ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್, ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡಗೆ ಷೋಕಾಸ್ ನೋಟೀಸ್‌

ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ಮುಂದಿನ ಸಿಎಂ ಆಗಬೇಕೆಂದು ಹೇಳಿದ್ದ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಎಚ್‌.ಡಿ.ರಂಗನಾಥ್ ಹಾಗೂ ಮಂಡ್ಯದ ಮಾಜಿ ಸಂಸದ ಎಲ್‌.ಆರ್.ಶಿವರಾಮೇಗೌಡ ಅವರಿಗೆ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿಯು ಷೋಕಾಸ್ ನೋಟೀಸ್ ನೀಡಿದೆ.

author-image
Chandramohan
kunigal mla ranganath and shivrame gowda

ಕುಣಿಗಲ್ ಶಾಸಕ ರಂಗನಾಥ್ , ಮಾಜಿ ಸಂಸದ ಶಿವರಾಮೇಗೌಡ

Advertisment
  • ಕುಣಿಗಲ್ ಶಾಸಕ ರಂಗನಾಥ್ , ಮಾಜಿ ಸಂಸದ ಶಿವರಾಮೇಗೌಡಗೆ ನೋಟೀಸ್ ಜಾರಿ
  • ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿಯಿಂದ ಷೋಕಾಸ್ ನೋಟೀಸ್ ನೀಡಿಕೆ
  • ಡಿಸಿಎಂ ಡಿಕೆಶಿ ಸಿಎಂ ಆಗುತ್ತಾರೆಂದು ಹೇಳಿದ್ದ ಇಬ್ಬರು ನಾಯಕರು
  • ಒಂದು ವಾರದೊಳಗೆ ಹೇಳಿಕೆಗೆ ಸಮಜಾಯಿಷಿ ನೀಡಲು ಸೂಚನೆ

ಕಾಂಗ್ರೆಸ್ ಪಕ್ಷದಿಂದ  ಕುಣಿಗಲ್ ಶಾಸಕ ಡಾ.ಎಚ್‌.ಡಿ. ರಂಗನಾಥ್ ಹಾಗೂ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡಗೆ ನೋಟಿಸ್ ನೀಡಲಾಗಿದೆ.  ಸಿಎಂ ಬದಲಾವಣೆ ಸಂಬಂಧ ಬಹಿರಂಗ ಹೇಳಿಕೆ ನೀಡಿದಕ್ಕೆ ಕಾರಣ ಕೇಳಿ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ನೋಟಿಸ್ ನೀಡಿದೆ.  ಒಂದು ವಾರದೊಳಗೆ ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡುವಂತೆ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ನೋಟಿಸ್ ನೀಡಿದ್ದಾರೆ. 
ಎರಡು ದಿನಗಳ ಹಿಂದಷ್ಟೇ  ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆಂದು ಮಾಧ್ಯಮಗಳ ಮುಂದೆ ಕುಣಿಗಲ್ ಶಾಸಕ ಡಾ. ಎಚ್‌.ಡಿ.  ರಂಗನಾಥ್ ಹಾಗೂ ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ಹೇಳಿಕೆ ನೀಡಿದ್ದರು. ಇದು ಪಕ್ಷದ ಶಿಸ್ತಿನ ಉಲಂಘನೆ ಎಂದು ಇಬ್ಬರೂ ನಾಯಕರಿಗೆ ಪಕ್ಷದಿಂದ ನೋಟೀಸ್ ನೀಡಲಾಗಿದೆ. 

kunigal mla ranganath and shivrame gowda02



ಸಿಎಂ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಹೇಳಿಕೆ ನೀಡಬಾರದೆಂದು ಈ ಹಿಂದೆಯೇ ಎಐಸಿಸಿ ಎಲ್ಲರಿಗೂ ಸೂಚಿಸಿದೆ. ನಿಮ್ಮ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೇ, ಪಕ್ಷದ ಶಿಸ್ತು ಉಲಂಘನೆಗೆ ಕಾರಣವಾಗಿದೆ ಎಂದು ನೋಟೀಸ್ ನಲ್ಲಿ ಹೇಳಲಾಗಿದೆ. ಮುಂದಿನ ಒಂದು ವಾರದೊಳಗಾಗಿ ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಬೇಕೆಂದು ನೋಟೀಸ್ ನಲ್ಲಿ ಇಬ್ಬರಿಗೂ ತಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Congress
Advertisment