/newsfirstlive-kannada/media/post_attachments/wp-content/uploads/2025/03/tej-pratap-yadav-cop-2.jpg)
ನಮ್ಮ ಅಪ್ಪ ಯಾರು ಗೊತ್ತಾ. ನಮ್ಮ ತಾತ ಯಾರು ಗೊತ್ತಾ ಅಂತಾನೆ ಕೆಲವರು ಮೆರೀತಿರ್ತಾರೆ. ಹೀಗೆ ಬಿಹಾರದ ಮಾಜಿ ಸಿಎಂ ಸುಪುತ್ರ ಕೂಡ ಪೊಲೀಸ್ ಮೇಲೆ ದರ್ಪ ತೋರಿದ್ದಾನೆ. ಸಸ್ಪೆಂಡ್ ಮಾಡ್ತೀನಿ ಅಂತ ಬೆದರಿಕೆ ಹಾಕಿ ತನ್ನದೇ ಭದ್ರತೆಗೆ ಬಂದಿದ್ದ ಪೊಲೀಸ್ ಕೈಯಲ್ಲಿ ಡ್ಯಾನ್ಸ್ ಮಾಡಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅದೇನ್ ಹುಕುಂ.. ಪೊಲೀಸ್ ಅಧಿಕಾರಿಗಳು ಅಂದ್ರೆ ಕಾಲು ಕಸನಾ.. ಸ್ಟೇಜ್ ಮೇಲೆ ಬಣ್ಣ ಹಚ್ಕೊಂಡು, ಧಿಮಾಕಲ್ಲಿ ಪೊಲೀಸ್ಗೆ ಆವಾಜ್ ಬೀಡ್ತಿರೋದು ಬಿಹಾರದ ಮಾಜಿ ಸಿಎಂ ಸುಪುತ್ರ. ಇವರ ಹೆಸರು ತೇಜ್ ಪಾಲ್ ಯಾದವ್. ಬಿಹಾರ ಕಾ ಲಾಲ್ ಲಾಲು ಯಾದವ್ ಕಾ ಬೇಟಾ.
ಇಡೀ ದೇಶವೇ ಹೋಳಿ ಹಬ್ಬದ ಸಂಭ್ರಮದಲ್ಲಿ ಮುಳುಗೆದ್ದಿದೆ. ಎಲ್ಲೆಡೆ ರಂಗಿನ ಹೋಳಿ ಹಬ್ಬ.. ಇದ್ರ ಮಧ್ಯೆ ಇದೊಂದು ವಿಡಿಯೋ ಬಿಹಾರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಬಿಹಾರದಲ್ಲಿ ಸದ್ಯ ಜೆಡಿಯು-ಬಿಜೆಪಿ ಆಡಳಿತದಲ್ಲಿದೆ. ಈ ವರ್ಷಾಂತ್ಯಕ್ಕೆ ಎಲೆಕ್ಷನ್ ಬರ್ತಿದೆ. ಆ ಕಾರಣಕ್ಕೆ ಆರ್ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ತಮ್ಮ ಕಾರ್ಯಕರ್ತರಿಗೆ ಹೋಳಿ ಕಾರ್ಯಕ್ರಮ ಆಯೋಜಿಸಿದ್ರು. ಈ ವೇಳೆ ಲಾಲು ಸುಪುತ್ರ ಪೊಲೀಸ್ ಕಾನ್ಸ್ಟೇಬಲ್ಗೆ ಆವಾಜ್ ಹಾಕಿದ್ದಾನೆ. ಡ್ಯಾನ್ ಮಾಡು ಇಲ್ಲ ಅಂದ್ರೆ ನಿನ್ನೆ ಸಸ್ಪೆಂಡ್ ಮಾಡಿಸ್ತೀನಿ ಅಂತ ಧಮ್ಕಿ ಹಾಕಿದ್ದಾನೆ. ಪಾಪ ಅಧಿಕಾರ ಹೋಗುತ್ತೆ ಅನ್ನೋ ಭಯದಲ್ಲಿ ಆ ಕಾನ್ಸ್ಟೇಬಲ್ ಒಂದೆರೆಡು ಸ್ಟೆಪ್ ಹಾಕಿದ್ದಾರೆ.
