Advertisment

ಸಿದ್ದರಾಮಯ್ಯ ಉತ್ತರಾಧಿಕಾರಿ ಯಾರು..? DK ಶಿವಕುಮಾರ್ ಪರ ಬ್ಯಾಟ್​ ಬೀಸಿದ ಡಾ.ಜಿ ಪರಮೇಶ್ವರ್​

ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್​ ಭೇಟಿ ಬಗ್ಗೆ ಮಾತನಾಡಿದ್ದೇ ತಡ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದು ಅಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಭೇಟಿಗೆ ಕಾದು ಕುಳಿತ್ತಿದ್ದಾರೆ.

author-image
Bhimappa
Advertisment

ರಾಜ್ಯದಲ್ಲಿ ಸಂಪುಟ ಪುನರ್ ರಚನೆ ಹಾಗೂ ಭವಿಷ್ಯದಲ್ಲಿ ಸಿದ್ದರಾಮಯ್ಯ ಉತ್ತರಾಧಿಕಾರಿ ಯಾರು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್​ ಭೇಟಿ ಬಗ್ಗೆ ಮಾತನಾಡಿದ್ದೇ ತಡ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದು ಅಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಭೇಟಿಗೆ ಕಾದು ಕುಳಿತ್ತಿದ್ದಾರೆ. ಈ ಎಲ್ಲದರ ಮಧ್ಯೆ ಡಿ.ಕೆ ಶಿವಕುಮಾರ್ ಪರ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಮಾತನಾಡಿದ್ದಾರೆ. 

Advertisment

ಕಾಂಗ್ರೆಸ್​ನಲ್ಲಿ ಎಲ್ಲ ತೀರ್ಮಾನ ಮಾಡೋದು ಹೈಕಮಾಂಡ್. ಬಿಹಾರದ ಎಲೆಕ್ಷನ್ ನಡೆಯುತ್ತಿದೆ. ಇದು ಆದ ಮೇಲೆ ಕರ್ನಾಟಕದ ಬಗ್ಗೆ ವಿಶ್ಲೇಷಣೆ ಮಾಡುತ್ತಾರೆ. ಅವಶ್ಯಕತೆ ಇದ್ದರೇ ಅವರೇ ಬದಲಾವಣೆ ಮಾಡುತ್ತಾರೆ. ಡಿ.ಕೆ ಶಿವಕುಮಾರ್ ಬಗ್ಗೆ ಹೇಳುವುದಕ್ಕೆ ನನಗೆ ಸಾಮರ್ಥ್ಯ ಇಲ್ಲ. ಅವರು ನಮ್ಮ ನಾಯಕರು, ಅಧ್ಯಕ್ಷರು ಮತ್ತು ಸಮರ್ಥರಿದ್ದಾರೆ. ಶಿವಕುಮಾರ್​ಗೆ ಕಂಪೇರ್​ ಮಾಡೋದಕ್ಕೆ ಯಾರಿದ್ದಾರೆ ಈಗ?. ಅಷ್ಟು ಅವರಿಗೆ ಸಾಮರ್ಥ್ಯ ಇದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ. 
    
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DK Shivakumar Dr G Parameshwar
Advertisment
Advertisment
Advertisment