newsfirstkannada.com

‘ಬಾಯಲ್ಲಿ ರಾಮಾಯಣ, ಒಳಗೆಲ್ಲಾ ಕಾಮಾಯಣ’- JDS ಬಗ್ಗೆ ಪ್ರಕಾಶ್​ ರಾಜ್ ವ್ಯಂಗ್ಯ

Share :

Published May 1, 2024 at 5:24pm

    ಕಳೆದ ಮೂರು ದಿನಗಳಿಂದ ಹಾಸನ ಅಶ್ಲೀಲ ವಿಡಿಯೋ ಕೇಸ್​​ ಭಾರೀ ಸದ್ದು

    ಮಾಜಿ ಸಚಿವ ಹೆಚ್​​.ಡಿ ರೇವಣ್ಣ, ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್..!

    ಜೆಡಿಎಸ್​ ವಿರುದ್ಧ ಆಕ್ರೋಶ ಹೊರಹಾಕಿದ ಬಹುಭಾಷಾ ನಟ ಪ್ರಕಾಶ್​ ರಾಜ್​​

ಬೆಂಗಳೂರು: ಕಳೆದ ಮೂರು ದಿನಗಳಿಂದ ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಹಾಸನ ಅಶ್ಲೀಲ ವಿಡಿಯೋ ಕೇಸ್​​ನಲ್ಲಿ ಮಾಜಿ ಸಚಿವ ಹೆಚ್​​.ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​​​​ ಸರ್ಕಾರ ಕೇಸ್​ ತನಿಖೆಗಾಗಿ ಎಸ್​ಐಟಿ ರಚನೆ ಮಾಡಿ ಆದೇಶಿಸಿದೆ. ಈ ನೀಚ ಕೃತ್ಯವನ್ನು ಹಲವು ಗಣ್ಯರು ಖಂಡಿಸಿದ್ದಾರೆ. ಬಹುಭಾಷಾ ನಟ ಪ್ರಕಾಶ್​ ರಾಜ್​ ಕೂಟ ಈ ವಿಚಾರದ ವಿರುದ್ಧ ಧ್ವನಿ ಎತ್ತಿದ್ದಾರೆ.


ಇತ್ತೀಚೆಗೆ ನಿನ್ನ ದಾರಿ ತಪ್ಪಿದ ಮಗಾ ಪ್ರಜ್ವಲ್ ಎಲ್ಲಪ್ಪಾ? ಎಂದು ಪ್ರಶ್ನಿಸೋ ಮೂಲಕ ಪ್ರಕಾಶ್​ ರಾಜ್​​ ಆಕ್ರೋಶ ಹೊರಹಾಕಿದ್ದರು. ಈಗ ಮತ್ತೆ ಪ್ರಕಾಶ್​ ರಾಜ್​​​ ಟ್ವೀಟ್​ ಮಾಡಿದ್ದು, ಬಾಯಲ್ಲಿ ರಾಮಾಯಣ, ಒಳಗೆಲ್ಲಾ ಕಾಮಾಯಣ.. ಇದು ಯಾವ ಪಕ್ಷ? ನೀವೇ ಹೇಳಿ ಎಂದು ಮತ್ತೆ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಹಲವರು ಬಿಜೆಪಿ-ಜೆಡಿಎಸ್​​​ ಎಂದು ಉತ್ತರ ನೀಡಿದ್ದಾರೆ.

ಇದನ್ನೂ ಓದಿ: VIDEO: ಪ್ರಜ್ವಲ್​ ರೇವಣ್ಣ ಅನ್ನೋ ಕೀಚಕನನ್ನು ಗೆಲ್ಲಿಗೇರಿಸಿ; ತೆಲುಗು ಸ್ಟಾರ್​​ ನಟಿ ಪೂನಂ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬಾಯಲ್ಲಿ ರಾಮಾಯಣ, ಒಳಗೆಲ್ಲಾ ಕಾಮಾಯಣ’- JDS ಬಗ್ಗೆ ಪ್ರಕಾಶ್​ ರಾಜ್ ವ್ಯಂಗ್ಯ

https://newsfirstlive.com/wp-content/uploads/2024/04/Prakash-raj-on-Prajwal-Revanna.jpg

    ಕಳೆದ ಮೂರು ದಿನಗಳಿಂದ ಹಾಸನ ಅಶ್ಲೀಲ ವಿಡಿಯೋ ಕೇಸ್​​ ಭಾರೀ ಸದ್ದು

    ಮಾಜಿ ಸಚಿವ ಹೆಚ್​​.ಡಿ ರೇವಣ್ಣ, ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್..!

    ಜೆಡಿಎಸ್​ ವಿರುದ್ಧ ಆಕ್ರೋಶ ಹೊರಹಾಕಿದ ಬಹುಭಾಷಾ ನಟ ಪ್ರಕಾಶ್​ ರಾಜ್​​

ಬೆಂಗಳೂರು: ಕಳೆದ ಮೂರು ದಿನಗಳಿಂದ ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಹಾಸನ ಅಶ್ಲೀಲ ವಿಡಿಯೋ ಕೇಸ್​​ನಲ್ಲಿ ಮಾಜಿ ಸಚಿವ ಹೆಚ್​​.ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​​​​ ಸರ್ಕಾರ ಕೇಸ್​ ತನಿಖೆಗಾಗಿ ಎಸ್​ಐಟಿ ರಚನೆ ಮಾಡಿ ಆದೇಶಿಸಿದೆ. ಈ ನೀಚ ಕೃತ್ಯವನ್ನು ಹಲವು ಗಣ್ಯರು ಖಂಡಿಸಿದ್ದಾರೆ. ಬಹುಭಾಷಾ ನಟ ಪ್ರಕಾಶ್​ ರಾಜ್​ ಕೂಟ ಈ ವಿಚಾರದ ವಿರುದ್ಧ ಧ್ವನಿ ಎತ್ತಿದ್ದಾರೆ.


ಇತ್ತೀಚೆಗೆ ನಿನ್ನ ದಾರಿ ತಪ್ಪಿದ ಮಗಾ ಪ್ರಜ್ವಲ್ ಎಲ್ಲಪ್ಪಾ? ಎಂದು ಪ್ರಶ್ನಿಸೋ ಮೂಲಕ ಪ್ರಕಾಶ್​ ರಾಜ್​​ ಆಕ್ರೋಶ ಹೊರಹಾಕಿದ್ದರು. ಈಗ ಮತ್ತೆ ಪ್ರಕಾಶ್​ ರಾಜ್​​​ ಟ್ವೀಟ್​ ಮಾಡಿದ್ದು, ಬಾಯಲ್ಲಿ ರಾಮಾಯಣ, ಒಳಗೆಲ್ಲಾ ಕಾಮಾಯಣ.. ಇದು ಯಾವ ಪಕ್ಷ? ನೀವೇ ಹೇಳಿ ಎಂದು ಮತ್ತೆ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಹಲವರು ಬಿಜೆಪಿ-ಜೆಡಿಎಸ್​​​ ಎಂದು ಉತ್ತರ ನೀಡಿದ್ದಾರೆ.

ಇದನ್ನೂ ಓದಿ: VIDEO: ಪ್ರಜ್ವಲ್​ ರೇವಣ್ಣ ಅನ್ನೋ ಕೀಚಕನನ್ನು ಗೆಲ್ಲಿಗೇರಿಸಿ; ತೆಲುಗು ಸ್ಟಾರ್​​ ನಟಿ ಪೂನಂ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More