/newsfirstlive-kannada/media/post_attachments/wp-content/uploads/2024/09/Don-Prakash-Pande.jpg)
ಭೂಗತ ಪಾತಕಿಯೊಬ್ಬನಿಗೆ ಸಂತ ದೀಕ್ಷೆ ನೀಡಲಾಗಿದೆ. ಅಷ್ಟೇ ಅಲ್ಲ ಅವನಿಗೆ ಮಠಗಳಿಗೆ ಪೀಠಾಧಿಪತಿಯನ್ನಾಗಿಯೂ ನೇಮಿಸಲಾಗಿದೆ. ಈ ಘಟನೆ ನಡೆದಿದ್ದು ಉತ್ತರಾಖಂಡ್​ದ ಅಲ್ಮೋರಾದಲ್ಲಿ.
ಅಲ್ಮೋರಾದ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕುಖ್ಯಾತ ಭೂಗತ ಪಾತಕಿ ಪ್ರಕಾಶ್ ಪಾಂಡೆ ಅಲಿಯಾಸ್ ಪಿಪಿ ಪಾಂಡೆಗೆ ಜೈಲಿನಲ್ಲಿಯೇ ದೀಕ್ಷೆ ನೀಡಲಾಗಿದೆಯಂತೆ. ಅಲ್ಲದೇ ಜುನಾ ಅಖಾಡದ ಮಹಾಂತರನ್ನಾಗಿ ನೇಮಿಸಲಾಗಿದೆಯಂತೆ.
/newsfirstlive-kannada/media/post_attachments/wp-content/uploads/2024/09/Don-Prakash-Pande-1.jpg)
ಅಲ್ಮೋರಾದ ರಾಣಿಖೇತ್, ಖಾನೌಯ ಗ್ರಾಮದ ಪ್ರಕಾಶ್ ಪಾಂಡೆ ಅಲಿಯಾ ಪಿ.ಪಿ ಪಾಂಡೆ ಛೋಟಾ ರಾಜನ್​​ ಜೊತೆ ಗುರುತಿಸಿಕೊಂಡಿದ್ದ. ಆತನೊಂದಿಗೆ ಹಲವು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಭೂಗತ ಪಾತಕಿ ಪ್ರಕಾಶ್ ಪಾಂಡೆ ತಂದೆ ಓರ್ವ ಸೈನಿಕನಾಗಿದ್ದ. ತಾಯಿ ಚಿಕ್ಕಂದಿಯಲ್ಲಿಯೇ ತೀರಿಕೊಂಡಿದ್ದರಿಂದ ಚಟಗಳ ದಾಸನಾಗಿ ಚಿಕ್ಕ ವಯಸ್ಸಿನಲ್ಲಿಯೇ ಮುಂಬೈಗೆ ತೆರಳಿದ್ದ ಪ್ರಕಾಶ್ ಪಾಂಡೆ ತೊಂಬತ್ತರ ದಶಕದಲ್ಲಿ ಚೋಟಾ ರಾಜನ್​ನನ್ನು ಭೇಟಿಯಾಗಿದ್ದ. ಅವನ ವಿಶ್ವಾಸ ಗಳಿಸಿ ಛೋಟಾ ರಾಜನ್ ಬಲಗೈ ಎನಿಸಿದ್ದ.
ಛೋಟಾ ರಾಜನ್ ಮತ್ತು ದಾವೂದ್ ನಡುವೆ ಮನಸ್ತಾಪ ಉಂಟಾದಾಗ ದಾವೂದ್ ಅಡಗುತಾಣಗಳ ಮಾಹಿತಿ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದ. ಅಲ್ಲದೇ ದಾವೂದ್​ನನ್ನು ಕೊಲ್ಲಲು ಪಾಕಿಸ್ತಾನಕ್ಕೂ ತೆರಳಿದ್ದ ಎನ್ನಲಾಗ್ತಿದೆ.
/newsfirstlive-kannada/media/post_attachments/wp-content/uploads/2024/09/Don-Chota-Rajan.jpg)
ಕೆಲ ಸಮಯದ ನಂತರ ಛೋಟಾ ರಾಜನ್ ಜೊತೆ ಮನಸ್ತಾಪ ಉಂಟಾಗಿ ಅವನನ್ನೂ ತೊರೆದು ಪ್ರತ್ಯೇಕ ಗ್ಯಾಂಗ್ ರಚಿಸಿಕೊಂಡಿದ್ದ. ದೆಹಲಿಯ ಕ್ರೈಂ ಬ್ರ್ಯಾಂಚ್ ಎಸಿಪಿ ರಾಜ್​ಬೀರ್​ಸಿಂಗ್ ಹಾಡಹಗಲೇ ಕೊಲೆಯಾದಾಗ ಪ್ರಕಾಶ್ ಪಾಂಡೆ ಹೆಸರು ಕೇಳಿ ಬಂದಿತ್ತು. ಬಳಿಕ ದೇಶ ತೊರೆದು ವಿಯೆಟ್ನಾಂನಲ್ಲಿ ವಾಸಿಸುತ್ತಿದ್ದ ಪ್ರಕಾಶ್ ಪಾಂಡೆ ಅಲ್ಲಿಂದಲೇ ತನ್ನ ವ್ಯವಹಾರ ನಿಯಂತ್ರಿಸುತ್ತಿದ್ದ.
/newsfirstlive-kannada/media/post_attachments/wp-content/uploads/2024/09/Don-Prakash-Pande-2.jpg)
ಕೊಲೆ ಪ್ರಕರಣವೊಂದರಲ್ಲಿ ಪೊಲೀಸರು ವಿಯೆಟ್ನಾಂನಲ್ಲಿ ಬಂಧಿಸಿ ಅವನನ್ನು ಉತ್ತರಾಖಂಡ್​ಗೆ ಕರೆತಂದಿದ್ದರು. ಆ ಬಳಿಕ ಉತ್ತರಾಖಂಡ್​ನ ವಿವಿಧ ಜೈಲುಗಳಿಗೆ ವರ್ಗಾಯಿಸಲಾಗಿತ್ತು. ಸದ್ಯ ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಪ್ರಕಾಶ್ ಪಾಂಡೆಗೆ ಆಗಸ್ಟ್​ನಲ್ಲಿ ಅಲ್ಮೋರಾ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಇತ್ತೀಚೆಗೆ ಜುನಾ ಅಖಾಡದ ಸಂತರ ಗುಂಪೊಂದು ಆತನಿಗೆ ದೀಕ್ಷೆ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ ಹಲವು ಮಠಗಳ ಉಸ್ತುವಾರಿಯನ್ನೂ ನೀಡಿದ್ದಾರಂತೆ. ಈ ವಿಚಾರ ಉತ್ತರಾಂಡ್​​ದಲ್ಲಿ ಬಿರುಗಾಳಿ ಎಬ್ಬಿಸಿದೆ. ಭೂಗತ ಪಾತಕಿಗೆ ಸಂತ ದೀಕ್ಷೆ ನೀಡಿದ್ದಕ್ಕೆ ಜುನಾ ಅಖಾಡಾ ಮಹಾ ಪೋಷಕ ಶ್ರೀ ಮಹಂತಗಿರಿ ಕಿಡಿಕಾರಿದ್ದಾರೆ. ಇದು ಸಂಪೂರ್ಣ ತಪ್ಪು ಈ ಬಗ್ಗೆ ತನಿಖೆ ಮಾಡಲು ಜುನಾ ಅಖಾಡಾದಿಂದ 7 ಜನರ ಸಮಿತಿ ರಚಿಸಿದ್ದಾರೆ. ಇಂತವರಿಗೆಲ್ಲ ಸನ್ಯಾಸ ದೀಕ್ಷೆ ನೀಡುವುದು ಅಂದರೆ ಬೆಕ್ಕು ಕಾಶಿ ಯಾತ್ರೆ ಮಾಡಿದ ಕಥೆಯಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us