ಸಾಯಿ ಲೇಔಟ್‌ಗೆ ಜಲದಿಗ್ಭಂದನ.. ಮನೆ, ರಸ್ತೆಗಳ ತುಂಬೆಲ್ಲ ನೀರೋ ನೀರು, ವಿದ್ಯುತ್ ಸ್ಥಗಿತ

author-image
Bheemappa
Updated On
ಸಾಯಿ ಲೇಔಟ್‌ಗೆ ಜಲದಿಗ್ಭಂದನ.. ಮನೆ, ರಸ್ತೆಗಳ ತುಂಬೆಲ್ಲ ನೀರೋ ನೀರು, ವಿದ್ಯುತ್ ಸ್ಥಗಿತ
Advertisment
  • ಹೊರ ಬರಲು ಆಗದೇ ಮನೆಯಲ್ಲಿ ಉಳಿದುಕೊಂಡ ಜನರು
  • ಸ್ಥಳೀಯರಿಂದ ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ
  • ಬೆಳಗ್ಗೆ ಜಿಟಿ ಜಿಟಿ ಸುರಿಯುತ್ತಿರುವ ಮಳೆಗೆ ಜನರು ಹೈರಾಣ

ಬೆಂಗಳೂರು: ಮಳೆಯಿಂದಾಗಿ ಬೆಂಗಳೂರಿನ ಸಾಯಿಲೇಔಟ್​​ ಜಲಾವೃತಗೊಂಡಿದ್ದು ಸ್ಥಳೀಯ ನಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ನಿಂತ ನೀರನ್ನು ಹೊರ ಹಾಕುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕ ಘಟನೆ ನಡೆಯದಂತೆ ಮುಂಜಾಗ್ರತಾವಾಗಿ ಲೇಔಟ್​ನಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.

ಒಂದೇ ರಾತ್ರಿ ಸುರಿದ ಮಳೆಗೆ ಇಡೀ ನಗರವೇ ತತ್ತರಿಸಿದ್ದು ಅಸ್ತವ್ಯಸ್ತ ಉಂಟಾಗಿದೆ. ಸಾಯಿ ಲೇಔಟ್​ನ ರಸ್ತೆ, ಮನೆಗಳಲ್ಲಿ ಮಳೆ ನೀರು ನಿಂತುಕೊಂಡಿದೆ. ಅಗ್ನಿಶಾಮಕ ದಳ, ಎಸ್​ಡಿಆರ್​ಎಫ್ ತಂಡ ನಿಂತುಕೊಂಡ ನೀರನ್ನು ಹೊರ ಹಾಕುತ್ತಿವೆ. ಇನ್ನು ಏರಿಯಾದಲ್ಲಿ ಸಮಸ್ಯೆಯನ್ನು ನೋಡಿ ಜನರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಶುರುವಾದ ಜಿಟಿ ಜಿಟಿ ಮಳೆ.. ವರುಣನ ಕಾಟಕ್ಕೆ ಬೇಸರ, ಜನಜೀವನ ಅಸ್ತವ್ಯಸ್ತ

publive-image

ಸಿಲಿಕಾನ್ ಸಿಟಿಯ ಹಲವು ಕಡೆ ಇಂದು ಕೂಡ ಮಳೆ ಮುಂದುವರೆದಿದೆ. ರಾತ್ರಿಯಿಂದಲೂ ಜಿಟಿ ಜಿಟಿ ಸುರಿಯುತ್ತಿರುವ ಮಳೆಗೆ ಜನರು ಹೈರಾಣ ಆಗಿದ್ದಾರೆ. ಕೋರಮಂಗಲ, ಹೆಚ್​ಎಸ್​ಆರ್​ ಲೇಔಟ್, ಸಿಲ್ಕ್ ಬೋರ್ಡ್ ಕಡೆ ತುಂತುರು ಮಳೆ ಆಗುತ್ತಿದೆ. ಬೊಮ್ಮನಹಳ್ಳಿ, ರೂಪೇನಾ ಅಗ್ರಹಾರ, ಅಗರ, ಮಡಿವಾಳ, ಬಿಟಿಎಂ ಲೇಔಟ್ ಸುತ್ತಾಮುತ್ತಾ ಹಗುರವಾದ ಮಳೆ ಸುರಿಯುತ್ತಿದೆ.

ಬೆಳಗ್ಗೆಯಾದರೂ ನೀರು ಮಾತ್ರ ಖಾಲಿಯಾಗಿಲ್ಲ. ರಾಜಕಾಲುವೆಯ ನೀರು ರಸ್ತೆ ತುಂಬಿ ಮನೆಗಳಿಗೂ ನುಗ್ಗಿದೆ. ಸಾಯಿಲೇಔಟ್​​ ಜಲಾವೃತಗೊಂಡಿದ್ದು, ಜನರು ಹೊರಗೆ ಬಾರದೆ ಮನೆಯಲ್ಲಿ ಉಳಿಯುವಂತಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವರ್ಷದಲ್ಲಿ ಸಾಯಿನಗರಕ್ಕೆ 2ನೇ ಬಾರಿ ಸಮಸ್ಯೆ ಎದುರಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment