ಮುನಿರತ್ನನ ಫ್ರೀಯಾಗಿ ಬಿಟ್ಟು ಬಿಡೋಕೆ ಆಗುತ್ತಾ..? ಮಾಜಿ ಸಂಸದ DK ಸುರೇಶ್

ಕ್ಲೀನ್ ಚೀಟ್ ಸಿಕ್ಕ ಬಳಿಕ ಮಾತನಾಡಿದ್ದ ಮುನಿರತ್ನ ಅವರು ಡಿ.ಕೆ ಸುರೇಶ್ ಅವರು ಸೋತ ಮೇಲೆ ನನಗೆ ಸಮಸ್ಯೆಗಳು ಬರಲು ಶುರುವಾದವು ಎಂದಿದ್ದರು. ಸದ್ಯ ಈ ಸಂಬಂಧ ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಮಾತನಾಡಿದ್ದಾರೆ.

author-image
Bhimappa
Advertisment

ಆರ್​​ಎಂಸಿ ಯಾರ್ಡ್​ ಮಹಿಳೆ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರಿಗೆ ಕ್ಲೀನ್ ಚೀಟ್ ಸಿಕ್ಕಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಎಸ್​ಐಟಿ ಬಿ ರಿಪೋರ್ಟ್​ ಸಲ್ಲಿಕೆ ಮಾಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ. ಕ್ಲೀನ್ ಚೀಟ್ ಸಿಕ್ಕ ಬಳಿಕ ಮಾತನಾಡಿದ್ದ ಮುನಿರತ್ನ ಅವರು ಡಿ.ಕೆ ಸುರೇಶ್ ಅವರು ಸೋತ ಮೇಲೆ ನನಗೆ ಸಮಸ್ಯೆಗಳು ಬರಲು ಶುರುವಾದವು ಎಂದಿದ್ದರು. ಸದ್ಯ ಈ ಸಂಬಂಧ ಡಿ.ಕೆ ಸುರೇಶ್ ಅವರು ಮಾತನಾಡಿದ್ದಾರೆ. 

ಯಾರಿಗೆ ಎಂಎಲ್​ಎ ಆಗಬೇಕು ಎನ್ನುವ ಆಸೆ ಇದೆಯೋ, ಇಲ್ವೋ ಗೊತ್ತಿಲ್ಲ. ಆದರೆ ಮುನಿರತ್ನಗೆ ಆಸೆ ಇದೆ ಅಲ್ವಾ?. ಹಾಗಾಂತ ಮುನಿರತ್ನನ ಫ್ರೀಯಾಗಿ ಬಿಟ್ಟು ಬಿಡೋಕೆ ಆಗುತ್ತಾ?. ಅಪಪ್ರಚಾರ, ಅವ್ಯವಹಾರ, ಅಚಾತುರ್ಯಗಳನ್ನು ಮಾಡಿದ್ದಾರಲ್ಲ, ಆ ಬಗ್ಗೆ ಯಾರು ಮಾತನಾಡಬಾರದಾ?. ಒಕ್ಕಲಿಗರ ತಾಯಿನ, ಹೆಂಡತಿನ ಕರೀತಾರೆ, ದಲಿತರನ್ನ ಹೀಯಾಳಿಸಿ ಮಾತನಾಡಿಸ್ತಾರೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಹೇಳಿದ್ದಾರೆ.   

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DK SURESH MLC S RAVI APEX BANK KMF MLA Munirathna
Advertisment