ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್​ ದ್ರಾವಿಡ್​ಗೆ ಏನಾಯಿತು..? IPLಗೂ ಮೊದಲೇ ಆಘಾತ!

author-image
Bheemappa
Updated On
ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್​ ದ್ರಾವಿಡ್​ಗೆ ಏನಾಯಿತು..? IPLಗೂ ಮೊದಲೇ ಆಘಾತ!
Advertisment
  • ಒಂದೇ ಪಂದ್ಯದಲ್ಲಿ ಮಗ ಸಮಿತ್, ರಾಹುಲ್ ದ್ರಾವಿಡ್ ಆಡುತ್ತಿದ್ದರು
  • ದ್ರಾವಿಡ್ ಕಾಲಿಗೆ ಕಟ್ಟಿರುವ ಬ್ಯಾಂಡೇಜ್ ನೋಡಿ ಫ್ಯಾನ್ಸ್​ಗೂ ಶಾಕ್
  • ಇಂಜುರಿ ನಡುವೆಯೂ ರಾಹುಲ್​ ದ್ರಾವಿಡ್ ಕೋಚಿಂಗ್ ಹೇಗಿದೆ..?

ರಾಹುಲ್ ದ್ರಾವಿಡ್.. ಯುವ ಕ್ರಿಕೆಟರ್​​ಗಳ ಪಾಲಿನ ಸ್ಪೂರ್ತಿಯ ಚಿಲುಮೆ, ಶಿಸ್ತು, ಬದ್ಧತೆ, ಸಂಯಮಕ್ಕೆ ಕೇರ್ ಆಫ್ ಅಡ್ರೆಸ್. ಕ್ರಿಕೆಟ್​ನಿಂದ ದೂರಾಗಿ ವರ್ಷಗಳೇ ಉರುಳಿದ್ರೂ ಜಂಟಲ್​ಮನ್​ ಗೇಮ್​ನ ರಿಯಲ್​ ಜಂಟಲ್​​ಮನ್​ ಎಂದೇ ಗುರುತಿಸಿಕೊಂಡಿದ್ದಾರೆ. ಇದೀಗ ಮತ್ತೆ ಜಂಟಲ್​ಮನ್​ ಗುಣಗಾನ ನಡೀತಿದೆ. ಯಾಕೆ ಅಂತೀರಾ?. ನಿಮ್ಮ ಬದುಕಲ್ಲೂ ಕೊಂಚ ಬದಲಾವಣೆ ಆಗಬಹುದು.

ಊರುಗೋಲು ಸಹಾಯದಿಂದ ಹೆಜ್ಜೆ ಹಾಕ್ತಿರುವ ದ್ರಾವಿಡ್ ಅವರ ಆರೋಗ್ಯವನ್ನು ಆಟಗಾರರು ವಿಚಾರಿಸ್ತಿದ್ದಾರೆ. ಚೇರ್​ ಮೇಲೆ ಕಾಲಿಟ್ಟು ಚಿಂತಾಕ್ರಾಂತರಂತೆ ದ್ರಾವಿಡ್ ಕುಳಿತುಕೊಳ್ಳುತ್ತಾರೆ. ಇಂಜುರಿಯ ನೋವಿನ ನಡುವೆಯೂ ಯುವ ಆಟಗಾರರಿಗೆ ಬ್ಯಾಟಿಂಗ್ ಪಾಠ ಮಾಡುವ ಗುರು ಇವರು.

publive-image

ರಾಜಸ್ಥಾನ್ ರಾಯಲ್ಸ್​ ತಂಡದ ನೆಟ್​ ಸೆಷನ್​ ರಾಹುಕ್​ ದ್ರಾವಿಡ್​ ಇಂಜುರಿಗೆ ಒಳಗಾಗಿರುವುದು ಕಂಡು ಬಂದಿದೆ. ದ್ರಾವಿಡ್​ಗೆ ಏನಾಯ್ತು..? ಇಂಜುರಿ ಹೇಗಾಯ್ತು ಅನ್ನೋ ಪಶ್ನೆ ಬಂದೇ ಬರುತ್ತೆ. ಆದ್ರೆ, ಈ ಇಂಜುರಿಗೆ ಕಾರಣವಾಗಿದ್ದು ಬೆಂಗಳೂರಿನಲ್ಲಿ ನಡೆದ ಆ ಒಂದು ಪಂದ್ಯ.

