newsfirstkannada.com

ದೇವಸ್ಥಾನದಲ್ಲಿ ಪೊಲೀಸ್​​​ ಜೊತೆ ಕುಡುಕನ ಕಿರಿಕ್: ಎಣ್ಣೆ ಏಟಲ್ಲಿ ಆತ ಮಾಡಿದ್ದೇನು ಗೊತ್ತಾ..?

Share :

Published August 17, 2024 at 6:28am

Update August 17, 2024 at 6:29am

    ದೇವಸ್ಥಾನಕ್ಕೆ ಬಂದಿದ್ದ ಕಾನ್ಸ್​ಟೇಬಲ್ ಜೊತೆ ಕುಡುಕನ ಕಿರಿಕ್​

    ಪೊಲೀಸ್ ಮತ್ತು ಆತನ ಪತ್ನಿ ಮೇಲೆ ಹಲ್ಲೆ ಮಾಡಿದ ಕುಡುಕ

    ಸಾಲದೆಂಬಂತೆ ದೇವಸ್ಥಾನದ ಆಚೆ ನಿಂತಿದ್ದ ಪೊಲೀಸ್ ಬೈಕ್​ಗೆ ಬೆಂಕಿ

ಭೋಪಾಲ್​: ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಭೋಪಾಲ್​ನ ಕಮಲಾನಗರದಲ್ಲಿರುವ ನವಗ್ರಹ ದೇವಸ್ಥಾನಕ್ಕೆ ಪೊಲೀಸ್ ಕಾನ್ಸ್​​ಟೇಬಲ್ ಒಬ್ಬರು ತಮ್ಮ ಪತ್ನಿಯೊಡನೆ ಹೋಗಿದ್ದರು. ಈ ವೇಳೆ ದೇವಸ್ಥಾನದಲ್ಲಿ ಕುಡುಕನೊಬ್ಬ ಭಕ್ತರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಅದೇ ವೇಳೆ ದೇವಸ್ಥಾನದಲ್ಲಿದ್ದ ಕಾನ್ಸ್​ಟೇಬಲ್ ಧರ್ಮೇಂದ್ರ ಶರ್ಮಾ ಆತನನ್ನು ಹಿಡಿದು ಗದರಿಸಿದ್ದಾರೆ.

ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಬೀದಿಗಿಳಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಭಾರೀ ಆಕ್ರೋಶ; ಯಾಕೆ?

ಇದಕ್ಕೆ ರೊಚ್ಚಿಗೆದ್ದ ಕುಡುಕ ಧರ್ಮೇಂದ್ರ ಮೇಲೆಯೇ ಹಲ್ಲೆ ಮಾಡಿದ್ದಾನೆ. ಅವರ ಪತ್ನಿಯ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ. ಕೊನೆಗೆ ದೇವಸ್ಥಾನದಿಂದ ಹೊರಗೆ ಹೋದ ಕುಡುಕ ಮಾಡಿದ್ದು ಮತ್ತೊಂದು ಅನಾಹುತಕಾರಿ ಕೆಲಸ.

 

 

View this post on Instagram

 

A post shared by ND_News_Bhopal (@nd_news_bhopal)


ಇದನ್ನೂ ಓದಿ: ಜಮ್ಮು-ಕಾಶ್ಮೀರ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌.. 10 ವರ್ಷಗಳ ಬಳಿಕ 3 ಮಹತ್ವದ ಹೆಜ್ಜೆ; ಏನದು?

ಪತ್ನಿಯೊಂದಿಗೆ ಬಂದಿದ್ದ ಕಾನ್ಸ್​ಟೇಬಲ್ ಶರ್ಮಾ ತಮ್ಮ ಬೈಕನ್ನು ದೇವಸ್ಥಾನದ ಆಚೆಯೇ ಬಿಟ್ಟು ಬಂದಿದ್ದರು. ಅದನ್ನು ಕಂಡಿದ್ದ ಕುಡುಕ ಬೈಕ್​​ನಲ್ಲಿದ್ದ ಪೆಟ್ರೋಲ​ನ್ನೇ ತೆಗೆದು ಕಾನ್ಸ್​​ಟೇಬಲ್ ಬೈಕ್​ ಮೇಲೆ ಸುರಿದು ಬೆಂಕಿಯಿಟ್ಟುಬಿಟ್ಟಿದ್ದಾನೆ. ಸದ್ಯ ಕಮಲಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕುಡುಕನಿಗಾಗಿ ಹುಡುಕಾಟ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವಸ್ಥಾನದಲ್ಲಿ ಪೊಲೀಸ್​​​ ಜೊತೆ ಕುಡುಕನ ಕಿರಿಕ್: ಎಣ್ಣೆ ಏಟಲ್ಲಿ ಆತ ಮಾಡಿದ್ದೇನು ಗೊತ್ತಾ..?

