Advertisment

ಕರ್ನಾಟಕದ ಸಿಎಂ ಸ್ಥಾನದ ಬಿಕ್ಕಟ್ಟು ಬಗೆಹರಿಸಲು ಮುಹೂರ್ತ ನಿಗದಿ : ನವಂಬರ್‌ 29 ರಂದು ದೆಹಲಿಯಲ್ಲಿ ಹೈ ವೋಲ್ಟೇಜ್ ಸಭೆ ನಿಗದಿ

ಕರ್ನಾಟಕದ ಸಿಎಂ ಸ್ಥಾನದ ವಿವಾದ ಬಗೆಹರಿಸಲು ಕೊನೆಗೂ ಕಾಂಗ್ರೆಸ್ ಹೈಕಮ್ಯಾಂಡ್ ಎಂಟ್ರಿಯಾಗಿದೆ. ವಿವಾದ ಬಗೆಹರಿಸಲು ಮುಹೂರ್ತ ನಿಗದಿಪಡಿಸಿದೆ. ನವಂಬರ್ 29 ರ ಶನಿವಾರ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮ್ಯಾಂಡ್ ಹೈ ವೋಲ್ಟೇಜ್ ಸಭೆ ನಡೆಸಲು ನಿರ್ಧರಿಸಿದೆ. ಈ ಸಭೆಯಲ್ಲಿ ಸಿಎಂ ಸ್ಥಾನ ಯಾರಿಗೆ ಎಂಬ ನಿರ್ಧಾರವಾಗಲಿದೆ.

author-image
Chandramohan
CM AND DCM WATCHING EMPTY CHAIR

ನವಂಬರ್ 29 ರಂದು ದೆಹಲಿಯಲ್ಲಿ ಹೈ ವೋಲ್ಟೇಜ್ ಸಭೆ ನಿಗದಿ

Advertisment
  • ನವಂಬರ್ 29 ರಂದು ದೆಹಲಿಯಲ್ಲಿ ಹೈ ವೋಲ್ಟೇಜ್ ಸಭೆ ನಿಗದಿ

ಕರ್ನಾಟಕದಲ್ಲಿ ಈಗ ಸಿಎಂ ಸ್ಥಾನದ ಬಗ್ಗೆ ಚರ್ಚೆ ಆರಂಭವಾಗಿದೆ. ಸಿಎಂ ಸ್ಥಾನವನ್ನು ತಮಗೆ  ನೀಡಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಗಿಪಟ್ಟು  ಹಿಡಿದಿದ್ದಾರೆ.  ಸಿಎಂ ಸ್ಥಾನದಲ್ಲಿ ತಾವೇ ಮುಂದುವರಿಯಬೇಕೆಂದು ಹಾಲಿ ಸಿಎಂ ಸಿದ್ದರಾಮಯ್ಯ ಕೂಡ ಪಟ್ಟು ಹಿಡಿದಿದ್ದಾರೆ. ಈಗ ಈ ವಿವಾದವನ್ನು ಬಗೆಹರಿಸಲು ಕಾಂಗ್ರೆಸ್ ಹೈಕಮ್ಯಾಂಡ್ ಎಂಟ್ರಿಯಾಗಿದೆ.  ವಿವಾದ ಬಗೆಹರಿಸಲು ಕಾಂಗ್ರೆಸ್ ಹೈಕಮ್ಯಾಂಡ್ ಮುಹೂರ್ತ ನಿಗದಿ ಮಾಡಿದೆ.  ನವಂಬರ್‌ 29 ರ ಶನಿವಾರ ಈ ವಿವಾದವನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಗೆಹರಿಸಲಾಗುತ್ತೆ. 
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸಿಎಂ ಸ್ಥಾನದ ವಿವಾದವನ್ನು ಬಗೆಹರಿಸಲಾಗುತ್ತೆ. ಈ ಸಭೆಯಲ್ಲಿ ಭಾಗಿಯಾಗಲು ಸಿಎಂ ಮತ್ತು ಡಿಸಿಎಂ ಇಬ್ಬರಿಗೂ  ನವಂಬರ್  29ರ ಶನಿವಾರ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದೆ. 
ಈಗಾಗಲೇ ಸಿಎಂ ಸಿದ್ದರಾಮಯ್ಯ ಹೈಕಮ್ಯಾಂಡ್ ನಾಯಕರು ದೆಹಲಿಗೆ ಕರೆದರೇ, ದೆಹಲಿಗೆ ಹೋಗುವೆ ಎಂದು ಹೇಳಿದ್ದಾರೆ.  ಜೊತೆಗೆ ಹೈಕಮ್ಯಾಂಡ್ ತೀರ್ಮಾನಕ್ಕೆ ಬದ್ದವಾಗಿರುವುದಾಗಿಯೂ ಹೇಳಿದ್ದಾರೆ. 
ಇತ್ತ ಡಿಸಿಎಂ ಡಿಕೆಶಿ ಕೂಡ ಹೈಕಮ್ಯಾಂಡ್ ನನ್ನ ಹಿತ ಕಾಪಾಡಲಿದೆ ಎಂದು ನಿನ್ನೆ  ಬಹಿರಂಗವಾಗಿ ಹೇಳಿದ್ದಾರೆ. 

Advertisment


ಹೀಗಾಗಿ ನವಂಬರ್‌ 29 ರಂದು ದೆಹಲಿಯಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. 

CM SIDDARAMAIAH AND RAHUL GANDHI02

CM CHAIR CONTRAVERSY DECIDE ON NOVEMBER 29th in DELHI
Advertisment
Advertisment
Advertisment