ಮನೆಯಲ್ಲಿ ಜಬರ್ಜಸ್ತ್ ಆಗಿ ಹೋಳಿ ಆಚರಿಸಿದ್ದ ಲಾಲೂ ಪುತ್ರ, ಅದ್ಯಾವ್ ಜೋಶ್ನಲ್ಲಿದ್ನೋ ಗೊತ್ತಿಲ್ಲ. ತಾನೊಬ್ಬ ರಾಜಕೀಯ ನಾಯಕ ಅನ್ನೊದು ಮರೆತು, ಪುಂಡ ಪೋಕರಿಗಳ ಹಾಗೆ ಗ್ಯಾಂಗ್ ಕಟ್ಕೊಂಡು ಪಾಟ್ನಾದ ಬೀದಿ ಬೀದಿ ಸುತ್ತಿದ್ದಾನೆ. ಅಷ್ಟೇ ಅಲ್ಲ ಬಿಹಾರ್ ಸಿಎಂ ನಿತೀಶ್ ಕುಮಾರ್ ಮನೆ ಮುಂದೆ ಹೋಗಿ ‘ಫಾಲ್ತೂ ಚಾಚಾ ಹ್ಯಾಪಿ ಹೋಳಿ’ ಅಂತ ಜೋರಾಗಿ ಕೂಗಾಡಿದ್ದಾನೆ.
ಇದನ್ನೂ ಓದಿ: ರನ್ಯಾ ರಾವ್ ಮಲತಂದೆ, ಡಿಜಿಪಿಗೆ ಸರ್ಕಾರದ ಶಿಕ್ಷೆ; ಗೋಲ್ಡ್ ಸ್ಮಗ್ಲಿಂಗ್ ಕೇಸ್ಗೆ CBI ಎಂಟ್ರಿ ಆಗುತ್ತಾ?
ಬಿಹಾರದಲ್ಲಿ ಜಂಗಲ್ ರಾಜ್.. ಬಿಜೆಪಿ ಟೀಕೆ
ಲಾಲೂ ಪುತ್ರನ ಧಮ್ಕಿ ವಿಡಿಯೋ ಇಡೀ ಬಿಹಾರದಲ್ಲೆ ಹಲ್ಚಲ್ ಎಬ್ಬಿಸಿದೆ. ತೇಜ್ ಪ್ರತಾಪ್ ಯಾದವ್ ಪುಂಡಾಟಕ್ಕೆ ಆಕ್ರೋಶ ವ್ಯಕ್ತವಾಗ್ತಿದ್ದು, ಒಂದು ವೇಳೆ ಬಿಹಾರದಲ್ಲಿ ಮತ್ತೆ ಆರ್ಜೆಡಿ ಅಧಿಕಾರಕ್ಕೆ ಬಂದರೆ ಜಂಗಲ್ ರಾಜ್ ಆಗಿ ಬದಲಾಗಲಿದೆ. ಇದು ಟ್ರೈಲರ್ ಅಷ್ಟೇ.. ಇಡೀ ಬಿಹಾರ ಎಚ್ಚರಿಕೆಯಿಂದ ಇರಬೇಕು ಅಂತ ಬಿಜೆಪಿ ಹೇಳಿದೆ. ಆದ್ರೆ ಸಿಎಂ ಚಾಚಾ ನಿತೀಶ್ ಮಾತ್ರ ಭತೀಜಾ ತೇಜ್ ಪ್ರತಾಪ್ ಆಟಾಟೋಪ ಬಗ್ಗೆ ಒಂದೇ ಒಂದು ಮಾತನಾಡಿಲ್ಲ.
RJD = JUNGLE RAJ AND VARDI KA APMAAN
TEJ PRATAP YADAV TO COP- TUMKO THUMKA LAGANA HAI.. NAHI LAGAOGE TOH SUSPEND KAR DIYE JAOGE
This is why they need to be kept out of power! Imagine if this is what they do out of power- what they will do in power.. pic.twitter.com/V0xA67R0iz
— Shehzad Jai Hind (Modi Ka Parivar) (@Shehzad_Ind)
RJD = JUNGLE RAJ AND VARDI KA APMAAN
TEJ PRATAP YADAV TO COP- TUMKO THUMKA LAGANA HAI.. NAHI LAGAOGE TOH SUSPEND KAR DIYE JAOGE
This is why they need to be kept out of power! Imagine if this is what they do out of power- what they will do in power.. pic.twitter.com/V0xA67R0iz— Shehzad Jai Hind (Modi Ka Parivar) (@Shehzad_Ind) March 15, 2025
">March 15, 2025
ಲಾಲೂ ಸುಪುತ್ರನ ದರ್ಪ ಅಹಂನ ವಿಶ್ವ ದರ್ಶನವಾಗಿದೆ. ಇದೇ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ಎಲೆಕ್ಷನ್ ನಡೆಯಲಿದ್ದು ಇದೇ ದೃಶ್ಯ ಪ್ರತಿಪಕ್ಷಗಳಿಗೆ ಅಸ್ತ್ರ ಕೊಟ್ಟಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