/newsfirstlive-kannada/media/post_attachments/wp-content/uploads/2024/11/sanjana2.jpg)
ಪುಟ್ಟಕ್ಕ ನೋವಿನಲ್ಲಿದ್ದಾಳೆ. ಮೊದಲ ಮಗಳನ್ನ ಕಳೆದುಕೊಂಡ ದುಃಖ ಇರುವಾಗಲೇ ಎರಡನೇ ಮಗಳು ಸ್ನೇಹಾಳನ್ನ ಆಕ್ಸಿಡೆಂಟ್ನಲ್ಲಿ ಕಳೆದುಕೊಂಡು ಸಂಕಟ ಅನುಭವಿಸುತ್ತಿದ್ದಾಳೆ. ಪುಟ್ಟಕ್ಕನ ಅಳುವನ್ನು ನೋಡಿದ ವೀಕ್ಷಕರ ಮನಸ್ಸು ಕರಗಿ ಹೋಗಿದೆ. ಆದರೆ ಪುಟ್ಟಕ್ಕನ ಸಂಸಾಕರಕ್ಕೆ ಈಗ ಸಿಂಗಾರಮ್ಮನ ಕಾಟ ಶುರುವಾಗಿದೆ. ಅವರನ್ನು ಕಾಪಾಡಲು ಕಂಠಿ ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:BBK11: ಲೋ ತಮ್ಮ ದಿನವೂ ಜಳಕ ಮಾಡೋ.. ಹನುಮಂತನಿಗೆ ಕಿಚ್ಚ ಸುದೀಪ್ ಗಿಫ್ಟ್ ಕೊಟ್ಟು ಹೇಳಿದ್ದೇನು?
ಇಂದು ಒಂದು ಕಡೆ ಆದ್ರೆ, ಮತ್ತೊಂದು ಕಡೆ ಪುಟ್ಟಕ್ಕನ ಮಕ್ಕಳು ಸೀರಿಯಲ್ನಿಂದ ಆಚೆ ಬಂದ ಸ್ನೇಹ ಅಂದ್ರೆ ಸಂಜನಾ ಬುರ್ಲಿ ಅವರು ಸಖತ್ ಜಾಲಿ ಮೂಡ್ನಲ್ಲಿದ್ದಾರೆ. ಸ್ನೇಹಾ ಪಾತ್ರ ಮುಕ್ತಾಯವಾಗ್ತಿದ್ದಂತೆ ನಟಿ ಸಂಜನಾ ಅವರು ಬ್ಯಾಕ್ ಟು ಬ್ಯಾಕ್ ಟ್ರಿಪ್ ಮಾಡುತ್ತಿದ್ದಾರೆ. ಇತ್ತಿಚೀಗೆ ಕಾಶ್ಮೀರಕ್ಕೆ ತೆರಳಿದ್ದ ಚಲುವೆ ಸಖತ್ ಎಂಜಾಯ್ ಮಾಡಿದ್ರು. ವೀಕ್ಷಕರಿಗೂ ಕೂಡ ಅಲ್ಲಿನ ಸೊಬಗನ್ನ ತೋರಿಸಿದ್ದಾರೆ. ನಂತರ ಮತ್ತೊಂದು ಜಾಲಿ ಟ್ರಿಪ್ಗೆ ಅನಿಯಾದ ಚಲುವೆ, ಫ್ಯಾಮಿಲಿ ಜೊತೆಗೆ ಸಫಾರಿ ಮಾಡಿ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಿದ್ದರು.
ಸದ್ಯ ಸಂಜನಾ ಎಲ್ಲಿಗೆ ಹೋದ್ರು ಅಂತ ನೋಡುತ್ತಿರುವಾಗಲೇ ಮನಾಲಿಗೆ ಹಾರಿದ್ದಾರೆ. ಹಲವು ಪ್ರೇಕ್ಷಣಿಯ ಸ್ಥಳಗಳಿಗೆ ವಿಜಿಟ್ ಮಾಡಿದ್ದಾರೆ. ಅಲ್ಲಿ ಕ್ಲಿಕ್ಕಿಸಿರೋ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಈ ಫೋಟೋಗಳನ್ನ ನೋಡಿದ ಫ್ಯಾನ್ಸ್, ನೀವು ಬಿಡೀ ಮ್ಯಾಡಮ್ ಸೂಪರ್. ಬಟ್ ಸೀರಿಯಲ್ನಲ್ಲಿ ನಿಮ್ಮನ್ನ ತುಂಬಾ ಮಿಸ್ ಮಾಡಿಕೊಳ್ತಿದ್ದೀವಿ. ನೀವು ಇಲ್ಲದೆ ಸೀರಿಯಲ್ ನೋಡೋಕೆ ಆಗ್ತಿಲ್ಲ ಅಂತ ಬೇಸರ ಹೊರ ಹಾಕುತ್ತಿದ್ದಾರೆ.
ನಟಿ ಸಂಜನಾ ಬುರ್ಲಿ ಸೀರಿಯಲ್ ಬಿಟ್ಟಿದ್ದು ಏಕೆ?
ಈ ಬಗ್ಗೆ ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಮಾತಾಡಿದ ಸಂಜನಾ ಬುರ್ಲಿ, ನಾನು ಸೀರಿಯಲ್ಗೆ 3 ತಿಂಗಳು ನೋಟೀಸ್ ಪಿರಿಯಡ್ ಕೊಟ್ಟಿದೆ. ಆಗ ನಮ್ಮ ಡೈರೆಕ್ಟರ್ ಆರೂರ್ ಜಗದೀಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಪ್ರಮುಖ ಪಾತ್ರಕ್ಕೆ ನಟಿ ಬೇಕಾಗಿದ್ದಾರೆ ಅಂತ. ಸ್ನೇಹಾಳ ಕ್ಯಾರೆಕ್ಟರ್ಗೆ ರಿಪ್ಲೇಸ್ ಮಾಡೋದಕ್ಕೆ ಅಲ್ಲ. ಆಗ ಸಾಕಷ್ಟು ಮಂದಿ ಇದನ್ನು ಗೇಸ್ ಮಾಡಿದ್ದರು. ಸಂಜನಾ ಅವರು ಬಿಗ್ಬಾಸ್ಗೆ ಹೋಗುತ್ತಾರೆ ಅಂತ ಮುಂಚೆಯೇ ಗೇಸ್ ಮಾಡಿದ್ದರು. ಆದರೆ ಈಗ ಸ್ನೇಹಾ ಕ್ಯಾರೆಕ್ಟರ್ ಎಂಡ್ ಆದ ಮೇಲೆ ಬಿಗ್ಬಾಸ್ಗೆ ವೈಲ್ಡ್ಕಾರ್ಡ್ ಎಂಟ್ರಿ ಕೊಡುತ್ತಾರೆ ಅಂತ ಜನ ಅಂದುಕೊಳ್ಳುತ್ತಿದ್ದಾರೆ. ನಾನು ಯಾವ ರಿಯಾಲಿಟಿ ಶೋಗೂ ಹೋಗುತ್ತಿಲ್ಲ ಅಂತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