Advertisment

ರಾಜ್ಯ ಸರ್ಕಾರಕ್ಕೆ ನಾಳೆ ಸಂಜೆಯವರೆಗೂ ಡೆಡ್ ಲೈನ್ ನೀಡಿದ ಕಬ್ಬು ಬೆಳೆಗಾರ ರೈತರು : ನಾಳೆ ಬೇಡಿಕೆ ಈಡೇರದೇ ಇದ್ದರೇ, ನಾಡಿದ್ದು ಹೆದ್ದಾರಿ ಬಂದ್‌!

ಕಳೆದ 8 ದಿನಗಳಿಂದ ಕಬ್ಬು ಬೆಳೆಗೆ ಪ್ರತಿ ಟನ್ ಗೆ 3,500 ರೂಪಾಯಿ ಬೆಲೆ ನೀಡಬೇಕೆಂದು ಪ್ರತಿಭಟನಾ ಧರಣಿ ನಡೆಸುತ್ತಿರುವ ರೈತರು ಸರ್ಕಾರಕ್ಕೆ ನಾಳೆ ಸಂಜೆಯವರೆಗೂ ಡೆಡ್ ಲೈನ್ ನೀಡಿದ್ದಾರೆ. ನಾಳೆ ಬೇಡಿಕೆ ಈಡೇರಿಸದೇ ಇದ್ದರೇ, ನಾಡಿದ್ದು ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.

author-image
Chandramohan
sugarcane farmers protest

ನಾಳೆ ಸಂಜೆಯವರೆಗೂ ಸರ್ಕಾರಕ್ಕೆ ಡೆಡ್ ಲೈವ್ ನೀಡಿದ ರೈತರು!

Advertisment
  • ನಾಳೆ ಸಂಜೆಯವರೆಗೂ ಸರ್ಕಾರಕ್ಕೆ ಡೆಡ್ ಲೈವ್ ನೀಡಿದ ರೈತರು!
  • ನಾಳೆ ಸಂಜೆಯೊಳಗೆ ಬೇಡಿಕೆ ಈಡೇರದಿದ್ದರೇ, ನಾಡಿದ್ದು ಹೆದ್ದಾರಿ ಬಂದ್‌ ಎಚ್ಚರಿಕೆ
  • ರೈತರ ಜೊತೆ ಮಾತುಕತೆ ನಡೆಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ್‌
  • ಶಿವಾನಂದ್ ಪಾಟೀಲ್ ಮನವೊಲಿಕೆ ಬಳಿಕ ಹೆದ್ದಾರಿ ಬಂದ್ ನಾಡಿದ್ದಿಗೆ ಮುಂದೂಡಿಕೆ

ರಾಜ್ಯದ ಕಬ್ಬು ಬೆಳೆಗಾರ ರೈತರು ತಮ್ಮ ಬೇಡಿಕೆ ಈಡೇರಿಕೆಗೆ ನೀಡಿದ್ದ ಗಡುವು ಅನ್ನು ನಾಳೆ ಸಂಜೆ 7 ಗಂಟೆಯವರೆಗೂ ವಿಸ್ತರಿಸಿದ್ದಾರೆ.  ನಾಳೆ ನಡೆಸಲು ಉದ್ದೇಶಿಸಿದ ರಾಷ್ಟ್ರೀಯ ಹೆದ್ದಾರಿ ಬಂದ್ ಅನ್ನು ನಾಡಿದ್ದಿಗೆ ಮುಂದೂಡಿದ್ದಾರೆ.  ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮನವಿಗೆ ರೈತರು  ಒಪ್ಪಿಗೆ ಸೂಚಿಸಿದ್ದಾರೆ.  ನಾಳೆ ಸಂಜೆಯೊಳಗೆ ಕಬ್ಬು ಬೆಳೆಗಾರರ ಬೇಡಿಕೆಯನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಹೊಸ ಡೆಡ್ ಲೈನ್ ನೀಡಿದ್ದಾರೆ.  ನಾಳೆ ಒಂದೇ ದಿನದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಮಾಡಿದ್ದಾರೆ. 
ನಾಳೆ ಸಂಜೆಯೊಳಗೆ ಸಮಸ್ಯೆ ಬಗೆಹರಿಸದಿದ್ದರೇ, ನಾಡಿದ್ದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ರಾಜ್ಯ ರೈತ ಸಂಘ, ಹಸಿರು ಸೇನೆಯ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ್ ಸಗರ ಎಚ್ಚರಿಕೆ ನೀಡಿದ್ದಾರೆ.  
ನಾಳೆ ಮುಖ್ಯಮಂತ್ರಿ ಬೆಂಗಳೂರಿನಲ್ಲಿ ಕರೆದಿರುವ ರೈತರ ಸಭೆಗೆ ನಾವು ಬರಲ್ಲ.  ನಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರವೇ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ವಿಜಯಪುರ ಜಿಲ್ಲೆಯ ರೈತರು ಹೇಳಿದ್ದಾರೆ. 
ಕಬ್ಬು ಬೆಳೆಗಾರ ರೈತರು ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಬೆಲೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. 

Advertisment
Sugarcane farmers deadline to government
Advertisment
Advertisment
Advertisment