/newsfirstlive-kannada/media/post_attachments/wp-content/uploads/2024/08/CONSTABLE-BIKE-ABLAZED.jpg)
ಭೋಪಾಲ್​: ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಭೋಪಾಲ್​ನ ಕಮಲಾನಗರದಲ್ಲಿರುವ ನವಗ್ರಹ ದೇವಸ್ಥಾನಕ್ಕೆ ಪೊಲೀಸ್ ಕಾನ್ಸ್​​ಟೇಬಲ್ ಒಬ್ಬರು ತಮ್ಮ ಪತ್ನಿಯೊಡನೆ ಹೋಗಿದ್ದರು. ಈ ವೇಳೆ ದೇವಸ್ಥಾನದಲ್ಲಿ ಕುಡುಕನೊಬ್ಬ ಭಕ್ತರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಅದೇ ವೇಳೆ ದೇವಸ್ಥಾನದಲ್ಲಿದ್ದ ಕಾನ್ಸ್​ಟೇಬಲ್ ಧರ್ಮೇಂದ್ರ ಶರ್ಮಾ ಆತನನ್ನು ಹಿಡಿದು ಗದರಿಸಿದ್ದಾರೆ.
ಇದನ್ನೂ ಓದಿ:ಕೊಲ್ಕತ್ತಾದಲ್ಲಿ ಬೀದಿಗಿಳಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಭಾರೀ ಆಕ್ರೋಶ; ಯಾಕೆ?
ಇದಕ್ಕೆ ರೊಚ್ಚಿಗೆದ್ದ ಕುಡುಕ ಧರ್ಮೇಂದ್ರ ಮೇಲೆಯೇ ಹಲ್ಲೆ ಮಾಡಿದ್ದಾನೆ. ಅವರ ಪತ್ನಿಯ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ. ಕೊನೆಗೆ ದೇವಸ್ಥಾನದಿಂದ ಹೊರಗೆ ಹೋದ ಕುಡುಕ ಮಾಡಿದ್ದು ಮತ್ತೊಂದು ಅನಾಹುತಕಾರಿ ಕೆಲಸ.
View this post on Instagram
ಇದನ್ನೂ ಓದಿ: ಜಮ್ಮು-ಕಾಶ್ಮೀರ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್.. 10 ವರ್ಷಗಳ ಬಳಿಕ 3 ಮಹತ್ವದ ಹೆಜ್ಜೆ; ಏನದು?
ಪತ್ನಿಯೊಂದಿಗೆ ಬಂದಿದ್ದ ಕಾನ್ಸ್​ಟೇಬಲ್ ಶರ್ಮಾ ತಮ್ಮ ಬೈಕನ್ನು ದೇವಸ್ಥಾನದ ಆಚೆಯೇ ಬಿಟ್ಟು ಬಂದಿದ್ದರು. ಅದನ್ನು ಕಂಡಿದ್ದ ಕುಡುಕ ಬೈಕ್​​ನಲ್ಲಿದ್ದ ಪೆಟ್ರೋಲ​ನ್ನೇ ತೆಗೆದು ಕಾನ್ಸ್​​ಟೇಬಲ್ ಬೈಕ್​ ಮೇಲೆ ಸುರಿದು ಬೆಂಕಿಯಿಟ್ಟುಬಿಟ್ಟಿದ್ದಾನೆ. ಸದ್ಯ ಕಮಲಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕುಡುಕನಿಗಾಗಿ ಹುಡುಕಾಟ ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us