ಪ್ರಜ್ವಲ್ ಕೇಸ್ನಿಂದ ಕಮಲಕ್ಕೂ ಕಪ್ಪು ಚುಕ್ಕೆಯ ಆತಂಕ
ರಾಷ್ಟ್ರಮಟ್ಟದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಎಚ್ಚರಿಕೆ
ಹಾಸನ ಅಶ್ಲೀಲ ಕೇಸ್ ದಳ-ಬಿಜೆಪಿಗೆ ನುಗಲಾರದ ಬಿಸಿತುಪ್ಪ
ರಾಜಕೀಯ ಅಂದ್ರೆ ರಾಜಕೀಯ ಅಷ್ಟೆ. ವಿಷಯ ಮಾನ, ಪ್ರಾಣ ಯಾವುದಾದ್ರೇನು? ಪ್ರಜ್ವಲ್ ಕೇಸ್ನಲ್ಲೂ ಅಷ್ಟೇ. ಕಾಂಗ್ರೆಸ್ಗೆ ಡಬಲ್ ಗುರಿ, ಡಬಲ್ ಹಕ್ಕಿ. ಆದ್ರೆ, ಬಿಜೆಪಿಗೆ ಎಚ್ಚರಿಕೆ ಹೆಜ್ಜೆ ಜೊತೆಗೆ ಹಸ್ತದತ್ತ ಕಿಡಿ. ದಳಕ್ಕೆ ಏನೂ ಇಲ್ಲ. ಬರಿದಾದ ಶಸ್ತ್ರಗಾರದ ಸ್ಥಿತಿ.
ಪ್ರಜ್ವಲ್. ಗೌಡರ ಕೋಟೆಯ ಉಜ್ವಲ. ಇದನ್ನೇ ನಂಬಿದ್ದ ದಳಪಡೆ, ಈಗ ಪೆನ್ಡ್ರೈವ್ ತಲೆ ಕೆಳಗಾಗಿ ಡೈ ಹೊಡೆಸಿದೆ. ಈ ಆರೋಪ ಕೇವಲ ಜೆಡಿಎಸ್ಗೆ ಮಾತ್ರವಲ್ಲ, ಕಮಲಕ್ಕೂ ಕಪ್ಪು ಚುಕ್ಕೆಯ ಆತಂಕ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡ್ತಿದೆ.
ಕೇಸ್ನಲ್ಲಿ ಎಚ್ಚರಿಕೆ ಹೆಜ್ಜೆಗೆ ಹೈಕಮಾಂಡ್ನ ಸಂದೇಶ!
ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಈ ಕೇಸ್ ಮೈತ್ರಿಕೂಟದ ಮೇಲೆ ಪರಿಣಾಮ ಬೀರುತ್ತದೆ ಅಂತ ಭಾವಿಸುವ ಅಗತ್ಯವಿಲ್ಲ ಎಂಬ ಸಂದೇಶ ಬಂದಿದೆ. ಮೈತ್ರಿಗೂ ಧಕ್ಕೆ ಆಗಬಾರದು, ಆರೋಪವೂ ಮೆತ್ತಿಕೊಳ್ಳಬಾರದು, ಕಾಂಗ್ರೆಸ್ ತಪ್ಪುಗಳನ್ನ ಎತ್ತಿ ತೋರಿಸಬೇಕು. ಇದೇ ಆದೇಶವನ್ನೇ ರಾಜ್ಯ ಬಿಜೆಪಿ ನಾಯಕರು ಬಳಸಿಕೊಳ್ತಿದ್ದಾರೆ.
ಇತ್ತ, ಕಾಂಗ್ರೆಸ್ ಮಾತ್ರ ನಿರಂತರ ಕೆಣಕ್ತಾನೆ ಇದೆ. ಬಿಜೆಪಿ-ಜೆಡಿಎಸ್ ಇಬ್ಬರ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿದೆ. ಆದ್ರೆ, ಹೆಚ್ಚು ಹೆಚ್ಚು ಹೆಚ್ಡಿಕೆಯನ್ನೇ ಗುರಿಯಾಗಿಸ್ತಿದೆ.
