newsfirstkannada.com

ದತ್ತಾತ್ರೇಯ ದೇವಸ್ಥಾನದಲ್ಲಿ ಪುಡಿ ರೌಡಿಯ ಅಟ್ಟಹಾಸ; ಭಕ್ತರ ತಲೆ ಮೇಲೆ ಕಾಲಿಟ್ಟು ದೌರ್ಜನ್ಯ

Share :

Published May 29, 2023 at 9:03am

    ದತ್ತಾತ್ರೇಯ ದೇವಸ್ಥಾನದಲ್ಲಿ ಪುಡಿ ರೌಡಿಯ ಅಟ್ಟಹಾಸ

    ಭಕ್ತರ ತಲೆ ಮೇಲೆ ಕಾಲಿಟ್ಟು ದೌರ್ಜನ್ಯ

    ಗಾಂಜಾ ಮತ್ತಿನಲ್ಲಿದ್ದ ಪುಡಿ ರೌಡಿ

ಕಲಬುರಗಿ: ದತ್ತಾತ್ರೇಯ ದೇವರ ಆಸ್ಥಾನದಲ್ಲಿ ಪುಡಿ ರೌಡಿಯೊಬ್ಬ ಭಕ್ತರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಗಾಂಜಾ ಮತ್ತಿನಲ್ಲಿ ಯಲ್ಲಪ್ಪ ಕಲ್ಲೂರ್ ಎಂಬಾತ ಭಕ್ತರ ತಲೆ ಮೇಲೆ ಕಾಲಿಟ್ಟು ದಬ್ಬಾಳಿಕೆ ನಡೆಸಿದ್ದಾನೆ.

ಗಾಣಗಾಪುರ ದತ್ತಾತ್ರೇಯನ ಸನ್ನಿಧಿಯು ಮಾಜಿ ಪ್ರಧಾನಿ, ಅನೇಕ ಮಾಜಿ ಸಿಎಂ ಗಳ ನೆಚ್ಚಿನ ದೇವಸ್ಥಾನ ಎಂದೆನಿಸಿಕೊಂಡಿದೆ. ಈ ದೇವಾಲಯದಲ್ಲಿ ನೆಲೆಸಿರುವ ದತ್ತನ ದರ್ಶನಕ್ಕೆ ದೇಶದ ವಿವಿದೆಡೆಯಿಂದ ಸಾವಿರಾರು ಭಕ್ತರು ಬರುತ್ತಾರೆ. ಆದ್ರೆ ದತ್ತಾತ್ರೇಯ ದೇವಸ್ಥಾನದ ಸಂಗಮ ಸ್ಥಳದಲ್ಲಿ ಪುಡಿ ರೌಡಿ ಯಲ್ಲಪ್ಪ ಕಲ್ಲೂರ್ ಭಕ್ತರ ಮೇಲೆ ದೌರ್ಜನ್ಯ ನಡೆಸಿದ್ದಾನೆ.

ದತ್ತ ಚರಿತ್ರೆ ಪಾರಾಯಣ ಮಾಡುವ ವೇಳೆ ಪುಡಿ ರೌಡಿಯ ಅಟ್ಟಹಾಸ

ಯಲ್ಲಪ್ಪ ಕಲ್ಲೂರ್ ಗಾಣಗಾಪುರ ನಿವಾಸಿಯಾಗಿದ್ದು, ವೃಕ್ಷದ ಕೆಳಗೆ ದತ್ತ ಚರಿತ್ರೆ ಪಾರಾಯಣ ಮಾಡುವ ಭಕ್ತರು ಮೇಲೆ ಹಲ್ಲೆ ಮಾಡಿದ್ದಾನೆ. ದತ್ತ‌ ಚರಿತ್ರೆ ಪಾರಾಯಣಕ್ಕೆ ಕೂತ ಸಮಯದಲ್ಲೇ ಭಕ್ತರ ತಲೆ ಮೇಲೆ ಕಾಲಿಟ್ಟು ದೌರ್ಜನ್ಯವೆಸಗಿದ್ದಾನೆ.

ಗಾಂಜಾ ಮತ್ತಿನಲ್ಲಿದ್ದ ಪುಡಿ ರೌಡಿ

ಪುಡಿ ರೌಡಿ ಯಲ್ಲಪ್ಪ ಕಲ್ಲೂರ್ ಕಳೆದ ಕೆಲ ವರ್ಷಗಳಿಂದ ಭಕ್ತರಿಗೆ ಕಿರುಕುಳ ನೀಡುತ್ತಿದ್ದು, ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಆದರೆ ಗಾಣಗಾಪುರ ಪೊಲೀಸರು ಮಾತ್ರ ಯಲ್ಲಪ್ಪನ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ.  ಗ್ರಾಮಸ್ಥರ ಆಕ್ರೋಶ ಕೇಳಿ ಪೊಲೀಸರು ಕೊನೆಗೂ ಯಲ್ಲಪ್ಪನನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದತ್ತಾತ್ರೇಯ ದೇವಸ್ಥಾನದಲ್ಲಿ ಪುಡಿ ರೌಡಿಯ ಅಟ್ಟಹಾಸ; ಭಕ್ತರ ತಲೆ ಮೇಲೆ ಕಾಲಿಟ್ಟು ದೌರ್ಜನ್ಯ