https://newsfirstlive.com/wp-content/uploads/2024/08/CONSTABLE-BIKE-ABLAZED.jpg

    ದೇವಸ್ಥಾನಕ್ಕೆ ಬಂದಿದ್ದ ಕಾನ್ಸ್​ಟೇಬಲ್ ಜೊತೆ ಕುಡುಕನ ಕಿರಿಕ್​

    ಪೊಲೀಸ್ ಮತ್ತು ಆತನ ಪತ್ನಿ ಮೇಲೆ ಹಲ್ಲೆ ಮಾಡಿದ ಕುಡುಕ

    ಸಾಲದೆಂಬಂತೆ ದೇವಸ್ಥಾನದ ಆಚೆ ನಿಂತಿದ್ದ ಪೊಲೀಸ್ ಬೈಕ್​ಗೆ ಬೆಂಕಿ

ಭೋಪಾಲ್​: ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಭೋಪಾಲ್​ನ ಕಮಲಾನಗರದಲ್ಲಿರುವ ನವಗ್ರಹ ದೇವಸ್ಥಾನಕ್ಕೆ ಪೊಲೀಸ್ ಕಾನ್ಸ್​​ಟೇಬಲ್ ಒಬ್ಬರು ತಮ್ಮ ಪತ್ನಿಯೊಡನೆ ಹೋಗಿದ್ದರು. ಈ ವೇಳೆ ದೇವಸ್ಥಾನದಲ್ಲಿ ಕುಡುಕನೊಬ್ಬ ಭಕ್ತರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಅದೇ ವೇಳೆ ದೇವಸ್ಥಾನದಲ್ಲಿದ್ದ ಕಾನ್ಸ್​ಟೇಬಲ್ ಧರ್ಮೇಂದ್ರ ಶರ್ಮಾ ಆತನನ್ನು ಹಿಡಿದು ಗದರಿಸಿದ್ದಾರೆ.

ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಬೀದಿಗಿಳಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಭಾರೀ ಆಕ್ರೋಶ; ಯಾಕೆ?

ಇದಕ್ಕೆ ರೊಚ್ಚಿಗೆದ್ದ ಕುಡುಕ ಧರ್ಮೇಂದ್ರ ಮೇಲೆಯೇ ಹಲ್ಲೆ ಮಾಡಿದ್ದಾನೆ. ಅವರ ಪತ್ನಿಯ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ. ಕೊನೆಗೆ ದೇವಸ್ಥಾನದಿಂದ ಹೊರಗೆ ಹೋದ ಕುಡುಕ ಮಾಡಿದ್ದು ಮತ್ತೊಂದು ಅನಾಹುತಕಾರಿ ಕೆಲಸ.

 

 

View this post on Instagram

 

A post shared by ND_News_Bhopal (@nd_news_bhopal)


ಇದನ್ನೂ ಓದಿ: ಜಮ್ಮು-ಕಾಶ್ಮೀರ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌.. 10 ವರ್ಷಗಳ ಬಳಿಕ 3 ಮಹತ್ವದ ಹೆಜ್ಜೆ; ಏನದು?

ಪತ್ನಿಯೊಂದಿಗೆ ಬಂದಿದ್ದ ಕಾನ್ಸ್​ಟೇಬಲ್ ಶರ್ಮಾ ತಮ್ಮ ಬೈಕನ್ನು ದೇವಸ್ಥಾನದ ಆಚೆಯೇ ಬಿಟ್ಟು ಬಂದಿದ್ದರು. ಅದನ್ನು ಕಂಡಿದ್ದ ಕುಡುಕ ಬೈಕ್​​ನಲ್ಲಿದ್ದ ಪೆಟ್ರೋಲ​ನ್ನೇ ತೆಗೆದು ಕಾನ್ಸ್​​ಟೇಬಲ್ ಬೈಕ್​ ಮೇಲೆ ಸುರಿದು ಬೆಂಕಿಯಿಟ್ಟುಬಿಟ್ಟಿದ್ದಾನೆ. ಸದ್ಯ ಕಮಲಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕುಡುಕನಿಗಾಗಿ ಹುಡುಕಾಟ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More