ಸಂಸತ್‌ ಮುಂದೆ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ವರ್ಸಸ್ ರಾಹುಲ್ ಗಾಂಧಿ: ದೇಶದ್ರೋಹಿ ವರ್ಸಸ್ ದೇಶ ಕೆ ದುಷ್ಮನ್‌!

ಸಂಸತ್‌ನ ಮಕರ ದ್ವಾರದ ಮುಂದೆ ಕೇಂದ್ರದ ರೈಲ್ವೇ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡುವೆ ಮಾತಿನ ಚಕಮಕಿ ನಡೆಯಿತು. ದೇಶದ್ರೋಹಿ ವರ್ಸಸ್ ದೇಶ ಕೆ ದುಷ್ಮನ್ ಎಂಬ ಮಾತಿನ ಚಕಮಕಿ ನಡೆಯಿತು.

author-image
Chandramohan
rahul gandhi versus ravneet bittu (2)

ರಾಹುಲ್ ಗಾಂಧಿ ವರ್ಸಸ್ ರವನೀತ್ ಸಿಂಗ್ ಬಿಟ್ಟು ಮಾತಿನ ಚಕಮಕಿ

Advertisment
  • ರಾಹುಲ್ ಗಾಂಧಿ ವರ್ಸಸ್ ರವನೀತ್ ಸಿಂಗ್ ಬಿಟ್ಟು ಮಾತಿನ ಚಕಮಕಿ
  • ದೇಶದ್ರೋಹಿ ಸ್ನೇಹಿತ ಎಂದು ರವನೀತ್ ಸಿಂಗ್ ಬಿಟ್ಟುರನ್ನು ಕರೆದ ರಾಹುಲ್ ಗಾಂಧಿ
  • ದೇಶ ಕೆ ದುಷ್ಮನ್ ಎಂದು ರಾಹುಲ್ ಗಾಂಧಿಯನ್ನು ಕರೆದ ರವನೀತ್ ಬಿಟ್ಟು

ಇಂದು ಬೆಳಿಗ್ಗೆ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ನಡುವೆ ಮಾತಿನ ಚಕಮಕಿ ನಡೆಯಿತು. ದಿನದ ಕಲಾಪಕ್ಕೂ ಮುನ್ನ ಸಂಸತ್‌ನ ಮಕರ ದ್ವಾರದ ಮುಂದೆ ರಾಹುಲ್  ಗಾಂಧಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ  ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಈಗ ಬಿಜೆಪಿಯಲ್ಲಿರುವ ರವನೀತ್ ಸಿಂಗ್ ಬಿಟ್ಟು ಎದುರುಗಡೆ ಬಂದರು.  ಆಗ  ಮಾಜಿ ಕಾಂಗ್ರೆಸ್ ನಾಯಕ ರವನೀತ್ ಸಿಂಗ್ ಬಿಟ್ಟುರನ್ನು  "ದೇಶದ್ರೋಹಿ ಸ್ನೇಹಿತ" ಎಂದು ರಾಹುಲ್ ಗಾಂಧಿ ಕರೆದರು. ತಮ್ಮ ಪ್ರತಿಕ್ರಿಯೆಯಲ್ಲಿ, ರವನೀತ್ ಸಿಂಗ್‌ ಬಿಟ್ಟು  ಕೂಡ ರಾಹುಲ್  ಗಾಂಧಿಯನ್ನು "ದೇಶ ಕೆ ದುಷ್ಮನ್ (ರಾಷ್ಟ್ರದ ಶತ್ರು)" ಎಂದು ಕರೆದರು.

ಮೂರು ಬಾರಿ ಸಂಸದ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವ (MoS) ಆಗಿರುವ ರವನೀತ್ ಸಿಂಗ್‌ ಬಿಟ್ಟು, 2024 ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಕಾಂಗ್ರೆಸ್ ಸಂಸದರು ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದಾಗ ಸಂಕ್ಷಿಪ್ತ ಮಾತಿನ ಚಕಮಕಿ ನಡೆಯಿತು. "ಇಲ್ಲಿ ಒಬ್ಬ ದೇಶದ್ರೋಹಿ ನಡೆದುಕೊಂಡು ಬರುತ್ತಿದ್ದಾನೆ. ಮುಖ ನೋಡಿ," ಬಿಟ್ಟು ಹಾದು ಹೋಗುತ್ತಿದ್ದಂತೆ ಗಾಂಧಿ ಹೇಳಿದರು. ನಂತರ ಅವರು ರವನೀತ್ ಸಿಂಗ್‌ ಬಿಟ್ಟು ಅವರೊಂದಿಗೆ ಕೈಕುಲುಕಲು ಮುಂದಾದರು,  ಆದರೇ, ರವನೀತ್ ಸಿಂಗ್ ಬಿಟ್ಟು , ರಾಹುಲ್ ಗಾಂಧಿಯ ಕೈ ಕುಲುಕಲು ಆಸಕ್ತಿ ತೋರಿಸಲಿಲ್ಲ.  ತಮ್ಮ ಪಾಡಿಗೆ ತಾವು ಸಂಸತ್ ಒಳಗಡೆ ಹೊರಟು ಹೋದರು.  
 "ನಮಸ್ಕಾರ ಸಹೋದರ. ನನ್ನ ದೇಶದ್ರೋಹಿ ಸ್ನೇಹಿತ. ಚಿಂತಿಸಬೇಡಿ, ನೀವು (ಕಾಂಗ್ರೆಸ್‌ಗೆ) ಹಿಂತಿರುಗುತ್ತೀರಿ" ಎಂದು  ರಾಹುಲ್ ಗಾಂಧಿ  ಹೇಳಿದರು.

