/newsfirstlive-kannada/media/post_attachments/wp-content/uploads/2024/12/Ashwin_News.jpg)
ಭಾರತೀಯ ಕ್ರಿಕೆಟ್ನಲ್ಲಿ ರವಿಚಂದ್ರನ್ ಅಶ್ವಿನ್ ಗೋಲ್ಡನ್ ಎರಾ ಅಂತ್ಯವಾಗಿದೆ. ತನ್ನ 14 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಕರಿಯರ್ನಲ್ಲಿ ಅಶ್ವಿನ್, ಆಟಗಾರನಾಗಿ ಅದೆಷ್ಟೋ ಸಾಧನೆ, ದಾಖಲೆಗಳನ್ನ ಮಾಡಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆಲುವಿನ ತಂಡದ ಸದಸ್ಯನಾಗಿ ಮತ್ತು 2013 ಚಾಂಪಿಯನ್ಸ್ ಟ್ರೋಫಿ ಗೆಲುವಿನ ತಂಡದ ಆಟಗಾರನಾಗಿ ಹಾಗೆ ವೈಯಕ್ತಿಕವಾಗಿ ಅಶ್ವಿನ್, ಅದೆಷ್ಟೋ ಅವಾರ್ಡ್ಗಳನ್ನ ಪಡೆದುಕೊಂಡಿದ್ದಾರೆ. ಆದ್ರೆ ಅಶ್ವಿನ್ಗೆ ಆ ಒಂದು ಕೊರಗೂ ಮಾತ್ರ, ಇಂದಿಗೂ ಮತ್ತು ಎಂದೆಂದಿಗೂ ಕಾಡುತ್ತಲೇ ಇರುತ್ತದೆ..! ಅದುವೇ ಕ್ಯಾಪ್ಟನ್ಸಿ..!
ಅಶ್ವಿನ್ ಭಾರತ ಕ್ರಿಕೆಟ್ ತಂಡದ ನಾಯಕನೂ ಆಗಲಿಲ್ಲ, ಉಪನಾಯಕನೂ ಆಗಲಿಲ್ಲ. 2011ರಿಂದ 2017ರವರೆಗೂ ಅಶ್ವಿನ್ ರೆಗ್ಯೂಲರ್ ಆಗಿ ಟೀಮ್ ಇಂಡಿಯಾದಲ್ಲಿ ಇದ್ರೂ, ಕ್ಯಾಪ್ಟನ್ಸಿ ಭಾಗ್ಯ ಮಾತ್ರ ಸಿಗಲೇ ಇಲ್ಲ. ಧೋನಿ ನಂತರ ವಿರಾಟ್ ಕೊಹ್ಲಿ ತಂಡದ ನಾಯಕನಾದ್ರು. ಆದ್ರೆ ಅಶ್ವಿನ್ಗೆ ತಂಡವನ್ನ ಮುನ್ನಡೆಸೋ ಸಾಮರ್ಥ್ಯ ಇದ್ರೂ, ಆ ಅವಕಾಶ ಮಾತ್ರ ಸಿಗಲೇ ಇಲ್ಲ.
2017ರಲ್ಲಿ ಭಾರತ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಉಪನಾಯಕನಾಗಲು ಅಶ್ವಿನ್ಗೆ ಅವಕಾಶ ಇತ್ತು. ಆದ್ರೆ ಅಲ್ಲೂ ಅಶ್ವಿನ್ ಅವರನ್ನ ಸೈಡ್ಲೈನ್ ಮಾಡಲಾಯ್ತು. ಅಂದಿನ ಆಯ್ಕೆ ಸಮಿತಿ, ಕೊಹ್ಲಿ ಡೆಪ್ಯೂಟಿಯಾಗಿ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆಯನ್ನ ನೇಮಿಸಿತು. ನಿಜ ಹೇಳಬೇಕಂದ್ರೆ, ಅಶ್ವಿನ್ಗೆ ನಾಯಕನಾಗೋ ಎಲ್ಲಾ ಅರ್ಹತೆ ಇತ್ತು. ಆದ್ರೆ ಅಶ್ವಿನ್ರನ್ನ ಬ್ಯಾಕ್ ಮಾಡೋಕೆ ಬಿಸಿಸಿಐನಲ್ಲಿ, ಯಾರೂ ಇರ್ಲಿಲ್ಲ.
ಈಗಲೂ ಕಾಡುತ್ತಲೇ ಇದೆ ಆ ಕೊರಗು
ನಾಯಕನಾಗಲಿಲ್ಲ ಅಂತ ಅಶ್ವಿನ್ಗೆ ತುಂಬಾ ಬೇಜಾರಾಗಿದೆ ನಿಜ. ಆದ್ರೆ ಅಶ್ವಿನ್, ನಾಯಕನಾಗೋ ಆಸೆಯನ್ನ ಯಾವತ್ತೋ ಕೈಬಿಟ್ಟಿದ್ರು. ಹೌದು..! ಅಶ್ವಿನ್ ಯಾವ ಆಟಗಾರನಿಗಿಂತ ಕಡಿಮೆ ಹೇಳಿ! ಅಶ್ವಿನ್ ಒಬ್ಬ ಟೀಮ್ ಮ್ಯಾನ್. ತಂಡದ ಗೆಲುವಿಗಾಗಿ ಅಶ್ವಿನ್ ಏನ್ ಬೇಕಾದ್ರೂ ಮಾಡ್ತಾರೆ. ಎಲ್ಲಾ ಅರ್ಹತೆ, ಕ್ವಾಲಿಟೀಸ್ ಇರೋ ಅಶ್ವಿನ್ ಅವರನ್ನ ಬಿಗ್ಬಾಸ್ಗಳು ನಂಬಲೇ ಇಲ್ಲ. ಬದಲಿಗೆ ಅಶ್ವಿನ್ ಮೇಲೆ ಗೂಬೆ ಕೂರಿಸಿ, ಕ್ಯಾಪ್ಟನ್ಸಿ ಮಿಸ್ ಮಾಡಿಸಿದ್ರು.
ಅಶ್ವಿನ್ಗೆ ನಾಯಕತ್ವ ತಪ್ಪಿಸಲು, ಅವ್ರ ಮೇಲೆ ಇಲ್ಲ ಸಲ್ಲದ ಚರ್ಚೆಗಳು ನಡೆದವು. ಅಶ್ವಿನ್ ಒಬ್ಬ OVER THINKER! ಅಶ್ವಿನ್ಗೆ ಕ್ಯಾಪ್ಟನ್ಸಿ ಕೊಡಬಾರದು ಅಂತ ಬಿಸಿಸಿಐನಲ್ಲೇ ವಿರೋಧ ವ್ಯಕ್ತವಾಗಿತ್ತು. ಈ ಮಾತುಗಳು ಅಶ್ವಿನ್ ಕಿವಿಗೆ ಯಾವಾಗ ಬಿತ್ತೋ, ನಾಯಕತ್ವದ ಆಸೆಯನ್ನೇ ಕೈಬಿಟ್ಟು ಕೈತೊಳೆದುಕೊಂಡರು. ತಂಡದ ಒಬ್ಬ SINCERE ಆಟಗಾರನನ್ನ OVER THINKER ಅಂದ್ರೆ ಹೇಗೆ? ಇದೇ ಅಶ್ವಿನ್ಗೆ ಸಿಕ್ಕ ಮರ್ಯಾದೆ.
ಇದನ್ನೂ ಓದಿ:ಅಶ್ವಿನ್ ನಿವೃತ್ತಿ ಬಗ್ಗೆ ರೋಹಿತ್ಗೆ ಮೊದಲೇ ಗೊತ್ತಿತ್ತಾ? ಸ್ಫೋಟಕ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