newsfirstkannada.com

’ಡಿಕೆಶಿ ಸಾಹೇಬರು ನಟ ದರ್ಶನ್​​ಗೆ ಕರೆದು ಬುದ್ಧಿ ಹೇಳಬಹುದು’- ಉಮಾಪತಿ ಹೀಗಂದಿದ್ಯಾಕೆ?

Share :

Published February 23, 2024 at 4:41pm

Update February 23, 2024 at 4:42pm

    ಮುಂದುವರಿದ ನಟ ದರ್ಶನ್​​, ಉಮಾಪತಿ ಶ್ರೀನಿವಾಸ್​ ಬೀದಿ ಜಗಳ..!

    ಡಿಕೆಶಿ ಜೊತೆ ದರ್ಶನ್​ ವಿಚಾರ ಚರ್ಚೆ ಮಾಡಿದ್ರಾ ನಿರ್ಮಾಪಕ ಉಮಾಪತಿ?

    ದರ್ಶನ್​ಗೆ ಕರೆದು ಡಿಕೆಶಿ ಸಾಹೇಬರು ಕರೆದು ಬುದ್ಧಿ ಹೇಳಬಹುದು ಎಂದ್ರು!

ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ನಡುವಿನ ಜಗಳ ಮುಂದುವರಿದಿದೆ. ತನ್ನನ್ನು ತಗಡು ಎಂದಿದ್ದ ದರ್ಶನ್​​ ವಿರುದ್ಧ ಉಮಾಪತಿ ಶ್ರೀನಿವಾಸ್​ ಮಾತಾಡುತ್ತಲೇ ಇದ್ದಾರೆ. ಇಂದು ಡಿಸಿಎಂ ಡಿ.ಕೆ ಶಿವಕುಮಾರ್​ ಭೇಟಿ ಮಾಡಿದ ಬಳಿಕ ಕೂಡ ಈ ಬಗ್ಗೆ ರಿಯಾಕ್ಟ್​ ಮಾಡಿದ್ದಾರೆ.

ಡಿ.ಕೆ ಶಿವಕುಮಾರ್​ ಅವರೊಂದಿಗೆ ಏನಾದ್ರೂ ದರ್ಶನ್​ ವಿಚಾರ ಚರ್ಚೆ ಮಾಡಿದ್ರಾ? ಎಂಬ ಪ್ರಶ್ನೆ ಉಮಾಪತಿಗೆ ಕೇಳಲಾಯ್ತು. ಅದಕ್ಕೆ ಉತ್ತರ ನೀಡಿದ ಉಮಾಪತಿ ಶ್ರೀನಿವಾಸ್​​, ನಾನು ನನ್ನ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತಾಡಕ್ಕೆ ಬಂದಿದ್ದೆ. ಸಾಹೇಬರ ಜೊತೆ ನೀರಿನ ಸಮಸ್ಯೆ ಬಗ್ಗೆ ಮಾತಾಡಿದ್ದೀನಿ ಎಂದರು.

ಇನ್ನೂ, ಮಾಧ್ಯಮಗಳಲ್ಲಿ ನನ್ನ ಮತ್ತು ದರ್ಶನ್​ ನಡುವಿನ ಗಲಾಟೆ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಸಾಹೇಬರಿಗೂ ಕೂಡ ಈ ವಿಚಾರ ಗೊತ್ತಿದೆ. ಸಾಹೇಬರು ದರ್ಶನ್​ ಅವರನ್ನು ಕರೆದು ಬುದ್ಧಿ ಹೇಳಬಹುದು ಎಂದಿದ್ದಾರೆ. ಈ ಮೂಲಕ ಡಿ.ಕೆ ಶಿವಕುಮಾರ್​ ಜತೆ ದರ್ಶನ್​ ವಿಚಾರ ಚರ್ಚೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

’ಡಿಕೆಶಿ ಸಾಹೇಬರು ನಟ ದರ್ಶನ್​​ಗೆ ಕರೆದು ಬುದ್ಧಿ ಹೇಳಬಹುದು’- ಉಮಾಪತಿ ಹೀಗಂದಿದ್ಯಾಕೆ?

https://newsfirstlive.com/wp-content/uploads/2024/02/DARSHAN_UMAPATI.jpg

    ಮುಂದುವರಿದ ನಟ ದರ್ಶನ್​​, ಉಮಾಪತಿ ಶ್ರೀನಿವಾಸ್​ ಬೀದಿ ಜಗಳ..!

    ಡಿಕೆಶಿ ಜೊತೆ ದರ್ಶನ್​ ವಿಚಾರ ಚರ್ಚೆ ಮಾಡಿದ್ರಾ ನಿರ್ಮಾಪಕ ಉಮಾಪತಿ?

    ದರ್ಶನ್​ಗೆ ಕರೆದು ಡಿಕೆಶಿ ಸಾಹೇಬರು ಕರೆದು ಬುದ್ಧಿ ಹೇಳಬಹುದು ಎಂದ್ರು!

ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ನಡುವಿನ ಜಗಳ ಮುಂದುವರಿದಿದೆ. ತನ್ನನ್ನು ತಗಡು ಎಂದಿದ್ದ ದರ್ಶನ್​​ ವಿರುದ್ಧ ಉಮಾಪತಿ ಶ್ರೀನಿವಾಸ್​ ಮಾತಾಡುತ್ತಲೇ ಇದ್ದಾರೆ. ಇಂದು ಡಿಸಿಎಂ ಡಿ.ಕೆ ಶಿವಕುಮಾರ್​ ಭೇಟಿ ಮಾಡಿದ ಬಳಿಕ ಕೂಡ ಈ ಬಗ್ಗೆ ರಿಯಾಕ್ಟ್​ ಮಾಡಿದ್ದಾರೆ.

ಡಿ.ಕೆ ಶಿವಕುಮಾರ್​ ಅವರೊಂದಿಗೆ ಏನಾದ್ರೂ ದರ್ಶನ್​ ವಿಚಾರ ಚರ್ಚೆ ಮಾಡಿದ್ರಾ? ಎಂಬ ಪ್ರಶ್ನೆ ಉಮಾಪತಿಗೆ ಕೇಳಲಾಯ್ತು. ಅದಕ್ಕೆ ಉತ್ತರ ನೀಡಿದ ಉಮಾಪತಿ ಶ್ರೀನಿವಾಸ್​​, ನಾನು ನನ್ನ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತಾಡಕ್ಕೆ ಬಂದಿದ್ದೆ. ಸಾಹೇಬರ ಜೊತೆ ನೀರಿನ ಸಮಸ್ಯೆ ಬಗ್ಗೆ ಮಾತಾಡಿದ್ದೀನಿ ಎಂದರು.

ಇನ್ನೂ, ಮಾಧ್ಯಮಗಳಲ್ಲಿ ನನ್ನ ಮತ್ತು ದರ್ಶನ್​ ನಡುವಿನ ಗಲಾಟೆ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಸಾಹೇಬರಿಗೂ ಕೂಡ ಈ ವಿಚಾರ ಗೊತ್ತಿದೆ. ಸಾಹೇಬರು ದರ್ಶನ್​ ಅವರನ್ನು ಕರೆದು ಬುದ್ಧಿ ಹೇಳಬಹುದು ಎಂದಿದ್ದಾರೆ. ಈ ಮೂಲಕ ಡಿ.ಕೆ ಶಿವಕುಮಾರ್​ ಜತೆ ದರ್ಶನ್​ ವಿಚಾರ ಚರ್ಚೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More