Advertisment

VIDEO: ‘ಕಳ್ಳ ನನ್ನ ಮಕ್ಕಳ ಬಗ್ಗೆ ಮಾತಾಡಲ್ಲ’- ನಟ ದರ್ಶನ್​​​ ಬೇಲ್​​ ಬಗ್ಗೆ ಪ್ರಕಾಶ್​​ ರಾಜ್​​ ರಿಯಾಕ್ಷನ್​​

author-image
Gopal Kulkarni
Updated On
VIDEO: ‘ಕಳ್ಳ ನನ್ನ ಮಕ್ಕಳ ಬಗ್ಗೆ ಮಾತಾಡಲ್ಲ’- ನಟ ದರ್ಶನ್​​​ ಬೇಲ್​​ ಬಗ್ಗೆ ಪ್ರಕಾಶ್​​ ರಾಜ್​​ ರಿಯಾಕ್ಷನ್​​
Advertisment
  • ಮೈಸೂರಲ್ಲಿ ಬಹು ಭಾಷಾನಟ ಪ್ರಕಾಶ್ ರಾಜ್ ಹೇಳಿಕೆ
  • ನಟ ದರ್ಶನ್ ಜಾಮೀನು ಮಂಜೂರು ವಿಚಾರದ ಬಗ್ಗೆ ಮಾತು
  • ಕಳ್‌ ನನ್ನ ಮಕ್ಕಳ ಬಗ್ಗೆ ಮಾತನಾಡಲು ಬಂದಿಲ್ಲ ಎಂದ ಪ್ರಕಾಶ್​

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಆಚೆ ದರ್ಶನ್ ಹಾಗೂ ಜೈಲಿನಲ್ಲಿರುವ ಪವಿತ್ರಗೌಡ ಮತ್ತು ಐವರಿಗೆ ಇಂದು ಹೈಕೋರ್ಟ್ ಪೂರ್ಣಾವಧಿ ಜಾಮೀನು ಮಂಜೂರು ಮಾಡಿದೆ. ಇದೇ ವಿಚಾರವಾಗಿ ಅನೇಕ ನಟ ನಟಿಯರು ತಮ್ಮ ಸಂಭ್ರಮವವನ್ನು ಹಂಚಿಕೊಂಡಿದ್ದಾರೆ.ಮೈಸೂರಿನಲ್ಲಿ ಇದೇ ವಿಚಾರವಾಗಿ ಪ್ರಕಾಶ್ ರಾಜ್ ಸ್ವಲ್ಪ ಖಾರವಾಗಿ ಉತ್ತರಿಸಿದ್ದಾರೆ.

Advertisment

ಇದನ್ನೂ ಓದಿ:ದರ್ಶನ್​​ಗೆ ಪೂರ್ಣಾವಧಿಯ ಜಾಮೀನು; ಹೈಕೋರ್ಟ್​ನಲ್ಲಿ ವಾದ-ಪ್ರತಿವಾದ ಹೇಗಿತ್ತು..?

ಮೈಸೂರಿನಲ್ಲಿ ಇಂದು ಇದೇ ವಿಚಾರವಾಗಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರಾಜ್​, ನಾನು ಸಿನಿಮಾ ಹಾಗೂ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ನಾನು ನನ್ನ ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ಕಳ್ ನನ್ ಮಕ್ಕಳ ಬಗ್ಗೆ ಮಾತನಾಡಲು ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಬರೋಬ್ಬರಿ 6 ತಿಂಗಳ ಬಳಿಕ ರಿಲೀಫ್; ಪವಿತ್ರ ಗೌಡ ಜಾಮೀನು ಬಗ್ಗೆ ವಕೀಲರು ಹೇಳಿದ್ದೇನು..?

Advertisment

ಖಾಸಗಿ ಕಾರ್ಯಕ್ರಮಕ್ಕೆ ಅಂತ ಚೆನ್ನೈನಿಂದ ಮೈಸೂರಿಗೆ ಬಂದಿದ್ದ ಪ್ರಕಾಶ್ ರಾಜ್​ ಮಾಧ್ಯಮಗಳ ಜೊತೆ ಮಾತನಾಡುತ್ತಿರುವಾಗ ದರ್ಶನ್ ಅವರಿಗೆ ಬೇಲ್ ಸಿಕ್ಕಿರುವ ಬಗ್ಗೆ ಪ್ರಶ್ನೆ ಬಂದಿದೆ ಈ ವೇಳೆ ಮಾತನಾಡಿದ ಪ್ರಕಾಶ್ ರಾಜ್, ಸಿನಿಮಾ ರಾಜಕೀಯದ ಬಗ್ಗೆ ನಾನು ಮಾತನಾಡುವುದಿಲ್ಲ. ಇಲ್ಲಿ ನನ್ನ ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ಕಳ್ ನನ್ ಮಕ್ಕಳ ಬಗ್ಗೆ ಅಲ್ಲ ಎಂದು ಪ್ರತಿಕ್ರಿಯಿಸಿದರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment