Advertisment

ತುಮಕೂರು ಜಿಲ್ಲೆಗೆ ಐದಾರು ತಿಂಗಳಲ್ಲಿ ಎತ್ತಿನಹೊಳೆ ಯೋಜನೆ ನೀರು : ಡಿಸಿಎಂ ಡಿಕೆಶಿ ಭರವಸೆ

ಎತ್ತಿನಹೊಳೆ ಯೋಜನೆಯ ನೀರು ಅನ್ನು ಮುಂದಿನ ಐದಾರು ತಿಂಗಳಲ್ಲಿ ತುಮಕೂರು ಜಿಲ್ಲೆಗೆ ಹರಿಸುವುದಾಗಿ ಜಲ ಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಕೇಂದ್ರದ ಅರಣ್ಯ ಇಲಾಖೆ ಬೇಲೂರು ತಾಲ್ಲೂಕಿನಲ್ಲಿ ಅಡ್ಡಿಪಡಿಸುತ್ತಿದೆ. ಆದರೂ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದಾರೆ.

author-image
Chandramohan
YATTINAHOLE PROJECT WATER

ಎತ್ತಿನಹೊಳೆ ನೀರು ಅನ್ನು 5-6 ತಿಂಗಳಲ್ಲಿ ತುಮಕೂರಿಗೆ ಹರಿಸುವೆ-ಡಿಕೆಶಿ

Advertisment
  • ಎತ್ತಿನಹೊಳೆ ನೀರು ಅನ್ನು 5-6 ತಿಂಗಳಲ್ಲಿ ತುಮಕೂರಿಗೆ ಹರಿಸುವೆ-ಡಿಕೆಶಿ
  • ಕೇಂದ್ರದ ಅರಣ್ಯ ಇಲಾಖೆಯ ಸಮಸ್ಯೆ ಸರಿಪಡಿಸಿ ನೀರು ಹರಿಸುವ ಭರವಸೆ
  • ಜಲಸಂಪನ್ಮೂಲ ಸಚಿವ ಡಿಕೆಶಿ ಅವರಿಂದ ವಿಧಾನಸಭೆಯಲ್ಲಿ ಭರವಸೆ

ಎತ್ತಿನಹೊಳೆ ಯೋಜನೆಗೆ ಇರುವ ಅಡ್ಡಿಗಳನ್ನು ನಿವಾರಿಸಿ ಮುಂದಿನ ಐದಾರು ತಿಂಗಳಲ್ಲಿ ತುಮಕೂರು ಜಿಲ್ಲೆಗೆ ನೀರು ಹರಿಸಲಾಗುವುದು ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವರೂ ಆದ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ತಿಳಿಸಿದ್ದಾರೆ. 
ವಿಧಾನಸಭೆಯಲ್ಲಿ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಗಮನ ಸೆಳೆಯುವ ಸೂಚನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರ ನೀಡಿದ್ದಾರೆ. ಬೇಲೂರು ಬಳಿ 8 ಕಿ.ಮೀ. ನೀರು ಹರಿಸಲು ಸಮಸ್ಯೆಯಾಗಿದೆ. ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ದೆಹಲಿ ಅರಣ್ಯ ಇಲಾಖೆಯವರು ಅಲ್ಲಿ ತೆಗೆದಿರುವ ಮಣ್ಣು ಅನ್ನು 24 ಕಿ.ಮೀ. ದೂರಕ್ಕೆ ಸ್ಥಳಾಂತರಿಸುವಂತೆ ಹೇಳುತ್ತಿದ್ದಾರೆ. ಅಲ್ಲಿ ಏನೋ ಸ್ಪಲ್ಪ ರಾಜಕಾರಣ ಕಾಣಿಸುತ್ತಿದೆ. ಆದರೂ, ತುಮಕೂರು ಜಿಲ್ಲೆಗೆ ಐದಾರು ತಿಂಗಳಲ್ಲಿ ಎತ್ತಿನಹೊಳೆ ಯೋಜನೆಯ ನೀರು ಹರಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

Advertisment

YATTINAHOLE PROJECT WATER02



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

YATTINAHOLE PROJECT WATER TO FLOW TUMKURU IN SIX MONTHS SAYS DCM DKS
Advertisment
Advertisment
Advertisment