"ದೇಶ ಕೆ ದುಷ್ಮನ್," ಎಂದು ರಾಹುಲ್  ಗಾಂಧಿಯವರೊಂದಿಗೆ ಕೈಕುಲುಕಲು ನಿರಾಕರಿಸುತ್ತಾ ಸಚಿವ ರವನೀತ್ ಸಿಂಗ್ ಬಿಟ್ಟು  ಹೇಳಿದರು. ಪ್ರತಿಭಟನಾ ನಿರತ ಸಂಸದರ ಬಗ್ಗೆ "ಅವರು ಯುದ್ಧ ಗೆದ್ದಂತೆ ಕುಳಿತಿದ್ದಾರೆ" ಎಂದು ಅವರು ಹೇಳಿದ ನಂತರ ಈ ವಿನಿಮಯ ನಡೆಯಿತು.

ಗಾಂಧಿಯವರಿಂದ ಹ್ಯಾಂಡ್‌ಶೇಕ್ ಆಫರ್ ಅನ್ನು ಏಕೆ ತಿರಸ್ಕರಿಸಿದರು ಎಂಬುದನ್ನು ಸ್ಪಷ್ಟಪಡಿಸಿದ ರವನೀತ್ ಸಿಂಗ್  ಬಿಟ್ಟು, ನಂತರ 1984 ರಲ್ಲಿ ಗೋಲ್ಡನ್ ಟೆಂಪಲ್ ಸಂಕೀರ್ಣದಿಂದ ಉಗ್ರರನ್ನು ಹೊರಹಾಕಲು ನಡೆಸಲಾದ ಮಿಲಿಟರಿ ದಾಳಿಯಾದ ಆಪರೇಷನ್ ಬ್ಲೂ ಸ್ಟಾರ್ ಮತ್ತು ಸಿಖ್ ವಿರೋಧಿ ಗಲಭೆಗಳ ಬಗ್ಗೆ ಗಾಂಧಿ ಕುಟುಂಬವನ್ನು ಟೀಕಿಸಿದರು.

"ಅವರು ತಮ್ಮ ಕೈ ಚಾಚಿದಾಗ, "ನೀವು ದೇಶದ್ರೋಹಿಗಳು ಮತ್ತು ಪ್ರತಿದಿನ ಪಡೆಗಳು ಮತ್ತು ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುವ ರಾಷ್ಟ್ರದ ಶತ್ರುಗಳು. ಸಿಖ್ಖರ ಕೊಲೆಗಾರ ಗಾಂಧಿ ಕುಟುಂಬದ ಕುಡಿಯೊಂದಿಗೆ ಸರ್ದಾರ್ ಎಂದಿಗೂ ಕೈಕುಲುಕುವುದಿಲ್ಲ" ಎಂದು ರವನೀತ್ ಸಿಂಗ್ ಬಿಟ್ಟು ಹೇಳಿದರು.

ಬಳಿಕ ಮಾತನಾಡಿದ ರವನೀತ್ ಸಿಂಗ್ ಬಿಟ್ಟು, ರಾಹುಲ್  ಗಾಂಧಿ ತಮ್ಮ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು ಎಂದು ಹೇಳಿಕೊಂಡರು.

rahul gandhi versus ravneet bittu (1)



"ಅವರು ಇಂದು ಡ್ರಗ್ಸ್   ಸೇವಿಸಿದ್ದಾರೋ ಇಲ್ಲವೋ ನನಗೆ ತಿಳಿದಿಲ್ಲ. "ಅವರು ನನ್ನನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದರು" ಎಂದು ರವನೀತ್ ಸಿಂಗ್ ಬಿಟ್ಟು ಹೇಳಿದರು, ಗಾಂಧಿಯವರ ನಡವಳಿಕೆಯು ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಕಾರಣವಾಗುವುದೇ ಎಂಬ ಬಗ್ಗೆ ತಮ್ಮ ಪಕ್ಷದ ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸುವುದಾಗಿ ಹೇಳಿದರು.

ಸಿಖ್ ಶಾಸಕ ಮತ್ತು ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, ಸಿಖ್ ಸಚಿವ (ಬಿಟ್ಟು) ವಿರುದ್ಧ ಗಾಂಧಿಯವರ "ದೇಶದ್ರೋಹಿ" ಹೇಳಿಕೆಯನ್ನು ಖಂಡಿಸಿದರು. "ರಾಹುಲ್ ಗಾಂಧಿ ಮತ್ತು ಗಾಂಧಿ ಕುಟುಂಬ ದೇಶದ್ರೋಹಿಗಳು. ಸಿಖ್ಖರು ಮತ್ತು ಸರ್ದಾರ್‌ಗಳು ದೇಶದ್ರೋಹಿಗಳಾಗಲು ಸಾಧ್ಯವಿಲ್ಲ. ಈ ಹೇಳಿಕೆಯು ಕಾಂಗ್ರೆಸ್‌ನ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದನ್ನು ಪ್ರತಿಬಿಂಬಿಸುತ್ತದೆ" ಎಂದು ಅವರು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Rahul gandhi v/s ravneet singn bittu
Advertisment