ಸ್ಯಾಮ್​​, ಚೈತು ಡಿವೋರ್ಸ್​​ಗೆ ಮಾಜಿ CM ಪುತ್ರ ಕಾರಣ ಅನ್ನೋ ಕೇಸ್​ಗೆ ಟ್ವಿಸ್ಟ್​​; ನಟ ನಾಗಾರ್ಜುನ ಏನಂದ್ರು?

author-image
Ganesh Nachikethu
Updated On
‘ಮದುವೆ ನಂತರ ಆ ವಿಚಾರ ಗೊತ್ತಾಯ್ತು’- ನಾಗಚೈತನ್ಯ ದಾಂಪತ್ಯದ ಬಗ್ಗೆ ನಟಿ ಸಮಂತಾ ಏನಂದ್ರು?
Advertisment
  • ಒಂದು ಕಾಲದ ಟಾಲಿವುಡ್​​ನ ಸೂಪರ್​ ಜೋಡಿ ನಾಗಚೈತನ್ಯ, ಸಮಂತಾ
  • ಇಬ್ಬರು ಡಿವೋರ್ಸ್​ ಮಾಡಿಕೊಂಡು ಬರೋಬ್ಬರಿ 3 ವರ್ಷಗಳು ಕಳೆದಿವೆ!
  • ಈಗ ನಾಗಚೈತನ್ಯ, ಸಮಂತಾ ಡಿವೋರ್ಸ್​ ವಿಚಾರಕ್ಕೆ ರಾಜಕೀಯ ಬಣ್ಣ

ಒಂದು ಕಾಲದ ಟಾಲಿವುಡ್​​ನ ಸೂಪರ್​ ಜೋಡಿ ನಟ ನಾಗಚೈತನ್ಯ ಮತ್ತು ನಟಿ ಸಮಂತಾ. ಇವರು ಡಿವೋರ್ಸ್​ ಮಾಡಿಕೊಂಡು ಬರೋಬ್ಬರಿ 3 ವರ್ಷಗಳು ಕಳೆದಿವೆ. ಯಾವ ಕಾರಣಕ್ಕೆ ಇಬ್ಬರು ಸೆಪರೇಟ್​ ಆದ್ರೂ ಅನ್ನೋ ವಿಚಾರ ಇನ್ನೂ ಗೊತ್ತಿಲ್ಲ. ಸಮಂತಾಗೆ ನಾಗಚೈತನ್ಯ ಮಾತ್ರ ಸರಿಯಾದ ಆಯ್ಕೆ ಆಗಿರಲಿಲ್ಲ ಅನ್ನೋದು ಮಾತ್ರ ಟಾಲಿವುಡ್​ ಮಂದಿಯ ಅಭಿಪ್ರಾಯ.

ಇತ್ತ ನಾಗಚೈತನ್ಯ ನಟಿ ಶೋಭಿತಾ ಧೂಳಿಪಾಲ ಜತೆ 2ನೇ ಮದುವೆಗೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಆಪ್ತರ ಸಮ್ಮುಖದಲ್ಲಿ ಇಬ್ಬರ ಎಂಗೇಜ್ಮೆಂಟ್​ ಕೂಡ ಆಗಿದೆ. ಅತ್ತ ನಟಿ ಸಮಂತಾ ತನ್ನ ಸಿನಿ ಕರಿಯರ್​ನಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ. ವೆಬ್ ಸಿರೀಸ್, ಸಿನಿಮಾ, ರಿಯಾಲಿಟಿ ಶೋ ಎಂದು ಎಲ್ಲೆಡೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರ ಮಧ್ಯೆ ಸಮಂತಾ, ನಾಗಚೈತನ್ಯ ಬ್ರೇಕಪ್​ಗೆ ಮಾಜಿ ಸಿಎಂ ಕೆಸಿಆರ್​​ ಪುತ್ರ ಕೆಟಿಆರ್​ ಕಾರಣ ಎಂದು ಸಚಿವೆ ಕೊಂಡ ಸುರೇಖಾ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

ಬ್ರೇಕಪ್​ಗೆ ರಾಜಕೀಯ ಟ್ವಿಸ್ಟ್​​

ನಾಗ ಚೈತನ್ಯ, ಸಮಂತಾ ಡಿವೋರ್ಸ್​ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಸ್ಟಾರ್‌ ಜೋಡಿ ವಿಚ್ಛೇದನಕ್ಕೆ ಮಾಜಿ ಸಚಿವ ಕೆಟಿಆರ್ ಕಾರಣ ಎಂದು ಸಚಿವೆ ಕೊಂಡ ಸುರೇಖಾ ನೀಡಿರುವ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸುರೇಖಾ ಹೇಳಿಕೆಯನ್ನು ಟಾಲಿವುಡ್ ಹಿರಿಯ ನಟ ನಾಗಾರ್ಜುನ ಖಂಡಿಸಿದ್ದಾರೆ.

publive-image

ಹೇಳಿಕೆ ವಾಪಸ್​ ಪಡೆಯಿರಿ ಎಂದ ನಾಗ್​​

ರಾಜಕೀಯ ಏನೇ ಇರಲಿ, ನಮ್ಮ ಕುಟುಂಬವನ್ನು ಮಧ್ಯೆ ತರಬೇಡಿ. ಸಚಿವೆ ಸುರೇಖಾ ನೀಡಿರುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಮ್ಮ ಕುಟುಂಬವನ್ನು ರಾಜಕೀಯದಿಂದ ದೂರ ಇಡಿ. ಇವರು ನೀಡಿದ ಹೇಳಿಕೆ ಬೇಸ್​ಲೆಸ್​​, ಇದರಲ್ಲಿ ಯಾವುದೇ ಹುರುಳಿಲ್ಲ. ಸುರೇಖಾ ಅವರು ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್​ ಪಡೆಯಬೇಕು. ನಮಗೆ ಅವಮಾನ ಮಾಡಬೇಡಿ ಎಂದು ನಟ ನಾಗಾರ್ಜುನ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಬ್ರೇಕಪ್​ಗೆ ಅಸಲಿ ಕಾರಣವೇನು?

ಸ್ಯಾಮ್​​, ನಾಗ್​ ಮಧ್ಯೆ ಕೆಮೆಸ್ಟ್ರಿ ಚೆನ್ನಾಗಿತ್ತು. ಆದ್ರೂ ಈ ಜೋಡಿ ಡಿವೋರ್ಸ್​ ಮಾಡಿಕೊಂಡಿತ್ತು. ಮಗು ಮಾಡಿಕೊಳ್ಳುವ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರದ ಹೊರತಾಗಿ ಅಸಲಿ ಕಾರಣವೇನು? ಎಂದು ಎಲ್ಲೂ ರಿವೀಲ್​ ಆಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment