/newsfirstlive-kannada/media/post_attachments/wp-content/uploads/2025/05/RCB-15.jpg)
ಐಪಿಎಲ್​ನ ಕ್ವಾಲಿಫೈಯರ್​- 1ರ ಪಂದ್ಯದ ಆರಂಭದಲ್ಲೇ ಪಂಜಾಬ್​ ಕಿಂಗ್ಸ್​ಗೆ, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಬಿಗ್ ಶಾಕ್ ಕೊಟ್ಟಿದೆ. ಕೇವಲ 60 ರನ್​ ಒಳಗೆ ಪ್ರಮುಖವಾದ 6 ವಿಕೆಟ್​ಗಳನ್ನು ಉರುಳಿಸಿದೆ.
ಮುಲ್ಲನಪುರದ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿದ ನಿರ್ಧಾರ ಸರಿಯಾಗಿ ಇದೆ ಎನಿಸುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪಂಜಾಬ್​ ಕಿಂಗ್ಸ್​ಗೆ ಶಾಕ್ ಮೇಲೆ ಶಾಕ್ ಅನ್ನು ಆರ್​ಸಿಬಿ ತಂಡದ ಬೌಲರ್​ಗಳು ಕೊಡುತ್ತಿದ್ದಾರೆ.
ಪ್ರಿಯಾಂಶ್​ ಆರ್ಯ 7 ರನ್​ ಗಳಿಸಿ ಆಡುತ್ತಿದ್ದರು. ಈ ವೇಳೆ ತಂಡದ 2ನೇ ಓವರ್​ ಮಾಡುತ್ತಿದ್ದ ಯಶ್​ ದಯಾಳ್​ ಅವರ 2ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಪ್ರಿಯಾಂಶ್​ ಆರ್ಯ ನೇರವಾಗಿ ಕೃನಾಲ್​ ಪಾಂಡ್ಯಗೆ ಕ್ಯಾಚ್​ ಕೊಟ್ಟು ಹೊರ ನಡೆದಿದ್ದಾರೆ. ಇವರ ಬೆನ್ನಲ್ಲೇ ಬ್ಯಾಟಿಂಗ್ ಮಾಡಲು ಜೋಶ್ ಇಂಗ್ಲಿಷ್​ ಬಂದು ಕೇವಲ 4 ರನ್​ಗೆ ಹ್ಯಾಜಲ್ವುಡ್​ ಬೌಲಿಂಗ್​ನಲ್ಲಿ ಔಟ್​ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/05/KOHLI_OUT.jpg)
ಪ್ರಿಯಾಂಶ್​ ಆರ್ಯ ಔಟ್​ ಆಗುತ್ತಿದ್ದಂತೆ ಪಂಜಾಬ್​ ತಂಡದ ಮೊತ್ತ 27 ಆಗಿದ್ದಾಗ ಇನ್ನೊಬ್ಬ ಓಪನರ್​ ಪ್ರಭಾಸಿಮ್ರಾನ್​ ಸಿಂಗ್ (18) ಕೀಪರ್​ ಕ್ಯಾಚ್ ಆದರು. ಭುವನೇಶ್ವರ್​ ಕುಮಾರ್ ಹಾಕಿದ ಕೊನೆಯ ಬಾಲ್ ಅನ್ನು ಡಿಫೆಂಡ್ ಮಾಡಲು ಹೋದ ಪ್ರಭಾಸಿಮ್ರಾನ್​, ಜಿತೇಶ್​ ಶರ್ಮಾಗೆ ಕ್ಯಾಚ್​ ಕೊಟ್ಟು ನಿರಾಶೆಗೆ ಒಳಗಾದರು. ಪ್ರಭಾಸಿಮ್ರಾನ್​ ಔಟ್​ ಆದ 3 ರನ್​ಗಳ ನಂತರ ನಾಯಕ ಶ್ರೇಯಸ್​ ಅಯ್ಯರ್ ಕೂಡ ಪೆವಿಲಿಯನ್ ಖಾಲಿ ಮಾಡಿದರು.
ಜೋಶ್​ ಹ್ಯಾಜಲ್ವುಡ್​ ಅವರು ತಂಡದ 4ನೇ ಓವರ್​ನ 4ನೇ ಬಾಲ್​ ಅನ್ನು ಹಾಕಿದ್ದರು. ಇದನ್ನು ಹೊಡೆಯಲು ಹೋದ ಶ್ರೇಯಸ್​ ಅವರು ಕೀಪರ್​ ಜಿತೇಶ್​ ಶರ್ಮಾಗೆ ಕ್ಯಾಚ್​ ಕೊಟ್ಟು ದೊಡ್ಡ ನಷ್ಟ ಅನುಭವಿಸಿದರು. 5ನೇ ಬ್ಯಾಟರ್​​​​ ಆಗಿ ಕ್ರೀಸ್​ಗೆ ಬಂದ ನೆಹಾಲ್ ವಧೇರಾ ಕೂಡ ಯಶ್​ ದಯಾಳ್​ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್​ ಆಗಿದ್ದಾರೆ. ಇನ್ನು ಸುಯಾಶ್ ಶರ್ಮಾ ಬೌಲಿಂಗ್​ನಲ್ಲಿ ಶಶಾಂಕ್​ ಸಿಂಗ್​ ಕೇವಲ 3 ರನ್​ಗೆ ಔಟ್​ ಆದರು. ಇದರಿಂದ ಪಂಜಾಬ್​ ಕೇವಲ 60 ರನ್​ಗೆ 6 ವಿಕೆಟ್​ ಕಳೆದುಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us