Advertisment

ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಮುಸುಕಿನ ಗುದ್ದಾಟ: ಪರಮೇಶ್ವರ್ ರಿಂದ ಹೊಸ ಬಾಣ ಪ್ರಯೋಗ

ಕಾಂಗ್ರೆಸ್ ಪಕ್ಷ, ಸರ್ಕಾರದೊಳಗೆ ಸಿಎಂ ಕುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಬಣ ಒಂದೆಡೆಯಾದರೇ, ದಲಿತ ಸಚಿವರ ಕ್ಯಾಂಪ್ ಮತ್ತೊಂದೆಡೆ. ಡಿಸಿಎಂ ಡಿಕೆಶಿ ಕೂಡ ಸಿಎಂ ಸ್ಥಾನ ತನಗೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಡಾ.ಜಿ.ಪರಮೇಶ್ವರ್ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.

author-image
Chandramohan
CM SIDDU AND DKS WATCHING CHAIR
Advertisment


ಈ ರಾಜ್ಯ  ಸರ್ಕಾರಕ್ಕೆ ಆಯಸ್ಸಿನ ಆತಂಕ ಏನಾದ್ರೂ ಕಾಡ್ತಿದ್ಯಾ? ನವೆಂಬರ್​ ಏಣಿಗೆ ಒಂದು ಮೆಟ್ಟಿಲು ಬಾಕಿ ಇದೆ.. ಕಾಂಗ್ರೆಸ್‌ ಸರ್ಕಾರದಲ್ಲಿ ನಿತ್ಯವೂ ಸಂಚಲನದ ಸುದ್ದಿಗಳು ಪ್ರಕಟ ಆಗ್ತಾನೇ ಇವೆ.. ಅದರಲ್ಲೂ ನಾಯಕತ್ವ ಬಗ್ಗೆ ಡೆಲ್ಲಿ ಅಂಗಳದಿಂದಲೇ ಉತ್ತರ ಸಿಗುವ ಕಾಲವಂತು ಸನ್ನಿಹಿತವಾಗಿದೆ.. ಹೀಗಾಗಿ ಹಗಲು-ರಾತ್ರಿಗಳು ಒಂದಾಗಿವೆ.. ಸರಣಿ ಮೀಟಿಂಗ್​ಗಳು ಈ ಕುತೂಹಲವನ್ನ ಹೆಚ್ಚಿಸಿದೆ..
ಎಲ್ಲರೂ ಹೇಳುವ ನವೆಂಬರ್​​ಗೆ ನಾಳೆ ಒಂದೇ ದಿನ ಬಾಕಿ.. ರಾಜ್ಯದಲ್ಲಿ ನಾಯಕತ್ವ ಗದ್ದಲ ಡೆಲ್ಲಿ ಅಂಗಳಕ್ಕೂ ಶಿಫ್ಟ್​​ ಆಗಿ ಸದ್ಯಕ್ಕೆ ಸಾಫ್ಟ್​​ ಆಗಿದೆ.. ಆದ್ರೂ ಬೂಬಿಮುಚ್ಚಿಕೊಂಡಿದೆ.. ಸಿದ್ದರಾಮಯ್ಯ ಪರ ನಿಂತ ಬಣ, ಕುರ್ಚಿ ಅಲ್ಲಾಡದಂತೆ ಶತಾಯಗತಾಯ ಪ್ರಯತ್ನ ನಡೆಸ್ತಿದೆ.. ಸಿದ್ದು ಆಪ್ತ ಪಡೆ, ಊಟ-ತಿಂಡಿ-ಚಹಾ, ಕಾಫಿ ಹೆಸರಲ್ಲಿ ಗೌಪ್ಯ ಸಭೆಗಳ ಮೇಲೆ ನಡೆಸ್ತಿದ್ದಾರೆ.. ಆದ್ರೆ, ಡಿಸಿಎಂ ಡಿಕೆಶಿ ಮಾತ್ರ ಸೈಲೆಂಟಾಗಿ ಒಂಟಿಯಾಗೇ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

ಸರಣಿ ಅಸ್ತ್ರಗಳನ್ನ ಪ್ರಯೋಗಕ್ಕಿಳಿಸಿದ ಸಿಎಂ ಕ್ಯಾಂಪ್​! 
ಹಿರಿತನ, ಅನುಭವ, ದಲಿತ ದಾಳ ಉರುಳಿಸಿದ ಪರಂ! 
ತಂತ್ರಕ್ಕೆ ಪ್ರತಿತಂತ್ರ.. ದಾಳಕ್ಕೆ ಪ್ರತಿದಾಳ.. ಸವಾಲಿಗೆ ಸವಾಲು.. ಎರಡು ಬಣಗಳಿಂದ ಬರಿದಾಗದ ರಣವ್ಯೂಗಳು ರಚನೆ ಆಗಿ ಪಟ್ಟದಾಟಕ್ಕೆ ಪೈಪೋಟಿ ಅಗಣಿತವಾಗಿ ಮಾರ್ಪಟ್ಟಿದೆ.. ಶ್ರಮಕ್ಕೆ ಪ್ರತಿಫಲ ಕೇಳ್ತಿರುವ ಡಿಕೆಶಿ ಕ್ಯಾಂಪ್​ಗೆ ಡಾ.ಜಿ.ಪರಮೇಶ್ವರ್​​, ಸೀನಿಯಾರಿಟಿ ಕ್ಲೈಮ್ ದಾಳ ಉರುಳಿಸಿದ್ದಾರೆ.. 2013ರಲ್ಲಿ ರಾಜಕೀಯದ ಚಿತ್ರಣವೇ ಬದಲಿಸುವ ಶ್ರಮ ಹಾಕಿದ್ದ ತಮಗೂ ಪ್ರತಿಫಲ ಬೇಕಲ್ವಾ ಅಂತ ಪ್ರಶ್ನೆ ಇಟ್ಟಿದ್ದಾರೆ.. ಡಿಕೆಗೆ ಪ್ರತಿಸ್ಪರ್ಧಿಯಾಗಿ ಅಖಾಡಕ್ಕೆ ಇಳಿಯಲು ಸೆಡ್ಡು ಹೊಡೆದು ನಿಂತಿದ್ದಾರೆ ಪರಮೇಶ್ವರ್..


ಪರಂ ಸೀನಿಯಾರಿಟಿ ಕ್ಲೈಮ್!
2013ರಲ್ಲೇ ಕಾಂಗ್ರೆಸ್​​​ನ್ನ ಅಧಿಕಾರಕ್ಕೆ ತಂದಿರೋರಲ್ಲಿ ಮುಂಚೂಣಿಗ
ಸುದೀರ್ಘ 8 ವರ್ಷ ಕೆಪಿಸಿಸಿ ಸಾರಥ್ಯವಹಿಸಿ ಸಮರ್ಥ ನಿರ್ವಹಣೆ
ಸಿಎಂ ಆಗುವ ಅವಕಾಶವಿದ್ದರೂ ಸೋತ ಕಾರಣ ಕ್ಲೈಮ್​​ ಮಾಡ್ಲಿಲ್ಲ
ಡಿಕೆಶಿಗಿಂತ ಮೊದಲು ಸರ್ಕಾರ ತಂದ ತಮಗೆ, ಅವಕಾಶ ಸಿಗಬೇಕು
ಒಂದು ಅವಕಾಶ ಕೊಟ್ಟರೆ ಸನ್ನಿವೇಶ ಬಂದ್ರೆ ಸಮರ್ಥವಾಗಿ ಕೆಲಸ 
ಹೈಕಮಾಂಡ್ ಭೇಟಿ ವೇಳೆ ದಲಿತಾಸ್ತ್ರ ಪ್ರಯೋಗಕ್ಕೂ ಪರಂ ಪ್ಲಾನ್​​

 2013ರಲ್ಲೇ ಪಕ್ಷವನ್ನ ಅಧಿಕಾರಕ್ಕೆ ತಂದಿರೋದನ್ನ ಯಾರು ನಿರಾಕರಿಸಲಾಗದು.. 8 ವರ್ಷ ಸುದೀರ್ಘ ಅವಧಿಗೆ ಕೆಪಿಸಿಸಿ ಸಾರಥ್ಯ ವಹಿಸಿ ಸಮರ್ಥವಾಗಿ ಮುನ್ನಡೆಸಿದ್ದೇನೆ.. ಸಿಎಂ ಆಗುವ ಅವಕಾಶ ಇದ್ದರೂ ಸೋತ ಕಾರಣ ಅಂದಿನ ಸನ್ನಿವೇಶ, ತಮ್ಮನ್ನ ಹಿಂದಕ್ಕೆ ದೂಕಿದೆ.. ಡಿಕೆಶಿಗಿಂತ ಮೊದಲು 2013ರಲ್ಲೇ ಸರ್ಕಾರ ತಂದ ತಮಗೆ, ಹೈಕಮಾಂಡ್ ಅವಕಾಶ ಕೊಡಬೇಕು ಅನ್ನೋ ಕ್ಲೈಮ್​​​ನ್ನ ಪರಂ ಮುಂದಿಡ್ತಿದ್ದಾರೆ.. ನನಗೂ ಒಂದು ಅವಕಾಶ ಕೊಟ್ಟರೆ ಸನ್ನಿವೇಶ ಬಂದ್ರೆ ಸಮರ್ಥವಾಗಿ ನಿರ್ವಹಿಸುವುದಾಗಿ ಪರಮೇಶ್ವರ್​​​ ಮನದಾಳ, ಮರುಗಿದ ದನಿಯಲ್ಲಿ ಆಪ್ತರ ಬಳಿ ಪ್ರಸ್ತಾಪಿಸಿದೆ.. ಹೈಕಮಾಂಡ್ ಭೇಟಿ ವೇಳೆ ದಲಿತಾಸ್ತ್ರ ಪ್ರಯೋಗಕ್ಕೂ ಪರಮೇಶ್ವರ್​​​ ಮುಂದಾಗಿದ್ದಾರೆ..

ನ.7ರಂದು ರಾಜಣ್ಣ ಮನೇಲಿ ಮತ್ತೆ ಸಿಎಂ ಔತಣಕೂಟ!
ಕಾಂಗ್ರೆಸ್​ನಲ್ಲಿ ತೀವ್ರ ಕುತೂಹಲ ಕೆರಳಿಸಿದ ಸಿಎಂ ನಡೆ!
ಸಿದ್ದರಾಮಯ್ಯ ನಡೆ ಯಾರ ಊಹೆಗೂ ನಿಲುಕದ ದಾಳ ಉರುಳಿದೆ.. ರಾಜ್ಯದಲ್ಲಿ ಡಿನ್ನರ್​​​ ಪಾಲಿಟಿಕ್ಸ್​​ ಹೊಸದಲ್ಲ.. ಆದ್ರೆ, ಸಿಎಂ ಹೋಗ್ತಿರುವ ಔತಣಕೂಟವನ್ನ ರಾಜ್ಯ ರಾಜಕಾರಣವೇ ಬೆಚ್ಚಿಬಿದ್ದು ಬೆರಗಿನಿಂದ ಕಾಯ್ತಿದೆ.. ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗಿ ಸಂಪುಟದಿಂದ ಹೊರಬಿದ್ದ ಮಾಜಿ ಸಚಿವ ಕೆ.ಎನ್‌.ರಾಜಣ್ಣ ನಿವಾಸಕ್ಕೆ ನವೆಂಬರ್​​​ 7ರಂದು ಸಿಎಂ ಹೋಗ್ತಿರೋದು ಅಚ್ಚರಿ ಮತ್ತು ಕುತೂಹಲ.. ಹೈಕಮಾಂಡ್‌ನಿಂದ ಕ್ರಮ ಎದುರಿಸಿದ ನಾಯಕನ ಮನೆಗೆ ಸಿಎಂ ಊಟಕ್ಕೆ ತೆರಳ್ತಿರೋದು ಹತ್ತಾರು ರೀತಿಯಲ್ಲಿ ವ್ಯಾಖ್ಯಾನಿಸಲಾಗ್ತಿದೆ.. 

Advertisment

ಆದ್ರೆ, ಗೃಹ ಸಚಿವ ಪರಮೇಶ್ವರ್​​ ಮಾತ್ರ ರಾಜಣ್ಣ ಮನೆ ಊಟಕ್ಕೆ ಸಜ್ಜಾಗಿದ್ದಾರೆ.. ಅದಕ್ಕೂ ಮೊದಲೇ ಮಹದೇವಪ್ಪ ಕಚೇರಿಯಲ್ಲಿ ಮುದ್ದೆ ಸವಿದಿದ್ದಾರೆ.. ಇನ್ನು, ದಲಿತ ಸಚಿವರ ಜೊತೆ ಸಿಎಂ ಸಭೆ ನಡೆಸಿಲ್ಲ ಅಂತ ಸ್ಪಷ್ಟನೆ ಕೊಟ್ರು.. 

DALIT CM FACES OF KARNATAKA



ಡಿಕೆಶಿ ಡೆಲ್ಲಿ ರೌಂಡ್ಸ್​​ನಿಂದ ಸಿಎಂ ಸಿದ್ದು ಕ್ಯಾಂಪ್​​ ಅಲರ್ಟ್​
ಹಿರಿಯ ಸಚಿವರಿಂದ ನಡೀತು ‘ಮಿಡ್​ ನೈಟ್​’ ಮೀಟಿಂಗ್!
ಡಿಕೆಶಿ ಡೆಲ್ಲಿಗೆ ಹೋಗಿ ಮರಳಿದ ಬಳಿಕ ಸಿದ್ದರಾಮಯ್ಯ ಕ್ಯಾಂಪ್​​​ ಫುಲ್​ ಅಲರ್ಟ್​​ ಮೂಡ್​ನಲ್ಲಿದೆ.. ನವೆಂಬರ್ ಕ್ರಾಂತಿ ಚರ್ಚೆ ನಡುವೆ ಸರಣಿ ಸಭೆ ನಡೀತಿದ್ದು, ನಿನ್ನೆ ಹಿರಿಯ ಸಚಿವರ ಮಿಡ್ ನೈಟ್ ಮೀಟಿಂಗ್, ಮತ್ತಷ್ಟು ಮಸಾಲ ಸಿಕ್ಕಂತಾಗಿದೆ.. ಗೃಹ ಸಚಿವ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ನಡೆದ ಮೀಟಿಂಗ್​ನಲ್ಲಿ ದಿನೇಶ್ ಗುಂಡೂರಾವ್, ಎಂ.ಬಿ ಪಾಟೀಲ್, ಮಹದೇವಪ್ಪ ಇದ್ರು.. ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಸುದೀರ್ಘ ಚರ್ಚೆ ನಡೆದಿದೆ.. ದಲಿತ ಸಿಎಂ ಕೂಗು ಬೆನ್ನಲ್ಲೆ ಪರಮೇಶ್ವರ್​​, ಲಿಂಗಾಯತ ನಾಯಕರ ಬೆಂಬಲ ಬಯಸಿದಂತೆ ಕಾಣಿಸ್ತಿದೆ.. ಒಟ್ಟಾರೆ, ಸರಣಿ ಸಭೆಗಳು ಮಾತ್ರ ಕುತೂಹಲ ಮೂಡಿಸ್ತಿದ್ದು, ಡಿಕೆಶಿ ಕ್ಯಾಂಪ್​​​ ಮೌನಕ್ಕೆ ಬಿದ್ದಿದೆ..


ಹರೀಶ್​ ಕಾಕೋಳ್​, ಪೊಲಿಟಿಕಲ್​ ಬ್ಯೂರೋ, ನ್ಯೂಸ್​ಫಸ್ಟ್​

CM CHAIR FIGHTING IN CONGRESS
Advertisment
Advertisment
Advertisment