ಸಚಿವ ಸ್ಥಾನಕ್ಕೆ KN ರಾಜಣ್ಣ ರಾಜೀನಾಮೆ.. ಪುತ್ರ ರಾಜೇಂದ್ರ ಹೇಳಿದ್ದೇನು..?

ತಂದೆಯ ರಾಜೀನಾಮೆ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಕೆ.ಎನ್​ ರಾಜಣ್ಣ ಪುತ್ರ ರಾಜೇಂದ್ರ, ನಾನು ಈಗ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೇನೆ. ಹಾಗೂ ನಮ್ಮ ತಂದೆಯನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ.

author-image
Veenashree Gangani
kn rajanna(7)
Advertisment

ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್​ನಲ್ಲಿ 2ನೇ ವಿಕೆಟ್ ಪತನವಾದಂತೆ ಆಗಿದೆ. ಈ ಹಿಂದೆ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಕೆ.ಎನ್​ ರಾಜಣ್ಣ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ:BREAKING ಸಚಿವ ಸ್ಥಾನಕ್ಕೆ ಕೆ.ಎನ್.ರಾಜಣ್ಣ ರಾಜೀನಾಮೆ!

ಇನ್ನೂ, ತಂದೆಯ ರಾಜೀನಾಮೆ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಕೆ.ಎನ್​ ರಾಜಣ್ಣ ಪುತ್ರ ರಾಜೇಂದ್ರ, ನಾನು ಈಗ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೇನೆ. ಹಾಗೂ ನಮ್ಮ ತಂದೆಯನ್ನು ಭೇಟಿ ಮಾಡುತ್ತೇನೆ. ಈಗ ಅಸೆಂಬ್ಲಿ ನಡೆಯುತ್ತಿದೆ. ರಾಜೀನಾಮೆ ಪ್ರಸ್ತಾಪದ ವಿಚಾರ ಮಾಧ್ಯಮಗಳಿಂದ ನನಗೆ ಗೊತ್ತಾಗಿದೆ. ಸರ್ಕಾರದಲ್ಲಿ ಸಚಿವರಿದ್ದಾರೆ. ಇಲ್ಲಿ ಗುಂಪು ಅನ್ನೋದು ಇಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಸರ್ಕಾರ ಇತ್ತು. ಲೋಪದೋಷಗಳು ಆದ್ರೆ ಸರಿಪಡಿಸಬೇಕು ಎಂದು ಹೇಳಿದ್ದರು. ಹೀಗೆ ಹೇಳೋದಕ್ಕೆ ಕೆಎನ್​ ರಾಜಣ್ಣ ಸಣ್ಣ ವ್ಯಕ್ತಿ ಅಲ್ಲ. ಅವರು ಪ್ರಭಾವಿ ನಾಯಕರು. ಏನೇ ಆದರೂ ನಾನು ಸಿಎಂ ಅವರನ್ನು ಭೇಟಿಯಾಗುತ್ತೇನೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

K N Rajanna resignation
Advertisment