ಒಟ್ಟಾರೆ, ಡರ್ಟಿ ಪಿಕ್ಚರ್ ಸುತ್ತ ಸುತ್ತುತ್ತಿರುವ ಪಾಲಿಟಿಕ್ಸ್, ಎಲೆಕ್ಷನ್ವರೆಗೆ ಮಾತ್ರ ಓಡುತ್ತಾ? ಅಥವಾ ನ್ಯಾಯದಾನ ವರೆಗೆ ಮುಂದುವರೆಯುತ್ತಾ? ಅನ್ನೋದು ಹಸ್ತರೇಖೆ ಮೇಲೆ ನಿಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರಜ್ವಲ್ ಕೇಸ್ನಿಂದ ಕಮಲಕ್ಕೂ ಕಪ್ಪು ಚುಕ್ಕೆಯ ಆತಂಕ
ರಾಷ್ಟ್ರಮಟ್ಟದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಎಚ್ಚರಿಕೆ
ಹಾಸನ ಅಶ್ಲೀಲ ಕೇಸ್ ದಳ-ಬಿಜೆಪಿಗೆ ನುಗಲಾರದ ಬಿಸಿತುಪ್ಪ
ರಾಜಕೀಯ ಅಂದ್ರೆ ರಾಜಕೀಯ ಅಷ್ಟೆ. ವಿಷಯ ಮಾನ, ಪ್ರಾಣ ಯಾವುದಾದ್ರೇನು? ಪ್ರಜ್ವಲ್ ಕೇಸ್ನಲ್ಲೂ ಅಷ್ಟೇ. ಕಾಂಗ್ರೆಸ್ಗೆ ಡಬಲ್ ಗುರಿ, ಡಬಲ್ ಹಕ್ಕಿ. ಆದ್ರೆ, ಬಿಜೆಪಿಗೆ ಎಚ್ಚರಿಕೆ ಹೆಜ್ಜೆ ಜೊತೆಗೆ ಹಸ್ತದತ್ತ ಕಿಡಿ. ದಳಕ್ಕೆ ಏನೂ ಇಲ್ಲ. ಬರಿದಾದ ಶಸ್ತ್ರಗಾರದ ಸ್ಥಿತಿ.
ಪ್ರಜ್ವಲ್. ಗೌಡರ ಕೋಟೆಯ ಉಜ್ವಲ. ಇದನ್ನೇ ನಂಬಿದ್ದ ದಳಪಡೆ, ಈಗ ಪೆನ್ಡ್ರೈವ್ ತಲೆ ಕೆಳಗಾಗಿ ಡೈ ಹೊಡೆಸಿದೆ. ಈ ಆರೋಪ ಕೇವಲ ಜೆಡಿಎಸ್ಗೆ ಮಾತ್ರವಲ್ಲ, ಕಮಲಕ್ಕೂ ಕಪ್ಪು ಚುಕ್ಕೆಯ ಆತಂಕ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡ್ತಿದೆ.
ಕೇಸ್ನಲ್ಲಿ ಎಚ್ಚರಿಕೆ ಹೆಜ್ಜೆಗೆ ಹೈಕಮಾಂಡ್ನ ಸಂದೇಶ!
ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಈ ಕೇಸ್ ಮೈತ್ರಿಕೂಟದ ಮೇಲೆ ಪರಿಣಾಮ ಬೀರುತ್ತದೆ ಅಂತ ಭಾವಿಸುವ ಅಗತ್ಯವಿಲ್ಲ ಎಂಬ ಸಂದೇಶ ಬಂದಿದೆ. ಮೈತ್ರಿಗೂ ಧಕ್ಕೆ ಆಗಬಾರದು, ಆರೋಪವೂ ಮೆತ್ತಿಕೊಳ್ಳಬಾರದು, ಕಾಂಗ್ರೆಸ್ ತಪ್ಪುಗಳನ್ನ ಎತ್ತಿ ತೋರಿಸಬೇಕು. ಇದೇ ಆದೇಶವನ್ನೇ ರಾಜ್ಯ ಬಿಜೆಪಿ ನಾಯಕರು ಬಳಸಿಕೊಳ್ತಿದ್ದಾರೆ.
ಇತ್ತ, ಕಾಂಗ್ರೆಸ್ ಮಾತ್ರ ನಿರಂತರ ಕೆಣಕ್ತಾನೆ ಇದೆ. ಬಿಜೆಪಿ-ಜೆಡಿಎಸ್ ಇಬ್ಬರ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿದೆ. ಆದ್ರೆ, ಹೆಚ್ಚು ಹೆಚ್ಚು ಹೆಚ್ಡಿಕೆಯನ್ನೇ ಗುರಿಯಾಗಿಸ್ತಿದೆ.
ಒಟ್ಟಾರೆ, ಡರ್ಟಿ ಪಿಕ್ಚರ್ ಸುತ್ತ ಸುತ್ತುತ್ತಿರುವ ಪಾಲಿಟಿಕ್ಸ್, ಎಲೆಕ್ಷನ್ವರೆಗೆ ಮಾತ್ರ ಓಡುತ್ತಾ? ಅಥವಾ ನ್ಯಾಯದಾನ ವರೆಗೆ ಮುಂದುವರೆಯುತ್ತಾ? ಅನ್ನೋದು ಹಸ್ತರೇಖೆ ಮೇಲೆ ನಿಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