Advertisment

ಶೃಂಗೇರಿ ಕ್ಷೇತ್ರದಲ್ಲಿ ಕಾಡಾನೆ ದಾಳಿಯಿಂದ 10 ತಿಂಗಳಲ್ಲಿ 7 ಮಂದಿ ಸಾವು : ಇಂದು ಇಬ್ಬರ ಸಾವು, ರೊಚ್ಚಿಗೆದ್ದ ಜನರು ಮಾಡಿದ್ದೇನು?

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಈ ವರ್ಷದಲ್ಲಿ ಕಾಡಾನೆ ದಾಳಿಯಿಂದ 7 ಮಂದಿ ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ರಾಸುಗಳಿಗೆ ಮೇವು ತರಲು ಹೋಗಿದ್ದ ಅಣ್ಣ, ತಮ್ಮಂದಿರು ಇಬ್ಬರು ಸಾವನ್ನಪ್ಪಿದ್ದಾರೆ.

author-image
Chandramohan
ELEPHANT ATTACK ON FARMERS

ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಉಮೇಶ್ ಮತ್ತು ಹರೀಶ್‌

Advertisment
  • ಇಂದು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಉಮೇಶ್ ಮತ್ತು ಹರೀಶ್‌
  • ಶೃಂಗೇರಿ ಕ್ಷೇತ್ರದಲ್ಲಿ ಈ ವರ್ಷ ಇದುವರೆಗೂ ಕಾಡಾನೆ ದಾಳಿಯಿಂದ 7 ಮಂದಿ ಸಾವು
  • ಶೃಂಗೇರಿ ಕ್ಷೇತ್ರದಲ್ಲಿ ಅರಣ್ಯ ಇಲಾಖೆಯ ವಿರುದ್ಧ ರೊಚ್ಚಿಗೆದ್ದ ಜನರು
  • ರಸ್ತೆ ತಡೆ ನಡೆಸಿ ಜನರಿಂದ ತೀವ್ರ ಪ್ರತಿಭಟನೆ

ಜನವರಿಯಿಂದ ಇಲ್ಲಿಯವರೆಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಡಾನೆ ದಾಳಿಗೆ  7  ಮಂದಿ ಸಾವನ್ನಪ್ಪಿದ್ದಾರೆ.  ಕಳೆದ 1 ವರ್ಷದಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಕಾಡನೆ ದಾಳಿಗೆ ಬಲಿಯಾದವರು ಯಾಱರು ಅಂದರೇ,  ಉಮೇಶ್, ಎಲಿಯಾಸ್,  ವಿನೋದಾ ಬಾಯಿ, ಕವಿತಾ, ಸುಬ್ರಾಯಗೌಡ, ಉಮೇಶ್ , ಹರೀಶ್ . 
ಇಂದು ಬೆಳ್ಳಂ ಬೆಳಿಗ್ಗೆ  ಕೊಟ್ಟಿಗೆಗೆ ಸೊಪ್ಪು ತರಲು ಹೋಗಿದ್ದಾಗ ಕಾಡಾನೆ ದಾಳಿಯಿಂದ ಇಬ್ಬರು ಸಾವನ್ನಪ್ಪಿದ್ದಾರೆ. 
ಹರೀಶ್ (44) ಉಮೇಶ್ (40) ಮೃತ ದುರ್ದೈವಿಗಳು. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪದ ಕೆರೆಮನೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಹರೀಶ್ ಮತ್ತು ಉಮೇಶ್ ಸಾವನ್ನಪ್ಪಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  ಇದು ಕಾರ್ಕಳ ಫಾರೆಸ್ಟ್ ವ್ಯಾಪ್ತಿಗೆ ಸೇರುವ ಪ್ರದೇಶ.   ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  ಸ್ಥಳಕ್ಕೆ ಶೃಂಗೇರಿ ಪೊಲೀಸರು, ಅರಣ್ಯ ಅಧಿಕಾರಿಗಳ ಭೇಟಿ ನೀಡಿದ್ದಾರೆ. 
ಕಾಡಾನೆ ದಾಳಿಗೆ  ಮಲೆನಾಡಿನಲ್ಲಿ ಇಬ್ಬರು  ಸಾವನ್ನಪ್ಪಿದ ಬಳಿಕ ಮಲೆನಾಡಿನಲ್ಲಿ ಅರಣ್ಯ ಇಲಾಖೆಯ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ.  ಕೆರೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳೀಯರು  ಜಮಾವಣೆಗೊಂಡಿದ್ದಾರೆ.  ಅರಣ್ಯ ಇಲಾಖೆ, ಸರ್ಕಾರದ  ವಿರುದ್ದ ಜನರು ಆಕ್ರೋಶ  ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ  ಆಗಮಿಸಬೇಕೆಂದು ಜನರು ಪಟ್ಟು  ಹಿಡಿದಿದ್ದಾರೆ. ಮಲೆನಾಡಿನಲ್ಲಿ ನಿರಂತರ ಕಾಡಾನೆ ದಾಳಿ ನಡೆಸುತ್ತಿದ್ದರೂ ಅರಣ್ಯ  ಇಲಾಖೆ  ಕಾಡಾನೆಗಳ ಹಾವಳಿ ತಪ್ಪಿಸಲು ಸಂಪೂರ್ಣವಾಗಿ  ವಿಫಲವಾಗಿದೆ ಎಂದು  ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Advertisment

ELEPHANT ATTACK ON FARMERS02




ಬೆಳ್ಳಂಬೆಳಗ್ಗೆ ದನಗಳಿಗೆ ಸೊಪ್ಪು ತರಲು ಹೋಗಿದ್ದಾಗ ಆನೆದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟಿರುವ ಶವಗಳನ್ನು ಹೊರ ತರಲು  ಸ್ಥಳೀಯರು ಅಧಿಕಾರಿಗಳಿಗೆ ಅವಕಾಶ ಕೊಟ್ಟಿಲ್ಲ.  ಈವರೆಗೂ ಆನೆ ತುಳಿದ ಜಾಗದಲ್ಲೇ ಇಬ್ಬರ ಶವಗಳು ಇವೆ.  ಕಾಡಾನೆ ದಾಳಿಯಿಂದ‌‌ ಹರೀಶ್, ಉಮೇಶ್ ಮೃತಪಟ್ಟಿದ್ದಾರೆ.  ಸ್ಥಳಕ್ಕೆ ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ, ಮಾಜಿ ಶಾಸಕ ಡಿ ಎನ್ ಜೀವರಾಜ್ ಸೇರಿದಂತೆ ಹಲವರ ಭೇಟಿ  ನೀಡಿದ್ದಾರೆ.  ಸ್ಥಳಕ್ಕೆ ಶೃಂಗೇರಿ ಪೊಲೀಸ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

ELEPHANT ATTACK IN SHRINGERI
Advertisment
Advertisment
Advertisment