ಯಾರ ಮಾತಿಗೂ ಕಿಮ್ಮತ್ತು ಇಲ್ಲ.. ನವೆಂಬರ್​ ಕ್ರಾಂತಿ ಬಗ್ಗೆ DK ಶಿವಕುಮಾರ್ ಸ್ಫೋಟಕ ಹೇಳಿಕೆ

ಸರ್ಕಾರದ ಪ್ರತಿ ಕಟ್ಟಡದಲ್ಲಿ ಕನಿಷ್ಠ 60 ಶೇಕಡವಾರು ಇರುವ ಕನ್ನಡದ ಫಲಕ ಹಾಕಬೇಕು ಎಂದು ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಪರ ಅನೇಕ ಆದೇಶಗಳು ಬರುತ್ತವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

author-image
Bhimappa
Advertisment

ನಮ್ಮದೇ ಆದ ಕನ್ನಡ ಬಾವುಟ, ಗೀತೆ ಇದೆ. ತಾಯಿ ಭುವನೇಶ್ವರಿ ತಾಯಿಯ ವಿಗ್ರಹವನ್ನು ಕೂಡ ಸ್ಥಾಪನೆ ಮಾಡಿದ್ದೇವೆ. ಸರ್ಕಾರದ ಪ್ರತಿ ಕಟ್ಟಡದಲ್ಲಿ ಕನಿಷ್ಠ 60 ಶೇಕಡವಾರು ಇರುವ ಕನ್ನಡದ ಫಲಕ ಹಾಕಬೇಕು ಎಂದು ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಪರ ಅನೇಕ ಆದೇಶಗಳು ಬರುತ್ತವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. 

ಇದೇ ವೇಳೆ ನವೆಂಬರ್ ಕ್ರಾಂತಿ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಇದರಲ್ಲಿ ಯಾರು ಮಾತನಾಡಬಾರದು. ನಾನು ಮತ್ತು ಮುಖ್ಯಮಂತ್ರಿಗಳು ಏನು ಮಾತನಾಡಿದ್ದೇವೆ ಅದು ಮಾತ್ರ ಮಾತು. ಅದು ಬಿಟ್ಟರೇ ಯಾರ ಮಾತಿಗೂ ಇಲ್ಲಿ ಕಿಮ್ಮತ್ತು ಇಲ್ಲ. ಒಮ್ಮತದಿಂದ ಇದ್ದಿದ್ದಕ್ಕೆ 135 ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ಹೇಳಿದ್ದಾರೆ.   

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH DK Shivakumar
Advertisment