https://newsfirstlive.com/wp-content/uploads/2023/05/Yallappa-Kallur.jpg

    ದತ್ತಾತ್ರೇಯ ದೇವಸ್ಥಾನದಲ್ಲಿ ಪುಡಿ ರೌಡಿಯ ಅಟ್ಟಹಾಸ

    ಭಕ್ತರ ತಲೆ ಮೇಲೆ ಕಾಲಿಟ್ಟು ದೌರ್ಜನ್ಯ

    ಗಾಂಜಾ ಮತ್ತಿನಲ್ಲಿದ್ದ ಪುಡಿ ರೌಡಿ

ಕಲಬುರಗಿ: ದತ್ತಾತ್ರೇಯ ದೇವರ ಆಸ್ಥಾನದಲ್ಲಿ ಪುಡಿ ರೌಡಿಯೊಬ್ಬ ಭಕ್ತರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಗಾಂಜಾ ಮತ್ತಿನಲ್ಲಿ ಯಲ್ಲಪ್ಪ ಕಲ್ಲೂರ್ ಎಂಬಾತ ಭಕ್ತರ ತಲೆ ಮೇಲೆ ಕಾಲಿಟ್ಟು ದಬ್ಬಾಳಿಕೆ ನಡೆಸಿದ್ದಾನೆ.

ಗಾಣಗಾಪುರ ದತ್ತಾತ್ರೇಯನ ಸನ್ನಿಧಿಯು ಮಾಜಿ ಪ್ರಧಾನಿ, ಅನೇಕ ಮಾಜಿ ಸಿಎಂ ಗಳ ನೆಚ್ಚಿನ ದೇವಸ್ಥಾನ ಎಂದೆನಿಸಿಕೊಂಡಿದೆ. ಈ ದೇವಾಲಯದಲ್ಲಿ ನೆಲೆಸಿರುವ ದತ್ತನ ದರ್ಶನಕ್ಕೆ ದೇಶದ ವಿವಿದೆಡೆಯಿಂದ ಸಾವಿರಾರು ಭಕ್ತರು ಬರುತ್ತಾರೆ. ಆದ್ರೆ ದತ್ತಾತ್ರೇಯ ದೇವಸ್ಥಾನದ ಸಂಗಮ ಸ್ಥಳದಲ್ಲಿ ಪುಡಿ ರೌಡಿ ಯಲ್ಲಪ್ಪ ಕಲ್ಲೂರ್ ಭಕ್ತರ ಮೇಲೆ ದೌರ್ಜನ್ಯ ನಡೆಸಿದ್ದಾನೆ.

ದತ್ತ ಚರಿತ್ರೆ ಪಾರಾಯಣ ಮಾಡುವ ವೇಳೆ ಪುಡಿ ರೌಡಿಯ ಅಟ್ಟಹಾಸ

ಯಲ್ಲಪ್ಪ ಕಲ್ಲೂರ್ ಗಾಣಗಾಪುರ ನಿವಾಸಿಯಾಗಿದ್ದು, ವೃಕ್ಷದ ಕೆಳಗೆ ದತ್ತ ಚರಿತ್ರೆ ಪಾರಾಯಣ ಮಾಡುವ ಭಕ್ತರು ಮೇಲೆ ಹಲ್ಲೆ ಮಾಡಿದ್ದಾನೆ. ದತ್ತ‌ ಚರಿತ್ರೆ ಪಾರಾಯಣಕ್ಕೆ ಕೂತ ಸಮಯದಲ್ಲೇ ಭಕ್ತರ ತಲೆ ಮೇಲೆ ಕಾಲಿಟ್ಟು ದೌರ್ಜನ್ಯವೆಸಗಿದ್ದಾನೆ.

ಗಾಂಜಾ ಮತ್ತಿನಲ್ಲಿದ್ದ ಪುಡಿ ರೌಡಿ

ಪುಡಿ ರೌಡಿ ಯಲ್ಲಪ್ಪ ಕಲ್ಲೂರ್ ಕಳೆದ ಕೆಲ ವರ್ಷಗಳಿಂದ ಭಕ್ತರಿಗೆ ಕಿರುಕುಳ ನೀಡುತ್ತಿದ್ದು, ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಆದರೆ ಗಾಣಗಾಪುರ ಪೊಲೀಸರು ಮಾತ್ರ ಯಲ್ಲಪ್ಪನ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ.  ಗ್ರಾಮಸ್ಥರ ಆಕ್ರೋಶ ಕೇಳಿ ಪೊಲೀಸರು ಕೊನೆಗೂ ಯಲ್ಲಪ್ಪನನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More