/newsfirstlive-kannada/media/post_attachments/wp-content/uploads/2024/05/DEVARAJEGOWDA-3.jpg)
ಹಾಸನ: ಮಹಿಳೆ ಮೇಲೆ ದೌರ್ಜನ್ಯ ಎಸಗಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಅವರನ್ನು ಜೆಎಂಎಫ್ಸಿ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ಕೋರ್ಟ್ ಈ ಆದೇಶವನ್ನು ನೀಡಿದೆ.
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡೀಯೋ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡರನ್ನ ಒಂದು ದಿನ ಕಾಲ ಎಸ್ಐಟಿ ವಶ ಕೋರ್ಟ್ ನೀಡಿದೆ. ಈ ಪ್ರಕರಣದಲ್ಲಿ 8ನೇ ಆರೋಪಿಯಾಗಿ ಪರಿಗಣಿಸಲಾಗಿದ್ದು ನಾಳೆ ಸಂಜೆ 5 ಗಂಟೆಯವರೆಗೂ ಎಸ್ಐಟಿ ಕಸ್ಟಡಿಯಲ್ಲಿ ದೇವರಾಜೇಗೌಡ ಇರಲಿದ್ದಾರೆ.
ಇದನ್ನೂ ಓದಿ: RCB vs CSK ಪ್ಲೇ ಆಫ್; ಈ ತಂಡ ಚಿನ್ನಸ್ವಾಮಿಯಲ್ಲಿ ಮ್ಯಾಚ್ ಗೆದ್ರೆ ಸ್ಪೆಷಲ್ ರೆಕಾರ್ಡ್ ಗ್ಯಾರಂಟಿ
ಏಪ್ರಿಲ್ 23 ರಂದು ಹಾಸನ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಅನ್ನು ಮಹಿಳೆಯೊಬ್ಬರು ದಾಖಲು ಮಾಡಿದ್ದರು. ಕೇಸ್ನಲ್ಲಿ 8ನೇ ಆರೋಪಿಯಾಗಿ ದೇವರಾಜೇಗೌಡರನ್ನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಪೊಲೀಸರು ಕರೆತಂದಿದ್ದರು. ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದ ವೇಳೆ ವಿಚಾರಣೆ ನಡೆಸಲು ವಶಕ್ಕೆ ನೀಡುವಂತೆ ಎಸ್ಐಟಿ ಮನವಿ ಮಾಡಿತ್ತು.
ಇದನ್ನೂ ಓದಿ: RCB ಫ್ಯಾನ್ಸ್ಗೆ ಗುಡ್ನ್ಯೂಸ್, ಭಯ ಬೇಡ.. ಮಳೆ ಬಂದ್ರು ಚಿನ್ನಸ್ವಾಮಿಯಲ್ಲಿದೆ ಈ ಅತ್ಯುನ್ನತ ತಂತ್ರಜ್ಞಾನ; ಏನದು?
ನ್ಯಾಯಾಲಯದಲ್ಲಿ ನ್ಯಾಯಾಧೀಶರು ವಿಚಾರಣೆ ನಡೆಸುವಾಗ ಪೆನ್ಡ್ರೈವ್ ಹಂಚಿಕೆ ಮಾಡಿರೋ ಆರೋಪ ದೇವರಾಜೇಗೌಡ ಮೇಲಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದರು. ಸಾಕ್ಷಿದಾರನನ್ನ ಇಲ್ಲಿ ಆರೋಪಿ ಮಾಡಲಾಗಿದೆ. ಉದ್ದೇಶ ಪೂರ್ವಕವಾಗಿಯೇ ತರಾತುರಿಯಲ್ಲಿ ಎಫ್ಐಆರ್ ದಾಖಲಿಸಿ ಕರೆದುಕೊಂಡು ಬರಲಾಗಿದೆ ಎಂದು ದೇವರಾಜೇಗೌಡ ಪರ ವಕೀಲ ಸುನಿಲ್ ಅವರು ವಾದ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಒಂದು ದಿನ ವಶಕ್ಕೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