ಜಾಮೀನು ಸಿಕ್ರೂ ತಪ್ಪದ ಸಂಕಷ್ಟ; ಇಂದು ದರ್ಶನ್​​ ವಿರುದ್ಧ ಪೊಲೀಸ್ರು ಸುಪ್ರೀಂಕೋರ್ಟ್​ ಮೊರೆ!

author-image
Ganesh Nachikethu
Updated On
BREAKING: ಬಳ್ಳಾರಿ ಜೈಲಿನಿಂದ ನಟ ದರ್ಶನ್ ಬಿಡುಗಡೆ; ಬೆಂಗಳೂರಿಗೆ ದಾಸನ ಎಂಟ್ರಿ ಹೇಗೆ?
Advertisment
  • ರೇಣುಕಾಸ್ಚಾಮಿ ಕೊಲೆ ಕೇಸಲ್ಲಿ ನಟ ದರ್ಶನ್​​ಗೆ ಸಂಕಷ್ಟ..!
  • ಸುಪ್ರೀಂ​​​ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ಅನುಮತಿ
  • ಅನುಮತಿ ಸಿಕ್ಕ ಕೂಡಲೇ ಕಡತಗಳು ಗೃಹ ಇಲಾಖೆಗೆ ರವಾನೆ

ಬೆಂಗಳೂರು: ನಟ ದರ್ಶನ್​ಗೆ ಹೈಕೋರ್ಟ್ ಪೂರ್ಣ ಪ್ರಮಾಣದ ಜಾಮೀನು ನೀಡಿದೆ. ಜಾಮೀನು ಸಿಕ್ಕ ಖುಷಿಯಲ್ಲಿರೋ ನಟ ದರ್ಶನ್​​ಗೆ ಶಾಕಿಂಗ್​​ ನ್ಯೂಸ್​ ಒಂದಿದೆ. ಹೈಕೋರ್ಟ್​ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೊರೆ ಹೋಗಲು ಬೆಂಗಳೂರು ಪೊಲೀಸ್ರು ನಿರ್ಧಾರಕ್ಕೆ ಬಂದಿದ್ದಾರೆ. ಸುಪ್ರೀಂ ಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲು ಸಿದ್ಧರಾಗಿದ್ದು, ಗೃಹ ಇಲಾಖೆಯಿಂದ ಗ್ರೀನ್​ ಸಿಗ್ನಲ್​​ ಸಿಕ್ಕಿದೆ.

ಪಾಪಿ ಪಾತಾಳಕ್ಕೆ ಹೋದ್ರು, ಕರ್ಮ ಅನ್ನೋದು ಬೇತಾಳನಂತೆ ಬೆನ್ನಿಗೆ ಅಂಟೇ ಇರುತ್ತೆ ಅನ್ನೋ ಮಾತಿದೆ. ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಬೇಲ್​​ ಮೇಲೆ ವಾಪಸ್​ ಬಂದ್ರೂ ದರ್ಶನ್​​ಗೆ ಕರ್ಮ ಅನ್ನೋದು ಬೇತಾಳನಂತೆ ಕಾಡುತ್ತಿದೆ.

ದರ್ಶನ್​​ ಜಾಮೀನು ರದ್ದಾಗುತ್ತಾ?

ಡಿಸೆಂಬರ್ 13ಕ್ಕೆ ಹೈಕೋರ್ಟ್ ಏಳು ಆರೋಪಿಗಳಿಗೆ ಜಾಮೀನು ನೀಡಿತ್ತು. ಈಗ ಏಳು ಆರೋಪಿಗಳು ಜಾಮೀನು ಪ್ರಶ್ನಿಸಲು ಪೊಲೀಸರು ಮುಂದಾಗಿದ್ದಾರೆ. ಪೊಲೀಸ್ ಇಲಾಖೆ ನಿರ್ಧಾರಕ್ಕೆ ಸರ್ಕಾರದಿಂದ ಗ್ರೀನ್​ ಸಿಗ್ನಲ್ ಸಿಕ್ಕಿದೆ. ಈಗಾಗಲೇ ಸುಪ್ರೀಂಕೋರ್ಟ್​ಗೆ ವಕೀಲರಾಗಿ ಅನಿಲ್ ಸಿ. ನಿಶಾನಿ ನೇಮಕ ಆಗಿದ್ದು, ರಾಜ್ಯ ಸರ್ಕಾರವೇ ಈ ಬಗ್ಗೆ ಆದೇಶ ಹೊರಡಿಸಿದೆ. ನಟ ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್, ಜಗದೀಶ್​ಗೆ ಹೊಸ ಸಂಕಷ್ಟ ಶುರುವಾಗಿದೆ.

ಇನ್ನು, ಮೇಲ್ಮನವಿ ಸಲ್ಲಿಸಲು ಅನುಮತಿ ಸಿಕ್ಕ ಬೆನ್ನಲ್ಲೆ ಪೊಲೀಸರು ಕಡತಗಳನ್ನು ಗೃಹ ಇಲಾಖೆಗೆ ರವಾನಿಸಿದ್ದಾರೆ. ಹೈಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಕೆ ಆಗಲಿದ್ದು, ಚಾರ್ಜ್​ಶೀಟ್​ ಕನ್ನಡದಿಂದ ಇಂಗ್ಲಿಷ್​ಗೆ ಭಾಷಾಂತರ ಮಾಡಲಾಗಿದೆ. ಇಂದು ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಕೆ ಆಗಲಿದೆ.

ಜಾಮೀನು ಪಡೆದು ಜಸ್ಟ್​​ ರಿಲೀಫ್​​ ಆಗಿರೋ ಹೊತ್ತಲ್ಲೇ ಸರ್ಕಾರ ಶಾಕ್​​ ಕೊಟ್ಟಿದೆ. ಸುಪ್ರೀಂಕೋರ್ಟ್​​​ನಲ್ಲಿ ಮೇಲ್ಮನವಿ ಸಲ್ಲಿಕೆ ಆಗಲಿದ್ದು, ಕೊಲೆ ಆರೋಪಿ ನಟ ದರ್ಶನ್​ ಎದೆಬಡಿತ ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ:ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ; ದರ್ಶನ್, ಪವಿತ್ರಗೌಡಗೆ ಮತ್ತೆ ಖೆಡ್ಡಾ ತೋಡಿದ ಪೊಲೀಸರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment