‘ಡಿ’ ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ
ಆರೋಪಿಗಳ ಫೋನ್ ಕಾಲ್ ಪರಿಶೀಲಿಸಿದ ಪೊಲೀಸರು
ಜೂನ್ 8 ರಿಂದ10 ರ ನಡುವಿನ ಫೋನ್ ಕಾಲ್ ಮಾಹಿತಿ ಕಲೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ಪರಪ್ಪನ ಅಗ್ರಹಾರ ಪಾಲಾಗಿ 50 ದಿನಗಳ ಮೇಲೆ ಕಳೆದಿದೆ.. ಆರೋಪಿ ದರ್ಶನ್ ವಿರುದ್ಧ ದಿನದಿಂದ ದಿನಕ್ಕೆ ಸಾಕ್ಷ್ಯಗಳು ಗಟ್ಟಿಯಾಗುತ್ತಿದೆ.. ಸದ್ಯ ಚಾರ್ಜ್ಶೀಟ್ ಸಲ್ಲಿಸಲು ಮುಂದಾಗಿರುವ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಫೋನ್ ಕಾಲ್ ಡಿಟೈಲ್ಸ್ ಕಲೆ ಹಾಕಿದ್ದಾರೆ..
ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಪಾಲಾಗಿ 50 ದಿನಗಳ ಮೇಲಾಗಿದೆ.. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಒಂದು ಎರಡು ಮೂರು ಅಂತ ಕಂಬಿ ಎಣಿಸುತ್ತಾ ಮಾಡಿದ ತಪ್ಪಿನ ಬಗ್ಗೆ ಪಶ್ಚತಾಪ ಪಡ್ತಿದ್ದಾರೆ.. ಮತ್ತೊಂದೆಡೆ ರೇಣುಕಾಸ್ವಾಮಿ ಹಂತಕರಿಗೆ ಶಿಕ್ಷೆ ಕೊಡಿಸಲು ಪಣತೊಟ್ಟಿರುವ ಪೊಲೀಸರು ಅದಕ್ಕೆ ಬೇಕಾದ ಸಾಕ್ಷ್ಯ ಸಂಗ್ರಹ ಮಾಡ್ತಿದ್ದು ತನಿಖೆಯನ್ನ ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ: ಪಲ್ಟಿಯಾದ ಸಾರಿಗೆ ಬಸ್.. 13ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ, ಇಬ್ಬರ ಸ್ಥಿತಿ ಚಿಂತಾಜನಕ
ದಿನದಿಂದ ದಿನಕ್ಕೆ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಒಂದೊಂದು ಸಾಕ್ಷ್ಯಗಳು ಪೊಲೀಸರ ಕೈ ಸೇರ್ತಿವೆ. ಪ್ರಕರಣದಲ್ಲಿ ಸಿಸಿಟಿವಿ ದೃಶ್ಯ, ದರ್ಶನ್ ಬಟ್ಟೆ ಮೇಲೆ ಸಿಕ್ಕಿರೋ ರಕ್ತದ ಕಲೆ ಹೀಗೆ ಆರೋಪಿಗಳ ವಿರುದ್ಧ ಪೊಲೀಸರು ನೂರಾರು ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ.. ಸದ್ಯ ಟೆಕ್ನಿಕಲ್ ಎವಿಡೆನ್ಸ್ಗಳನ್ನು ಕಲೆ ಹಾಕಲು ಮುಂದಾಗಿರುವ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳ ಫೋನ್ ಕಾಲ್ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:‘ನಮ್ಮನ್ನು ಶತ್ರುವಿನ ರೀತಿ ನೋಡ್ತಿರಾ’- ಸಿದ್ದು ಸರ್ಕಾರದ ವಿರುದ್ಧ ಪ್ರಮೋದಾ ದೇವಿ ಶಾಕಿಂಗ್ ರಿಯಾಕ್ಷನ್!
ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಇದುವರೆಗೂ 400ಕ್ಕೂ ಹೆಚ್ಚು ಪೋನ್ ಕಾಲ್ ಪರಿಶೀಲನೆ ನಡೆಸಿದ್ದಾರೆ.. ಕೃತ್ಯಕ್ಕೂ ಮುನ್ನಾ ಕೃತ್ಯದ ನಂತರ ಆರೋಪಿಗಳು ಪರಸ್ಪರ ಮಾತನಾಡಿರೋ ಪೋನ್ ಕಾಲ್ ಮಾಹಿತಿಯನ್ನ ಕಲೆ ಹಾಕಿದ್ದಾರೆ.. ಕೇವಲ ಫೋನ್ ಕಾಲ್ ಮಾತ್ರವಲ್ಲದೇ ಆರೋಪಿಗಳು ವಾಟ್ಸಾಪ್ನಲ್ಲೂ ನೂರಾರು ಕರೆ ಮಾಡಿದ್ದಾರೆ, ಕೃತ್ಯದ ನಂತರ ಬಂಧಿತ ಆರೋಪಿಗಳು ಐವತ್ತಕ್ಕೂ ಹೆಚ್ಚು ಮಂದಿ ಜೊತೆ ಮಾತುಕತೆ ನಡೆಸಿದ್ದಾರೆ.. ಆರೋಪಿಗಳು ಖುದ್ದು ದರ್ಶನ್ ಜೊತೆಯೂ ಮಾತುಕತೆ ನಡೆಸಿರೋದು ಸಿಡಿಆರ್ನಲ್ಲಿ ಬಹಿರಂಗವಾಗಿದೆ.. ಸಿಡಿಆರ್ ಆಧಾರದ ಮೇಲೆ ಪೊಲೀಸರು ಐವತ್ತಕ್ಕೂ ಹೆಚ್ಚು ಜನರನ್ನ ವಿಚಾರಣೆ ನಡೆಸಿದ್ದಾರೆ.. ಜೊತೆಗೆ ಜೂನ್ 8 ರಿಂದ ಜೂನ್ 10ರ ನಡುವಿನ ಪೋನ್
ಕಾಲ್ ಡಿಟೇಲ್ಸ್ಗಳನ್ನ ಕಲೆ ಹಾಕಿದ್ದಾರೆ.
ಇನ್ನು, ಪೊಲೀಸರು ಕೊಲೆ ಕೇಸ್ನಲ್ಲಿ ಬಂಧಿಯಾಗಿರುವ 17 ಜನರ ಫೋನ್ ಕಾಲ್ ಪರಿಶೀಲನೆ ನಡೆಸಿದ್ದು, ಕೃತ್ಯದ ನಂತರ ಆರೋಪಿಗಳು ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಜೊತೆ ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡಿರೋದು ಬಯಲಾಗಿದೆ..
