/newsfirstlive-kannada/media/post_attachments/wp-content/uploads/2024/10/Darshan-release-bellary-Jail.jpg)
ಬೆಂಗಳೂರು: ನಟ ದರ್ಶನ್​ಗೆ ಹೈಕೋರ್ಟ್ ಪೂರ್ಣ ಪ್ರಮಾಣದ ಜಾಮೀನು ನೀಡಿದೆ. ಜಾಮೀನು ಸಿಕ್ಕ ಖುಷಿಯಲ್ಲಿರೋ ನಟ ದರ್ಶನ್​​ಗೆ ಶಾಕಿಂಗ್​​ ನ್ಯೂಸ್​ ಒಂದಿದೆ. ಹೈಕೋರ್ಟ್​ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೊರೆ ಹೋಗಲು ಬೆಂಗಳೂರು ಪೊಲೀಸ್ರು ನಿರ್ಧಾರಕ್ಕೆ ಬಂದಿದ್ದಾರೆ. ಸುಪ್ರೀಂ ಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲು ಸಿದ್ಧರಾಗಿದ್ದು, ಗೃಹ ಇಲಾಖೆಯಿಂದ ಗ್ರೀನ್​ ಸಿಗ್ನಲ್​​ ಸಿಕ್ಕಿದೆ.
ಪಾಪಿ ಪಾತಾಳಕ್ಕೆ ಹೋದ್ರು, ಕರ್ಮ ಅನ್ನೋದು ಬೇತಾಳನಂತೆ ಬೆನ್ನಿಗೆ ಅಂಟೇ ಇರುತ್ತೆ ಅನ್ನೋ ಮಾತಿದೆ. ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಬೇಲ್​​ ಮೇಲೆ ವಾಪಸ್​ ಬಂದ್ರೂ ದರ್ಶನ್​​ಗೆ ಕರ್ಮ ಅನ್ನೋದು ಬೇತಾಳನಂತೆ ಕಾಡುತ್ತಿದೆ.
ದರ್ಶನ್​​ ಜಾಮೀನು ರದ್ದಾಗುತ್ತಾ?
ಡಿಸೆಂಬರ್ 13ಕ್ಕೆ ಹೈಕೋರ್ಟ್ ಏಳು ಆರೋಪಿಗಳಿಗೆ ಜಾಮೀನು ನೀಡಿತ್ತು. ಈಗ ಏಳು ಆರೋಪಿಗಳು ಜಾಮೀನು ಪ್ರಶ್ನಿಸಲು ಪೊಲೀಸರು ಮುಂದಾಗಿದ್ದಾರೆ. ಪೊಲೀಸ್ ಇಲಾಖೆ ನಿರ್ಧಾರಕ್ಕೆ ಸರ್ಕಾರದಿಂದ ಗ್ರೀನ್​ ಸಿಗ್ನಲ್ ಸಿಕ್ಕಿದೆ. ಈಗಾಗಲೇ ಸುಪ್ರೀಂಕೋರ್ಟ್​ಗೆ ವಕೀಲರಾಗಿ ಅನಿಲ್ ಸಿ. ನಿಶಾನಿ ನೇಮಕ ಆಗಿದ್ದು, ರಾಜ್ಯ ಸರ್ಕಾರವೇ ಈ ಬಗ್ಗೆ ಆದೇಶ ಹೊರಡಿಸಿದೆ. ನಟ ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್, ಜಗದೀಶ್​ಗೆ ಹೊಸ ಸಂಕಷ್ಟ ಶುರುವಾಗಿದೆ.
ಇನ್ನು, ಮೇಲ್ಮನವಿ ಸಲ್ಲಿಸಲು ಅನುಮತಿ ಸಿಕ್ಕ ಬೆನ್ನಲ್ಲೆ ಪೊಲೀಸರು ಕಡತಗಳನ್ನು ಗೃಹ ಇಲಾಖೆಗೆ ರವಾನಿಸಿದ್ದಾರೆ. ಹೈಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಕೆ ಆಗಲಿದ್ದು, ಚಾರ್ಜ್​ಶೀಟ್​ ಕನ್ನಡದಿಂದ ಇಂಗ್ಲಿಷ್​ಗೆ ಭಾಷಾಂತರ ಮಾಡಲಾಗಿದೆ. ಇಂದು ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಕೆ ಆಗಲಿದೆ.
ಜಾಮೀನು ಪಡೆದು ಜಸ್ಟ್​​ ರಿಲೀಫ್​​ ಆಗಿರೋ ಹೊತ್ತಲ್ಲೇ ಸರ್ಕಾರ ಶಾಕ್​​ ಕೊಟ್ಟಿದೆ. ಸುಪ್ರೀಂಕೋರ್ಟ್​​​ನಲ್ಲಿ ಮೇಲ್ಮನವಿ ಸಲ್ಲಿಕೆ ಆಗಲಿದ್ದು, ಕೊಲೆ ಆರೋಪಿ ನಟ ದರ್ಶನ್​ ಎದೆಬಡಿತ ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ:ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ; ದರ್ಶನ್, ಪವಿತ್ರಗೌಡಗೆ ಮತ್ತೆ ಖೆಡ್ಡಾ ತೋಡಿದ ಪೊಲೀಸರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us