ಮೂರು ತಿಂಗಳಿಂದ ಬಾರದ ಗೃಹಲಕ್ಷ್ಮಿ ಯೋಜನೆ ಹಣ! ಫಲಾನುಭವಿಗಳು ಕಂಗಾಲು, ವಿಪಕ್ಷ ಟೀಕೆ

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕಳೆದ 3 ತಿಂಗಳಿನಿಂದ ಬಂದಿಲ್ಲ. ಇದರಿಂದ ಫಲಾನುಭವಿ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿವೆ.

author-image
Chandramohan
GRUHALAXMI SCHEME 022

3 ತಿಂಗಳಿನಿಂದ ಬಾರದ ಗೃಹಲಕ್ಷ್ಮಿ ಯೋಜನೆ ಹಣ!

Advertisment
  • 3 ತಿಂಗಳಿನಿಂದ ಬಾರದ ಗೃಹಲಕ್ಷ್ಮಿ ಯೋಜನೆ ಹಣ!
  • ಫಲಾನುಭವಿ ಮಹಿಳೆಯರು ಕಂಗಾಲು, ವಿಪಕ್ಷಗಳಿಂದ ಟೀಕೆ

ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಸರಿಯಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಬಂದಿಲ್ಲ.  ಇದು ರಾಜ್ಯದ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರ ಅಸಮಾಧಾನಕ್ಕೆ ಕಾರಣವಾಗಿದೆ.  ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು ಮನೆಯ ಖರ್ಚುಗೆ ಬಳಸುವ ಮಹಿಳೆಯರೂ ಇದ್ದಾರೆ. 
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡದೇ ಇರೋದು ಇಂದು ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಈ ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. 
ಇನ್ನೂ   ಬೆಳಗಾವಿಯಲ್ಲಿ  ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದು,  ಗೃಹ ಲಕ್ಷ್ಮಿ ಹಣ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ.  ಯಾವ ಲಕ್ಷ್ಮಿ ಮನೆಗೆ ಐದು ಸಾವಿರ ಕೋಟಿ ಹಣ ಹೋಗಿದೆ ಎಂದು ಸರ್ಕಾರ ಹೇಳಲಿ. ಬಿಜೆಪಿ ಇಂದಿನಿಂದಲೇ ಈ ಸಂಬಂಧ ಹೋರಾಟ ನಡೆಸಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.  
ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ.  ಗೃಹಲಕ್ಷ್ಮಿ ಹಣ ಕೊಡುತ್ತಿದ್ದಾರೋ ಬಿಡುತ್ತಿದ್ದಾರೋ ಗೊತ್ತಿಲ್ಲ. ಸರ್ಕಾರ ಬಂದ ನಂತರ ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಡೆದಿದೆ. ಅದರ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ. 2800 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಗ್ಯಾರಂಟಿ ಕೊಟ್ಟು ರೈತರ ಪರಿಸ್ಥಿತಿ ಎಲ್ಲಿಗೆ ತಂದಿಟ್ಟಿದ್ದಾರೆ? ಸಹಕಾರಿ ಬ್ಯಾಂಕುಗಳಲ್ಲಿ 32 ಲಕ್ಷ ಕುಟುಂಬಕ್ಕೆ 22 ಕೋಟಿ ಸಾಲ ಕೊಡ್ತಿವಿ ಅಂದ್ರು ಎಲ್ಲಿ ಕೊಟ್ಟರು? ಹೊಸದಾಗಿ ಸಾಲ ಕೊಟ್ಟಿಲ್ಲ ಇವರು. ರೈತರ ಪರಿಸ್ಥಿತಿ ಏನಾಗಬೇಕು? ನನ್ನ ಚಿಂತೆ ಇದು. ಗೃಹಲಕ್ಷ್ಮಿ ಹಣ ಒಟ್ಟಿಗೆ ಚುನಾವಣೆ ಬಂದಾಗ ಕೊಡ್ತಾರೆ. ಒಟ್ಟಿಗೆ ಕೊಟ್ಟಾಗ ಮಾತ್ರ ಜನ ನೆನಪು ಇಟ್ಟಿಕೊಳ್ತಾರೆ ಇವರನ್ನ. ಮೂರು ತಿಂಗಳಿಗೆ ಒಮ್ಮೆ ಕೊಡುತ್ತಾರೆ, ಆಗ ಓಟ್ ಹಾಕ್ತಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 
ಬೆಳಗಾವಿಯಲ್ಲಿ ಡಿ.ಕೆ.ಶಿವಕುಮಾರ್‌ ಕೂಡ ವಿರೋಧ ಪಕ್ಷಗಳ ಆಗ್ರಹದ ಹಿನ್ನಲೆಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.   ಒಂದೆರಡು ತಿಂಗಳು ವಿಳಂಬ ಆಗಿದೆ. ಹಣ ಹಾಕಲಾಗುತ್ತೆ ಎಂದು ಡಿಕೆಶಿ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗೆ ನಮ್ಮ ಬದ್ಧತೆ ಇದೆ. ಜಿಎಸ್ ಟಿ ಕಟ್ ಮಾಡಿದ ಕಾರಣ 1 ರಿಂದ 15 ಸಾವಿರ ಕೋಟಿ ನಷ್ಟವಾಗಿದೆ. ಕೆಲವು ವಿಚಾರದಲ್ಲಿ ವಿಳಂಬವಾಗಬಹುದು. ನೂರಾರು ಕೋಟಿ ರೂ. ಕೊಟ್ಟಿದ್ದೇವೆ.  ಒಂದೆರಡು ತಿಂಗಳು ಏನೂ ತೊಂದರೆಯಾಗುವುದಿಲ್ಲ. ಬಿಜೆಪಿ ಅವರು ಬೇರೆ ರಾಜ್ಯದಲ್ಲಿ ಮಾತಕೊಟ್ಟಿದ್ದನ್ನ ಮೊದಲು ಬಿಡುಗಡೆ ಮಾಡಿಸಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಗೃಹಲಕ್ಷ್ಮೀಯರೇ.. ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ.. ಗೊಂದಲವಿದ್ರೆ ಪರಿಹಾರ ಇಲ್ಲಿದೆ




ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ಹೆಚ್ ಎಂ ರೇವಣ್ಣ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.  ಸರ್ಕಾರ ಬಂದ ಮೊದಲ‌ ದಿನವೇ ಐದು ಗ್ಯಾರಂಟಿಗಳನ್ನ ಅನುಷ್ಠಾನ ಮಾಡಿದ್ದೇವೆ. ಇಲ್ಲಿವರೆಗೂ ಕೊಡುತ್ತಾ ಬಂದಿದ್ದೇವೆ. ಎರಡು ಮೂರು ತಿಂಗಳಿಗೆ ಕೊಡುತ್ತಿದ್ದೇವೆ . ಕೆಲವರಿಗೆ ತೊಂದರೆಯಾಗಿದೆ. ಜಿಎಸ್ ಟಿ ,ಐಟಿ ಪೇಯರ್ಸ್ ಇದ್ರೆ ಅಥವಾ ತಾತ್ಕಾಲಿಕವಾಗಿ ಏನು ಒಂದು ಪರ್ಚೇಸ್ ಮಾಡಿದಾಗ ಜೆಎಸ್ ಟಿ ಯಿಂದ ಸಮಸ್ಯೆ ಆಗಿರುತ್ತೆ. ಅದನ್ನು ಕೂಡ ಕ್ಲಿಯರ್ ಮಾಡಿದ್ದೇವೆ. ಆಗಸ್ಟ್ ವರೆಗೂ ಕೊಟ್ಟಿದ್ದೇವೆ, ದೇಶದಲ್ಲಿ ಯೋಜನೆಗಳನ್ನ  ಘೋಷಣೆ ಮಾಡಿದ್ರು ಇನ್ನೂ ಕೊಟ್ಟಿಲ್ಲ,  ನಾವು ನುಡಿದಂತೆ ನಡೆದಿದ್ದೇವೆ. ನೈಜ ಫಲಾನುಭವಿಗಳಿಗೆ ಕೊಡುತ್ತಿದ್ದೇವೆ ಎಂದು ಎಚ್‌.ಎಂ.ರೇವಣ್ಣ ಹೇಳಿದ್ದಾರೆ. 

ಗೃಹಲಕ್ಷ್ಮಿಗೆ ಗ್ರಹಣ, ಅಖಾಡಕ್ಕಿಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.. 15 ದಿನದಲ್ಲಿ ಬ್ಯಾಂಕ್​ ಅಕೌಂಟ್​ಗೆ ಹಣ ಜಮಾ ಆಗುತ್ತಾ?



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gruhalaxmi scheme
Advertisment