‘ಜೀವ ಇಲ್ಲದಿದ್ದವರು ವೋಟ್ ಹಾಕಿದ್ರೆ ಜವಾಬ್ದಾರರು ಯಾರು?’- ಸಿಎಂ ಸಿದ್ದರಾಮಯ್ಯ

ಲೋಕಸಭೆ ಎಲೆಕ್ಷನ್​ನಲ್ಲಿ ನಾವು 16 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ನಮ್ಮ ಇಂಟರ್ನಲ್​ ಸರ್ವೇ ಹೇಳಿತ್ತು. ನಾವು ಗೆದ್ದಿರೋದು ಕೇವಲ 9 ಸ್ಥಾನ ಮಾತ್ರ. ರಾಹುಲ್ ಗಾಂಧಿ ಅವರು ದಾಖಲೆ ಇಟ್ಟುಕೊಂಡು ಎಲ್ಲ ಹೇಳಿದ್ದಾರೆ.

author-image
Bhimappa
Advertisment

ಕಳೆದ ಲೋಕಸಭೆ ಎಲೆಕ್ಷನ್​ನಲ್ಲಿ ನಾವು 16 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ನಮ್ಮ ಇಂಟರ್ನಲ್​ ಸರ್ವೇ ಹೇಳಿತ್ತು. ನಾವು ಗೆದ್ದಿರೋದು ಕೇವಲ 9 ಸ್ಥಾನ ಮಾತ್ರ. ರಾಹುಲ್ ಗಾಂಧಿ ಅವರು ದಾಖಲೆ ಇಟ್ಟುಕೊಂಡು ಎಲ್ಲ ಹೇಳಿದ್ದಾರೆ. ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗದ ದಾಖಲೆಗಳನ್ನು ನಾವು ಪ್ರಸ್ತಾಪ ಮಾಡಿರೋದು. ಒಂದು ರೂಮ್​ನಲ್ಲಿ 80 ಜನ ವಾಸ ಮಾಡೋಕೆ ಆಗುತ್ತಾ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ. 

ಆ ರೂಮ್​ನಲ್ಲಿ 80 ಜನ ಇದ್ದರು ಅವರು ವೋಟ್ ಹಾಕಿದ್ದಾರೆ. ಈ ಬಗ್ಗೆ ಸರ್ಚ್ ಮಾಡುತ್ತಿದ್ದೇವು. ಇದನ್ನು ಮಾಡೋವಷ್ಟರಲ್ಲಿ ಇದೆಲ್ಲಾ ಆಗಿದೆ. ಎಲೆಕ್ಷನ್​ಗಳಲ್ಲಿ ಇವಿಎಂ, ವೋಟರ್​ ಲಿಸ್ಟ್​ನಲ್ಲಿ ಮ್ಯಾನುಪ್ಲೆಷನ್ ನಡೆಯುತ್ತಿದೆ. ರಾಹುಲ್ ಗಾಂಧಿ ಹೇಳಿರೋದೆಲ್ಲ ನನಗೆ ನಿಜ ಅನಿಸುತ್ತದೆ. ಸತ್ತವರೆಲ್ಲಾ ವೋಟ್ ಹಾಕಿದ್ರೆ ಅದಕ್ಕೆ ಚುನಾವಣಾ ಆಯೋಗ ಜವಾಬ್ದಾರಿ ತಾನೇ?. ಸತ್ತವರನ್ನೆಲ್ಲಾ ವೋಟ್ ಮಾಡೋಕೆ ಯಾಕೆ ಬಿಟ್ಟರು? ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rahul Gandhi CM SIDDARAMAIAH DK Shivakumar Rahul Gandhi on election fraud
Advertisment