ನಾಸೂರ್‌ ಮೆಮೊರಿಯಲ್ ಶೀಲ್ಡ್ ಟೂರ್ನಿಯಲ್ಲಿ ಇಂಜುರಿ

ಕೆಎಸ್‌ಸಿಎ 3ನೇ ಡಿವಿಷನ್​​ನ ನಾಸೂರ್‌ ಮೆಮೊರಿಯಲ್ ಶೀಲ್ಡ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ರಾಹುಲ್ ದ್ರಾವಿಡ್, ವಿಜಯಾ ಕ್ರಿಕೆಟ್ ಕ್ಲಬ್‌ ಪರ ಬ್ಯಾಟ್ ಬೀಸಿದ್ದರು. ಲಯನ್ಸ್​ ಕ್ಲಬ್ ಎದುರಿನ ಈ ಪಂದ್ಯದಲ್ಲಿ ದ್ರಾವಿಡ್ ಎದುರಿಸಿದ್ದ 8 ಎಸೆತಗಳಲ್ಲಿ 10 ರನ್ ಗಳಿಸಿದ್ದರು. ಇದೇ ಮ್ಯಾಚ್​ನಲ್ಲೇ ಪುತ್ರ ಸಮಿತ್​​​​​​​​​​, 60 ಎಸೆತಗಳಲ್ಲಿ 58 ರನ್​​ ಕೊಳ್ಳೆ ಹೊಡೆದಿದ್ದರು. ಈ ಮ್ಯಾಚ್​ನಲ್ಲಿ ದ್ರಾವಿಡ್, ಎಡಗಾಲಿನ ಇಂಜುರಿಗೆ ತುತ್ತಾಗಿದ್ದರು. ಇದೇ ವಿಚಾರವನ್ನು ಆರ್​ಆರ್​, ಫೋಸ್ಟ್​ ಮಾಡಿತ್ತು. ದ್ರಾವಿಡ್ ಕಾಲಿಗೆ ಕಟ್ಟಿದ್ದ ಬ್ಯಾಂಡೇಜ್ ನೋಡಿದ್ದ ಫ್ಯಾನ್ಸ್​ಗೂ ಶಾಕ್ ಕಾದಿತ್ತು.

ದ್ರಾವಿಡ್ ಡೆಡಿಕೇಷನ್.. ಕಮಿಟ್ಮೆಂಟ್​ಗೆ ಫ್ಯಾನ್ಸ್​ ಸಲಾಂ..!

ಇಂಜುರಿಗೆ ತುತ್ತಾಗಿದ್ದ ದ್ರಾವಿಡ್, ಶೀಘ್ರ ಗುಣಮುಖರಾಗಲ್ಲ. ಐಪಿಎಲ್ ಆರಂಭಕ್ಕೂ ಮುನ್ನ ಹೆಡ್ ಕೋಚ್ ಸೇವೆ ಆಟಗಾರರಿಗೆ ಸಿಗಲ್ಲ ಅನ್ನೋ ಚಿಂತೆಯಲ್ಲಿತ್ತು. ಆದ್ರೆ, ದಿ ಗ್ರೇಟ್ ವಾಲ್​​​​​​​​​​, ಇಂಜುರಿ ನೋವಿನ ನಡುವೆ ಗಾಲ್ಫ್ ಕೋರ್ಟ್‌ನಲ್ಲಿ ಮೈದಾನಕ್ಕೆ ಆಗಮಿಸಿದ್ದರು.

ನಡೆಯಲು ಸಾಧ್ಯವಾಗದಿದ್ದರೂ, ಊರುಗೋಲಿನ ಸಹಾಯದಿಂದ ಹೆಜ್ಜೆ ಹಾಕಿದ್ದರು. ನಿಲ್ಲಲೂ ಆಗದಿದ್ದರೂ ಯುವ ಆಟಗಾರರಿಗೆ ಮಾರ್ಗದರ್ಶನ ನೀಡ್ತಿದ್ದಾರೆ. ಇದು ಲೆಜೆಂಡರಿ ಕ್ರಿಕೆಟರ್​​ನ ಡೆಡಿಕೇಷನ್, ಕಮಿಟ್ಮೆಂಟ್​​ನ ಎತ್ತಿ ತೋರಿಸುತ್ತಿತ್ತು. ಅಷ್ಟೇ ಅಲ್ಲ, ದ್ರಾವಿಡ್ ಲೆಜೆಂಡ್​​ ಆಗಿ ಬೆಳೆದ ಹಿಂದಿನ ಕಥೆಯನ್ನ ಹೇಳ್ತಿತ್ತು.

ಇಂಜುರಿ ನಡುವೆ ತಂಡದ ಗೆಲುವಿಗೆ ಹೋರಾಡಿದ್ದ ಧೀರ..!

