Advertisment

ಸಿಎಂ- ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆದ ರಾಹುಲ್ ಗಾಂಧಿ : ದೆಹಲಿಯಲ್ಲಿ ಸಮಸ್ಯೆಗೆ ಪರಿಹಾರ- ಅಶೋಕ್ ಪಟ್ಟಣ್‌

ನಿನ್ನೆ ಮೈಸೂರು ಏರ್ ಪೋರ್ಟ್ ನಲ್ಲಿ ಸಿಎಂ ಹಾಗೂ ಡಿಸಿಎಂ ಇಬ್ಬರೂ ರಾಹುಲ್ ಗಾಂಧಿ ಜೊತೆ ಪ್ರತೇಕವಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಏನು ಮಾತುಕತೆ ನಡೆಯಿತು ಅನ್ನೋದನ್ನು ಸ್ಥಳದಲ್ಲಿದ್ದ ಕಾಂಗ್ರೆಸ್ ಶಾಸಕ, ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಈಗ ಬಹಿರಂಗಪಡಿಸಿದ್ದಾರೆ.

author-image
Chandramohan
DCM DK SHIVAKUMAR MET RAHUL GANDHI (1)

ಸಿಎಂ, ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆದ ರಾಹುಲ್ ಗಾಂಧಿ

Advertisment
  • ಸಿಎಂ, ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆದ ರಾಹುಲ್ ಗಾಂಧಿ
  • ಸಿಎಂ ಸ್ಥಾನದ ಗೊಂದಲ ಬಗೆಹರಿಸಲು ರಾಹುಲ್ ಗೆ ಸಿಎಂ ಮನವಿ
  • ಹೀಗಾಗಿ ಇಬ್ಬರನ್ನೂ ದೆಹಲಿಗೆ ಬರುವಂತೆ ರಾಹುಲ್ ಗಾಂಧಿ ಆಹ್ವಾನ

ಸಿಎಂ-ಡಿಸಿಎಂ ಜೊತೆ ರಾಹುಲ್ ಗಾಂಧಿ ಜೊತೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ  ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೇಳಿಕೆ ನೀಡಿದ್ದಾರೆ.  ನಿನ್ನೆ ಏನು ಮಾತುಕತೆ ನಡೆದಿಲ್ಲ. ಇಬ್ಬರಿಗೂ ರಾಹುಲ್ ಗಾಂಧಿಯವರು ದೆಹಲಿಗೆ ಬರುವಂತೆ ಹೇಳಿದ್ದಾರೆ.  ದೆಹಲಿಗೆ ಹೋದ ಮೇಲೆ ಎಲ್ಲವನ್ನೂ  ಸರಿಪಡಿಸುವುದಾಗಿ ಹೇಳಿದ್ದಾರೆ .  ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಇಬ್ಬರನ್ನು ದೆಹಲಿಗೆ ಕರೆದಿದ್ದಾರೆ.  ಮೊದಲು ಡಿ.ಕೆ ಶಿವಕುಮಾರ್ ಮಾತನ್ನಾಡಬೇಕು ಅಂತ ಕೇಳಿದ್ರು . ಆಗ ಇಬ್ಬರು ದೆಹಲಿಗೆ ಬನ್ನಿ ಅಂತಾ ರಾಹುಲ್ ಗಾಂಧಿ ಹೇಳಿದರು .  ಸಂಕ್ರಾಂತಿ ಬಳಿಕ ಇಬ್ಬರನ್ನೂ ಕರೆಯಬಹುದು. ನೂರಕ್ಕೆ ನೂರು ಗೊಂದಲ ಸರಿ ಹೋಗುತ್ತದೆ.  ನಾವೆಲ್ಲ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಕಾಂಗ್ರೆಸ್ ನ ಮುಖ್ಯ ಸಚೇತಕ, ಶಾಸಕ  ಅಶೋಕ್ ಪಟ್ಟಣ್ ಹೇಳಿದ್ದಾರೆ.  

Advertisment

ರನ್ ವೇಯಲ್ಲಿ ಚರ್ಚೆ ಅಂತ ಅಲ್ಲ, ರಾಹುಲ್ ಅಲ್ಲಿಗೆ ಬಂದಿದ್ದರು . ಬಂದಾಗ ಮಾತನ್ನಾಡಿದ್ದಾರೆ ಅಷ್ಟೇ. ಸಂಪುಟ ವಿಸ್ತರಣೆ ಸೇರಿ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಸಂಪುಟ ಪುನರ್ ರಚನೆ ಆಗಬೇಕು ಅಂತ ಇದೆ.  ನನ್ನದು ಬೇಡಿಕೆ ಇದೆ, ನಾನು ಮಂತ್ರಿ ಆಗಬೇಕು.  ಎಲ್ಲದರ ಬಗ್ಗೆ ದೆಹಲಿಯಲ್ಲಿ ಕರೆದು ಮಾತನ್ನಾಡುತ್ತಾರೆ ಎಂದು ಕಾಂಗ್ರೆಸ್ ಶಾಸಕ, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೇಳಿದ್ದಾರೆ. 
ನಿನ್ನೆ ಮೈಸೂರು ಏರ್ ಪೋರ್ಟ್ ನಲ್ಲಿ ರಾಹುಲ್ ಗಾಂಧಿ ಜೊತೆ ಸಿಎಂ, ಡಿಸಿಎಂ ಪ್ರತೇಕವಾಗಿ ಚರ್ಚೆ ನಡೆಸಿದಾಗ, ಅಶೋಕ್ ಪಟ್ಚಣ್ ಸ್ಥಳದಲ್ಲೇ ಇದ್ದರು. ಅಶೋಕ್ ಪಟ್ಟಣ್ , ಸಿಎಂ ಸಿದ್ದರಾಮಯ್ಯಗೆ ಆಪ್ತ ವಲಯದಲ್ಲಿದ್ದಾರೆ. ಸದಾ ಸಿಎಂ ಜತೆ ಅಶೋಕ್ ಪಟ್ಟಣ್ ಇರುತ್ತಾರೆ. ಹೀಗಾಗಿ ಸಿಎಂ ಕಡೆಯಿಂದಲೇ ಈ ಎಲ್ಲ ಮಾಹಿತಿಯೂ ಶಾಸಕ ಅಶೋಕ್ ಪಟ್ಟಣ್ ಗೂ ಸಿಕ್ಕಿರಬಹುದು. ಜೊತೆಗೆ ಸ್ಥಳದಲ್ಲೇ ಇದ್ದು ನಾಯಕರಿಂದ ಮಾಹಿತಿಯನ್ನು ಅಶೋಕ್ ಪಟ್ಟಣ್ ಪಡೆದಿದ್ದಾರೆ. 

CONGRESS MLA ASHOK PATTANA


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

CONGRESS MLA ASHOK PATTANA DK Shivakumar DCM DK SHIVAKUMAR CM SIDDARAMAIAH
Advertisment
Advertisment
Advertisment