Advertisment

ಮಹಾ ಕುಂಭಮೇಳದಲ್ಲಿ ಕನ್ನಡ ಸೀರಿಯಲ್​ ನಟಿ; ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಕೃತಿಕಾ ರವೀಂದ್ರ

author-image
Veena Gangani
Updated On
ಮಹಾ ಕುಂಭಮೇಳದಲ್ಲಿ ಕನ್ನಡ ಸೀರಿಯಲ್​ ನಟಿ; ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಕೃತಿಕಾ ರವೀಂದ್ರ
Advertisment
  • ಪ್ರಯಾಗ್‌ರಾಜ್‌ಗೆ ಹೋದ ನಟಿ ಕೃತಿಕಾ ರವೀಂದ್ರ ಹೇಳಿದ್ದೇನು?
  • ರಾಧಾ ಕಲ್ಯಾಣ ಸೀರಿಯಲ್ ಮೂಲಕ ಫೇಮಸ್ ಆಗಿದ್ದ ನಟಿ ಕೃತಿಕಾ
  • ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ ನಟಿ ಕೃತಿಕಾ ರವೀಂದ್ರ

ಕನ್ನಡ ಕಿರುತೆರೆಯಲ್ಲೇ ರಾಧಾ ಕಲ್ಯಾಣ ಸೀರಿಯಲ್​ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ಇದೇ ಸೀರಿಯಲ್​ ಮೂಲಕ ಯಶಸ್ಸು ಪಡೆದಿದ್ದ ನಟಿ ಕೃತಿಕಾ ರವೀಂದ್ರ ಈಗ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ.

Advertisment

ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಬಿಗ್​ಬಾಸ್​ ಸ್ಪರ್ಧಿ; ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ನಟಿ ಅನುಷಾ ರೈ

publive-image

ರಾಧಾ ಕಲ್ಯಾಣ, ಭೂಮಿಗೆ ಬಂದ ಭಗವಂತ ಸೀರಿಯಲ್​ ಮೂಲಕ ಸಖತ್​ ಫೇಮಸ್​ ಆಗಿದ್ದರು ಕೃತಿಕಾ ರವೀಂದ್ರ. ಸದ್ಯ ನಟಿ ಕೃತಿಕಾ ಅವರು ಬಿಡುವು ಮಾಡಿಕೊಂಡು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರೋ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.

publive-image

ಸ್ನೇಹಿತರ ಜೊತೆಗೆ ನಟಿ ಕೃತಿಕಾ ಕುಂಭಮೇಳದಲ್ಲಿ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಇದೇ ಫೋಟೋಗಳನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋ ಜೊತೆಗೆ ನಟಿ 144 ವರ್ಷಗಳಿಗೊಮ್ಮೆ ನಡೆಯೋ ಮಹಾಕುಂಭಮೇಳಕ್ಕೆ ಬಂದು ಗಂಗಾ ಯಮುನಾ, ಸರಸ್ವತಿ ಸಂಗಮ ಸ್ನಾನ ಮಾಡಿರೋ ಪುಣ್ಯ ನನ್ನದು. ಧನ್ಯೋಸ್ಮಿ ಶಿವಾರ್ಪಣಮಸ್ತು ಎಂದು ಬರೆದುಕೊಂಡಿದ್ದಾರೆ.

Advertisment

ಇನ್ನೂ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರೋ ಮಹಾ ಕುಂಭಮೇಳ ಜನವರಿ 13ರಂದು ಆರಂಭಗೊಂಡಿತ್ತು. ಫೆಬ್ರವರಿ 3 ರಂದು ಕೊನೆಯ ಅಮೃತ ಸ್ನಾನ ನಡೆದಿತ್ತು. ಇದೀಗ ಮಹಾ ಕುಂಭಮೇಳದ ಕೊನೆಯ ಪುಣ್ಯ ಸ್ನಾನ ಫೆಬ್ರವರಿ 26ರಂದು ಮಹಾಶಿವರಾತ್ರಿಯಂದು ನಡೆಯಲಿದೆ. ಹೀಗಾಗಿ ಈಗಲೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬಂದು ಪುಣ್ಯ ಸ್ನಾನ ಮಾಡಿ ಹೋಗುತ್ತಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment