Advertisment

ಗಂಡನ ಮನೆಗೆ ಬಂದ 3 ದಿನದಲ್ಲೇ 5 ತಿಂಗಳ‌ ಬಾಣಂತಿ ಕೊಲೆ ಆರೋಪ.. ಹಸುಗೂಸು ಅನಾಥ

author-image
Ganesh
Updated On
ಗಂಡನ ಮನೆಗೆ ಬಂದ 3 ದಿನದಲ್ಲೇ 5 ತಿಂಗಳ‌ ಬಾಣಂತಿ ಕೊಲೆ ಆರೋಪ.. ಹಸುಗೂಸು ಅನಾಥ
Advertisment
  • ಬಾಣಂತಿ ಕೊಲೆ ಮಾಡಿ ನೇಣು ಹಾಕಿದ ಆರೋಪ
  • ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
  • ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದ ಘಟನೆ

ಗದಗ: ಐದು ತಿಂಗಳ‌ ಬಾಣಂತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಆರೋಪ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಕೇಳಿಬಂದಿದೆ. ಈಗ ಹಸುಗೂಸು ಅನಾಥ ಆಗಿದೆ.

Advertisment

ಪವಿತ್ರಾ 25 ಕೊಲೆಯಾದ ಬಾಣಂತಿ. ಆಕೆಯ ಗಂಡನ ಮನೆಯವರ ವಿರುದ್ಧ ಮೃತಳ ಪೋಷಕರು ಆರೋಪಿಸಿದ್ದಾರೆ. ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕಣ್ಣೀರು ಇಟ್ಟಿದ್ದಾರೆ. ಬಾಣಂತನ ಮುಗಿಸಿಕೊಂಡು ಗಂಡನ ಮನೆಗೆ ಬಂದು ಮೂರು ದಿನವಾಗಿತ್ತು.

ಆಕೆಯ ಗಂಡ ಹರೀಶ್ ಕಲ್ಲಕುಟಿಕರ್, ಮಾವ ಮೂಕಪ್ಪ, ಅತ್ತೆ ಸೋಮವ್ವ ವಿರುದ್ಧ ಪೋಷಕರು ಆರೋಪಿಸಿದ್ದಾರೆ. ಮಗಳನ್ನು ಕಳೆದುಕೊಂಡಿರುವ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ‘ನಟ್ಟು, ಬೋಲ್ಟು’ ಡಿಕೆ ಶಿವಕುಮಾರ್ ವಾರ್ನಿಂಗ್ ಬೆನ್ನಲ್ಲೇ ಮಲ್ಟಿಪ್ಲೆಕ್ಸ್​​ಗಳಿಗೆ ಬಿಗ್ ಶಾಕ್..!

Advertisment

 ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment