Advertisment

ವಕೀಲರ ಜೊತೆ ಪ್ರಜ್ವಲ್​ ಮಾತುಕತೆ; ಬೇಲ್ ಏನಾಯ್ತು? ವಕೀಲ ಅರುಣ್ ಹೇಳಿದ್ದೇನು?

author-image
AS Harshith
Updated On
ವಕೀಲರ ಜೊತೆ ಪ್ರಜ್ವಲ್​ ಮಾತುಕತೆ; ಬೇಲ್ ಏನಾಯ್ತು? ವಕೀಲ ಅರುಣ್ ಹೇಳಿದ್ದೇನು?
Advertisment
  • ಪ್ರಜ್ವಲ್​ ರೇವಣ್ಣ ಪರ ವಕೀಲ ಅರುಣ್ ಏನಂದ್ರು?
  • ವಕೀಲರ ಬಳಿ ಪ್ರಜ್ವಲ್​ ರೇವಣ್ಣ ಹೇಳಿದ ಮಾತೇನು?
  • ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತೆ ಎಂದ ವಕೀಲರು

ಬೆಂಗಳೂರು: ಪ್ರಜ್ವಲ್​ ರೇವಣ್ಣ ಎಸ್ಐಟಿ ತನಿಖೆಗೆ ಸ್ಪಂದಿಸುತ್ತಾರೆ ಎಂದು ಅವರ ಪರ ವಕೀಲ ಅರುಣ್ ಹೇಳಿಕೆ ನೀಡಿದ್ದಾರೆ. ಹೊಳೆನರಸೀಪುರ ಟೌನ್ ಠಾಣೆ ಪ್ರಕರಣದಲ್ಲಿ ಬಂಧನವಾಗಿದೆ ಎಂದಿದ್ದಾರೆ.

Advertisment

ಮೀಡಿಯಾದಲ್ಲಿ ನೆಗೆಟಿವ್ ಕ್ಯಾಂಪೆನ್ ಬೇಡ. ನಾವು ಕೋರ್ಟ್ ನಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇವೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತೆ. ನಂತರ ರೆಗ್ಯುಲರ್ ಬೇಲ್ ಗೆ ಅರ್ಜಿ ಹಾಕ್ತೀವಿ ಎಂದು ವಕೀಲ ಅರುಣ್ ಹೇಳಿದ್ದಾರೆ.

ಪ್ರಜ್ವಲ್​ ರೇವಣ್ಣ ಅವರನ್ನು ಭೇಟಿ ಮಾಡಿ ಬಂದು ಮಾತನಾಡಿದ ವಕೀಲ ಅರುಣ್​, ರಾತ್ರಿ ಬಂದಿದ್ದೀನಿ, ಇಲ್ಲಿದ್ದೀನಿ. ತನಿಖೆಗೆ ಸಹಕಾರ ಕೊಟ್ಟಿದ್ದೀನಿ. ನಾನು ಸ್ವಯಂ ಪ್ರೇರಿತವಾಗಿಯೇ ಬಂದಿದ್ದೀನಿ ಎಂದು ಪ್ರಜ್ವಲ್​ ರೇವಣ್ಣ ಹೇಳಿದ್ದಾರೆ ಎಂದು ಅರುಣ್​ ಮಾಧ್ಯಮದ ಮುಂದೆ ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್​ಗೆ ಜರ್ಮನಿಯಲ್ಲಿ ಸಹಾಯ ಮಾಡಿದ್ದು ಯಾರು ಗೊತ್ತಾ? ಮೊಬೈಲ್​ ವಶಕ್ಕೆ ಪಡೆದ ಮೇಲೆ ಏನಾಯ್ತು?

Advertisment

ಬೇಲ್ ಅಪ್ಲಿಕೇಶನ್ ಪೆಂಢಿಂಗ್ ಇದೆ. ಅದರ ಬಗ್ಗೆ ಮಾತಾಡಲ್ಲ‌. ತನಿಖೆಗೆ ಸಹಕಾರ ಕೊಡ್ತಾರೆ ಎಂದು ಪ್ರಜ್ವಲ್ ಪರ ವಕೀಲ ಅರುಣ್ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment