Advertisment

ಸಿದ್ದರಾಮಯ್ಯ ಅವರೇ ಪೂರ್ತಿ ಅವಧಿಗೆ ಸಿಎಂ ಎಂದ ಯತೀಂದ್ರ : ಹೈಕಮ್ಯಾಂಡ್ ತೀರ್ಮಾನವೇ ನನ್ನ ತೀರ್ಮಾನ ಎಂದ ಸಿಎಂ ಸಿದ್ದು

ಸಿದ್ದರಾಮಯ್ಯ ಅವರೇ ಪೂರ್ತಿ ಅವಧಿಗೆ ಸಿಎಂ ಆಗಿರುತ್ತಾರೆ ಎಂದು ಸಿದ್ದು ಪುತ್ರ ಯತೀಂದ್ರ ಹೇಳಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಇಷ್ಟು ಅವಧಿಗೆ ಸಿಎಂ ಎಂದು ಆಯ್ಕೆ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಹೈಕಮ್ಯಾಂಡ್ ತೀರ್ಮಾನವೇ ನನ್ನ ತೀರ್ಮಾನ ಎಂದು ಸಿಎಂ ಹೇಳಿದ್ದಾರೆ.

author-image
Chandramohan
Yathindra siddaramaiah (1)

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದ ಪುತ್ರ ಯತೀಂದ್ರ

Advertisment
  • ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದ ಪುತ್ರ ಯತೀಂದ್ರ
  • ಇದರಲ್ಲಿ ಯಾವುದೇ ಬದಲಾವಣೆ ಮಾತಿಲ್ಲ-ಯತೀಂದ್ರ

 ಸಿದ್ದರಾಮಯ್ಯನವರೇ ಪೂರ್ತಿ ಅವಧಿಗೆ ಸಿಎಂ ಆಗಿ ಮುಂದುವರೆಯುತ್ತಾರೆ ಅಂತ ನಾನು ಪದೇಪದೇ ಹೇಳ್ತಾ ಇದ್ದೇನೆ .  ಅವರೇ ಪೂರ್ಣ ಅವಧಿಯಲ್ಲಿ ಸಿಎಂ ಆಗಿ ಮುಂದುವರಿಯುತ್ತಾರೆ . ಇದರಲ್ಲಿ ಬದಲಾವಣೆ ಮಾತಿಲ್ಲ .  ಹೈಕಮಾಂಡ್ ಹಲವಾರು ವಿಚಾರಗಳಿಗೆ ಕರೆಯುತ್ತಾರೆ.  ಹೋಗಿ ಮಾತಾಡಿಕೊಂಡು ಬರುತ್ತಾರೆ.  ನನ್ನ ಪ್ರಕಾರ ಯಾವುದೇ ಬದಲಾವಣೆ ಆಗಲ್ಲ .  

Advertisment

ಆ ರೀತಿ ಆಗಬಹುದು,  ಈ ರೀತಿ ಆಗಬಹುದು ಅನ್ನೋದು ಈಗಲೇ ಏಕೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಬೆಳಗಾವಿಯಲ್ಲಿ ಹೇಳಿದ್ದಾರೆ. 
ಡಿಸಿಎಂ ನಾನು ಮುಖ್ಯಮಂತ್ರಿ ಆಗಬೇಕು ಅಂತ ಕೇಳಿದರು.  ಹಾಗಾಗಿ ಗೊಂದಲ ಇತ್ತು . ಹೈಕಮಾಂಡ್ ಸ್ಪಷ್ಟನೆ ಕೊಟ್ಟಿದೆ.  ಶಾಸಕಾಂಗ ಪಕ್ಷದ ಸಭೆಯಲ್ಲಿ ಇಷ್ಟು ವರ್ಷಗಳಿಗೆ ಅಂತ ತೀರ್ಮಾನ ಮಾಡುತ್ತಾರಾ.? ಎಂದು ಯತೀಂದ್ರ ಪ್ರಶ್ನಿಸಿದ್ದಾರೆ. 


ಇನ್ನೂ ಪುತ್ರ ಯತೀಂದ್ರ ಮಾತಿಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದು, ನೋಡಪ್ಪಾ , ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಅದೇ ನನ್ನ ತೀರ್ಮಾನ ಎಂದು ಹೇಳಿದ್ದಾರೆ. 


‘ಅಮಿತ್ ಶಾ ಗೂಂಡಾ, ರೌಡಿ, ಕೊಲೆ ಆರೋಪಿ’- ಮೋದಿ, ಬಿಜೆಪಿ ಮೇಲೆ ಯತೀಂದ್ರ ಸಿದ್ದರಾಮಯ್ಯ ಕಿಡಿ



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Yathindra says siddaramaiah will be 5 year CM
Advertisment
Advertisment
Advertisment