್ಟ್ ಮೂಲಕ ವ್ಯಾಪರ ಮಾಡಿಸೋ ಭರವಸೆ ನೀಡುತ್ತಿದ್ದರು. ಆದ್ರೆ, ಕಾರ್ತಿಕ್ ಶೆಟ್ಟಿ ಹೇಳಿದಂತೆ ವ್ಯಾಪರ ಆಗುತ್ತಿರಲಿಲ್ಲ. ನಂತರ ಕೇಳಿದ್ರೆ ಬೇರೆ ಎಲ್ಲಾದ್ರೂ ವ್ಯಾಪರ ಮಾಡೋಣ ಎನ್ನುತ್ತಿದ್ದರು ಎಂದು ದೂರಲಾಗಿದೆ.
ಇಷ್ಟೇ ಅಲ್ಲ ಕಮೀಷನ್ ಕೊಡೋದಾಗಿ ಕೂಡ ಹೇಳಿ ಮೋಸ ಮಾಡಿದ್ದಾರೆ. ನಗರದಲ್ಲಿ 10ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾರೆ. ಯಾವಾಗ ಜನ ಸಿಟ್ಟಿಗೆದ್ದರೋ ಆಗ ಕಾರ್ತಿಕ್ ಕುಟುಂಬ ಯಾರಿಗೂ ಸಿಗದೆ ಬೇರೆ ರಾಜ್ಯಕ್ಕೆ ಪರಾರಿಯಾಗಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