ಸದ್ಯ ಕೊಲೆ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರುವ ನಟ ದರ್ಶನ್ & ಗ್ಯಾಂಗ್ ವಿರುದ್ಧ ದಿನದಿಂದ ದಿನಕ್ಕೆ ಸಾಕ್ಷ್ಯಗಳು ಗಟ್ಟಿಯಾಗ್ತಿದೆ. ಅತ್ತ ಪೊಲೀಸರು ಚಾರ್ಜ್ಶೀಟ್ ಹಾಕೋವರೆಗೆ ದರ್ಶನ್ಗೆ ಬೇಲ್ ಭಾಗ್ಯ ಸಿಗಲ್ಲ.. ಕೇಸ್ನಲ್ಲಿ ಮತ್ತಷ್ಟು ಸಾಕ್ಷ್ಯ ಕಲೆಗೆ ಪೊಲೀಸರು ಮುಂದಾಗಿರೋದ್ರಿಂದ ಡಿ ಗ್ಯಾಂಗ್ಗೆ ಸಂಕಷ್ಟ ತಪ್ಪಿದ್ದಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
‘ಡಿ’ ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ
ಆರೋಪಿಗಳ ಫೋನ್ ಕಾಲ್ ಪರಿಶೀಲಿಸಿದ ಪೊಲೀಸರು
ಜೂನ್ 8 ರಿಂದ10 ರ ನಡುವಿನ ಫೋನ್ ಕಾಲ್ ಮಾಹಿತಿ ಕಲೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ಪರಪ್ಪನ ಅಗ್ರಹಾರ ಪಾಲಾಗಿ 50 ದಿನಗಳ ಮೇಲೆ ಕಳೆದಿದೆ.. ಆರೋಪಿ ದರ್ಶನ್ ವಿರುದ್ಧ ದಿನದಿಂದ ದಿನಕ್ಕೆ ಸಾಕ್ಷ್ಯಗಳು ಗಟ್ಟಿಯಾಗುತ್ತಿದೆ.. ಸದ್ಯ ಚಾರ್ಜ್ಶೀಟ್ ಸಲ್ಲಿಸಲು ಮುಂದಾಗಿರುವ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಫೋನ್ ಕಾಲ್ ಡಿಟೈಲ್ಸ್ ಕಲೆ ಹಾಕಿದ್ದಾರೆ..
ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಪಾಲಾಗಿ 50 ದಿನಗಳ ಮೇಲಾಗಿದೆ.. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಒಂದು ಎರಡು ಮೂರು ಅಂತ ಕಂಬಿ ಎಣಿಸುತ್ತಾ ಮಾಡಿದ ತಪ್ಪಿನ ಬಗ್ಗೆ ಪಶ್ಚತಾಪ ಪಡ್ತಿದ್ದಾರೆ.. ಮತ್ತೊಂದೆಡೆ ರೇಣುಕಾಸ್ವಾಮಿ ಹಂತಕರಿಗೆ ಶಿಕ್ಷೆ ಕೊಡಿಸಲು ಪಣತೊಟ್ಟಿರುವ ಪೊಲೀಸರು ಅದಕ್ಕೆ ಬೇಕಾದ ಸಾಕ್ಷ್ಯ ಸಂಗ್ರಹ ಮಾಡ್ತಿದ್ದು ತನಿಖೆಯನ್ನ ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ: ಪಲ್ಟಿಯಾದ ಸಾರಿಗೆ ಬಸ್.. 13ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ, ಇಬ್ಬರ ಸ್ಥಿತಿ ಚಿಂತಾಜನಕ
ದಿನದಿಂದ ದಿನಕ್ಕೆ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಒಂದೊಂದು ಸಾಕ್ಷ್ಯಗಳು ಪೊಲೀಸರ ಕೈ ಸೇರ್ತಿವೆ. ಪ್ರಕರಣದಲ್ಲಿ ಸಿಸಿಟಿವಿ ದೃಶ್ಯ, ದರ್ಶನ್ ಬಟ್ಟೆ ಮೇಲೆ ಸಿಕ್ಕಿರೋ ರಕ್ತದ ಕಲೆ ಹೀಗೆ ಆರೋಪಿಗಳ ವಿರುದ್ಧ ಪೊಲೀಸರು ನೂರಾರು ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ.. ಸದ್ಯ ಟೆಕ್ನಿಕಲ್ ಎವಿಡೆನ್ಸ್ಗಳನ್ನು ಕಲೆ ಹಾಕಲು ಮುಂದಾಗಿರುವ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳ ಫೋನ್ ಕಾಲ್ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:‘ನಮ್ಮನ್ನು ಶತ್ರುವಿನ ರೀತಿ ನೋಡ್ತಿರಾ’- ಸಿದ್ದು ಸರ್ಕಾರದ ವಿರುದ್ಧ ಪ್ರಮೋದಾ ದೇವಿ ಶಾಕಿಂಗ್ ರಿಯಾಕ್ಷನ್!
ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಇದುವರೆಗೂ 400ಕ್ಕೂ ಹೆಚ್ಚು ಪೋನ್ ಕಾಲ್ ಪರಿಶೀಲನೆ ನಡೆಸಿದ್ದಾರೆ.. ಕೃತ್ಯಕ್ಕೂ ಮುನ್ನಾ ಕೃತ್ಯದ ನಂತರ ಆರೋಪಿಗಳು ಪರಸ್ಪರ ಮಾತನಾಡಿರೋ ಪೋನ್ ಕಾಲ್ ಮಾಹಿತಿಯನ್ನ ಕಲೆ ಹಾಕಿದ್ದಾರೆ.. ಕೇವಲ ಫೋನ್ ಕಾಲ್ ಮಾತ್ರವಲ್ಲದೇ ಆರೋಪಿಗಳು ವಾಟ್ಸಾಪ್ನಲ್ಲೂ ನೂರಾರು ಕರೆ ಮಾಡಿದ್ದಾರೆ, ಕೃತ್ಯದ ನಂತರ ಬಂಧಿತ ಆರೋಪಿಗಳು ಐವತ್ತಕ್ಕೂ ಹೆಚ್ಚು ಮಂದಿ ಜೊತೆ ಮಾತುಕತೆ ನಡೆಸಿದ್ದಾರೆ.. ಆರೋಪಿಗಳು ಖುದ್ದು ದರ್ಶನ್ ಜೊತೆಯೂ ಮಾತುಕತೆ ನಡೆಸಿರೋದು ಸಿಡಿಆರ್ನಲ್ಲಿ ಬಹಿರಂಗವಾಗಿದೆ.. ಸಿಡಿಆರ್ ಆಧಾರದ ಮೇಲೆ ಪೊಲೀಸರು ಐವತ್ತಕ್ಕೂ ಹೆಚ್ಚು ಜನರನ್ನ ವಿಚಾರಣೆ ನಡೆಸಿದ್ದಾರೆ.. ಜೊತೆಗೆ ಜೂನ್ 8 ರಿಂದ ಜೂನ್ 10ರ ನಡುವಿನ ಪೋನ್
ಕಾಲ್ ಡಿಟೇಲ್ಸ್ಗಳನ್ನ ಕಲೆ ಹಾಕಿದ್ದಾರೆ.
ಇನ್ನು, ಪೊಲೀಸರು ಕೊಲೆ ಕೇಸ್ನಲ್ಲಿ ಬಂಧಿಯಾಗಿರುವ 17 ಜನರ ಫೋನ್ ಕಾಲ್ ಪರಿಶೀಲನೆ ನಡೆಸಿದ್ದು, ಕೃತ್ಯದ ನಂತರ ಆರೋಪಿಗಳು ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಜೊತೆ ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡಿರೋದು ಬಯಲಾಗಿದೆ..
ಸದ್ಯ ಕೊಲೆ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರುವ ನಟ ದರ್ಶನ್ & ಗ್ಯಾಂಗ್ ವಿರುದ್ಧ ದಿನದಿಂದ ದಿನಕ್ಕೆ ಸಾಕ್ಷ್ಯಗಳು ಗಟ್ಟಿಯಾಗ್ತಿದೆ. ಅತ್ತ ಪೊಲೀಸರು ಚಾರ್ಜ್ಶೀಟ್ ಹಾಕೋವರೆಗೆ ದರ್ಶನ್ಗೆ ಬೇಲ್ ಭಾಗ್ಯ ಸಿಗಲ್ಲ.. ಕೇಸ್ನಲ್ಲಿ ಮತ್ತಷ್ಟು ಸಾಕ್ಷ್ಯ ಕಲೆಗೆ ಪೊಲೀಸರು ಮುಂದಾಗಿರೋದ್ರಿಂದ ಡಿ ಗ್ಯಾಂಗ್ಗೆ ಸಂಕಷ್ಟ ತಪ್ಪಿದ್ದಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