ದ್ರಾವಿಡ್ ಅಂದ್ರೆ, ಕಮಿಟ್ಮೆಂಟ್​, ಕಮಿಟ್ಮೆಂಟ್ ಅಂದ್ರೆ ದ್ರಾವಿಡ್ ಅಂದ್ರೆ ನಿಜಕ್ಕೂ ತಪ್ಪಿಲ್ಲ. ಯಾಕಂದ್ರೆ, ದ್ರಾವಿಡ್​, ಡೆಡಿಕೇಷನ್ ಲೆವೆಲ್ ಬಗ್ಗೆ ಇಡೀ ವಿಶ್ವ ಕ್ರಿಕೆಟ್ ಲೋಕವೇ ಮಾತಡುತ್ತೆ. ಆತನ ಶ್ರದ್ಧೆ, ಕಟ್ಟು ನಿಟ್ಟು. ಪರಿಶ್ರಮ ಎಲ್ಲವೂ ಕಣ್ಣ ಮುಂದಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ 2002ರಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯ ಮೊದಲ ಪಂದ್ಯ​.

ಈ ಪಂದ್ಯದ ಮೊದಲ ವಿಂಡೀಸ್ 501 ರನ್ ಪೇರಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 99 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಡೆಡ್ಲಿ ಪೇಸರ್ ಮರ್ವಿನ್ ಡಿಲ್ಲನ್ ಎಸೆತ ದ್ರಾವಿಡ್ ದವಡೆಗೆ ಬಿದಿತ್ತು. ಆದ್ರೆ, ಈ ನೋವಿನ ನಡುವೆಯೂ ದ್ರಾವಿಡ್ ಬ್ಯಾಟ್ ಬೀಸಿದ್ದು ಬರೋಬ್ಬರಿ 7 ಗಂಟೆಗಳ ಕಾಲ. ಅಷ್ಟೇ ಅಲ್ಲ, ಅಜೇಯ 144 ರನ್ ಗಳಿಸಿದ ದ್ರಾವಿಡ್, ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ನೆರವಾಗಿದ್ದರು.

ಇದನ್ನೂ ಓದಿ:KL ರಾಹುಲ್ ಫ್ಯಾನ್ಸ್​ಗೆ ನಿರಾಸೆ.. ನಾಯಕನ ಹೆಸರು ಅಧಿಕೃತವಾಗಿ ಘೋಷಿಸಿದ ಡೆಲ್ಲಿ ಕ್ಯಾಪಿಟಲ್ಸ್..!

publive-image

180 ರನ್​ಗಳ ಹೋರಾಟದ ಇನ್ನಿಂಗ್ಸ್​ ಕಟ್ಟಿದ್ದರು

ಆಸ್ಟ್ರೇಲಿಯಾ ಎದುರಿನ 2001ರ ಈಡನ್ ಗಾರ್ಡನ್ಸ್ ಟೆಸ್ಟ್​.. ಈ ಟೆಸ್ಟ್​ನಲ್ಲಿ ಲಕ್ಷ್ಮಣ್ ಹಾಗೂ ದ್ರಾವಿಡ್ ಇನ್ನಿಂಗ್ಸ್​ ಯಾವಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿ ಮರೆಯಲ್ಲ. ಆದ್ರೆ, ಈ ಟೆಸ್ಟ್​ನಲ್ಲಿ ರಾಹುಲ್ ದ್ರಾವಿಡ್, ಫೀವರ್ ನಡುವೆ ಕಣಕ್ಕಿಳಿದ್ದಿದ್ದರು. 180 ರನ್​ಗಳ ಹೋರಾಟದ ಇನ್ನಿಂಗ್ಸ್​ ಕಟ್ಟಿದ್ದ ದ್ರಾವಿಡ್, ತಂಡದ ಗೆಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಶತಕ ಗಳಿಸಿದ್ದ ದ್ರಾವಿಡ್ ಹೆಸರನ್ನು ರಾಹುಲ್​ ಡೇವಿಡ್ ಎಂದು ಪತ್ರಿಕೆಯಲ್ಲಿ ಬರೆದಿದ್ದರು. ಈ ವೇಳೆ ತನ್ನ ಹೆಸರು ಪ್ರಪಂಚಕ್ಕೆ ತಿಳಿಯುವಂತೆ ಮಾಡಬೇಕೆಂಬ ಶಪಥ ಮಾಡಿದ್ದ ದ್ರಾವಿಡ್, ಕೆಲವೇ ವರ್ಷಗಳಲ್ಲಿ ಅದನ್ನು ಮಾಡಿ ತೋರಿಸಿದ್ದರು. ಕೋಚ್ ಆಗಿಯೂ ದಿಟ್ಟತನ ತೋರಿದ್ದ ದ್ರಾವಿಡ್, ಇವತ್ತಿಗೂ ಆ ಬದ್ಧತೆಯನ್ನು ಮರೆತಿಲ್ಲ. ಇದೇ ಕಾರಣಕ್ಕೆ ದ್ರಾವಿಡ್, ಯುವ ಕ್ರಿಕೆಟರ್​ಗಳ ಪಾಲಿಗೆ ಸ್ಪೂರ್ತಿಯ ಚಿಲುಮೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment