Advertisment

ವಿಚಾರಣೆ ವೇಳೆ ದರ್ಶನ್​ ಹೇಳೋದು ಒಂದೇ ಮಾತು.. ಪಶ್ಚಾತ್ತಾಪ ಪಡ್ತಿದ್ದಾರಾ ಚಾಲೆಂಜಿಂಗ್​ ಸ್ಟಾರ್​

author-image
AS Harshith
Updated On
ಸ್ಟೇಷನ್‌ನಲ್ಲಿ ದರ್ಶನ್ ಜೊತೆ ಮಾತಾಡಿ ಬಿಗ್ ಅಪ್​ಡೇಟ್ ಕೊಟ್ಟ ಲಾಯರ್.. ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌!
Advertisment
  • ರಾಜ್ಯದಾದ್ಯಂತ ನಟ ದರ್ಶನ್​ ಮತ್ತು ಟೀಂ ವಿರುದ್ಧ ಆಕ್ರೋಶ
  • ದರ್ಶನ್​ ವರ್ತನೆಯಿಂದ ಅಭಿಮಾನಿಗಳಿಗೆ ಬೇಸರ
  • ಮತ್ತೋರ್ವ ಸ್ಯಾಂಡಲ್​​ವುಡ್​ ನಟ ಈ ಕೇಸ್​ನಲ್ಲಿ ಭಾಗಿ

ನಟ ದರ್ಶನ್​ ಮತ್ತು ಟೀಂ ಮಾಡಿರುವ ಮರ್ಡರ್​ ಕೇಸ್​ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅಭಿಮಾನಿಗಳಂತೂ ದರ್ಶನ್​ ವರ್ತನೆಯಿಂದ ಬೇಸರಗೊಂಡಿದ್ದಾರೆ. ಸದ್ಯ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ನಟನನ್ನು ಅನ್​ಫಾಲೋ ಮಾಡುತ್ತಿದ್ದಾರೆ.

Advertisment

ರೇಣುಕಾಸ್ವಾಮಿ ಹತ್ಯೆಯಿಂದ ರಾಜ್ಯದಾದ್ಯಂತ ನಟನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅತ್ತ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿದ್ದಾರೆ. ನಟ ದರ್ಶನ್​ ಅನ್ನು ಪೊಲೀಸರು ವಿಚಾರಿಸುತ್ತಿದ್ದಾರೆ. ಆದರೆ ವಿಚಾರಣೆ ವೇಳೆ ದರ್ಶನ್​ ಒಂದೇ ಮಾತು ಹೇಳುತ್ತಿದ್ದಾರಂತೆ. ನನಗೇನು ಗೊತ್ತಿಲ್ಲ ಎಂದು ಚಾಲೆಂಜಿಂಗ್​ ಸ್ಟಾರ್​ ಉತ್ತರಿಸುತ್ತಿದ್ದಾರಂತೆ.

publive-image

ಇದನ್ನೂ ಓದಿ: ಇಷ್ಟೆಲ್ಲಾ ಆಗಿದ್ದು ನನ್ನಿಂದ.. ಪೊಲೀಸ್​​ ಕಸ್ಟಡಿಯಲ್ಲಿ ಪಶ್ಚಾತ್ತಾಪ ಪಡುತ್ತಿರುವ ಪವಿತ್ರಾ

ಮತ್ತೋರ್ವ ನಟ ಅರೆಸ್ಟ್​

ನಟ ದರ್ಶನ್​, ನಟಿ ಪವಿತ್ರಾ ಮಾತ್ರವಲ್ಲದೆ ಮತ್ತೋರ್ವ ನಟನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬುಲ್​ಬುಲ್​, ಬೃಂದಾವನ ಸಿನಿಮಾಗಳಲ್ಲಿ ನಟಿಸಿದ್ದ ನಟ ಪ್ರದೋಶ್​ನನ್ನು ಅರೆಸ್ಟ್​ ಮಾಡಿದ್ದಾರೆ.

Advertisment

publive-image

ಇದನ್ನೂ ಓದಿ: ರೇಣುಕಾಸ್ವಾಮಿ ಮರ್ಡರ್​​ ಕೇಸ್​; ನಟ ದರ್ಶನ್ ವಿರುದ್ಧ ರೌಡಿಶೀಟರ್ ಓಪನ್ ಆಗೋ ಸಾಧ್ಯತೆ!

ದರ್ಶನ್ ಆಪ್ತ ವಲಯದಲ್ಲಿ ಪ್ರದೋಶ್ ಗುರುತಿಸಿಕೊಂಡಿದ್ದರು. ಬಿಜೆಪಿ ಮುಖಂಡರೊಬ್ಬರ ಜೊತೆ ಆಪ್ತ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ಬಿಜೆಪಿ ಐಟಿ ವಿಭಾಗದಲ್ಲಿಯೂ ಕೆಲಸ ಮಾಡಿದ್ದರಂತೆ. ರವಿಸುಬ್ರಹ್ಮಣ್ಯ ಆಪ್ತ ವಲಯದಲ್ಲಿ ಪ್ರದೋಶ್ ಗುರುತಿಸಿಕೊಂಡಿದ್ದರು. ಸದ್ಯ ರೇಣುಕಾಸ್ವಾಮಿಯ ಕೊಲೆ ಕೇಸ್​ನ​ಲ್ಲಿ ಪ್ರದೋಶ್ ಅರೆಸ್ಟ್​ ಆಗಿದ್ದಾರೆ. ಈ ಕೊಲೆ ಕೇಸ್​​ನಲ್ಲಿ ಪ್ರದೋಶ್​ ಎ14 ಆರೋಪಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment