ಬೌಲರ್ ಆಗಿ ಬದಲಾದ ಲೆಜೆಂಡ್ರಿ ಬ್ಯಾಟ್ಸ್ಮನ್
ದಿಗ್ಗಜನ ಜೊತೆ ಆಟ..ಗ್ರೌಂಡ್ ಸ್ಟಾಫ್ ಫುಲ್ ಖುಷ್..!
ಇವರೆಂದರೆ ರಾಹುಲ್ ದ್ರಾವಿಡ್ಗೇಕೆ ಅಚ್ಚುಮೆಚ್ಚು..?
ಎಂತಹ ಕ್ಯಾರಕ್ಟರ್ ಕಣ್ರಿ. ನಿಜಕ್ಕೂ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ರಂತವರು ಕೋಟಿಗೊಬ್ಬರೇ. ಅಪಾರ ಜನಮನ್ನಣೆ ಸಿಕ್ಕಿದೆ. ನೇಮ್, ಫೇಮ್ ಎಲ್ಲಾ ಇದೆ. ಇಷ್ಟಾದ್ರೂ ದ್ರಾವಿಡ್ ಮಾತ್ರ ಬದಲಾಗಿಲ್ಲ. ಸ್ಟಾರ್ಗಿರಿ ಮೈಗೂಡಿಸಿಕೊಳ್ಳದೆ ಸಿಂಪಲ್ ಆಗಿ ಇದ್ರೂ ಎಲ್ಲರ ಹೃದಯಕ್ಕೆ ಹತ್ತಿರವಾಗ್ತಿದ್ದಾರೆ.
ರಾಹುಲ್ ದ್ರಾವಿಡ್! ಜಂಟಲ್ಮನ್ ಗೇಮ್ನ ರಿಯಲ್ ಜಂಟಲ್ಮನ್! ಈ ಗ್ರೇಟೆಸ್ಟ್ ಬ್ಯಾಟ್ಸ್ಮನ್ ಯಶಸ್ಸನ್ನ ಎಂದೂ ತಲೆಗೇರಿಸಿಕೊಂಡವರಲ್ಲ. ಅದು ಅಟಗಾರನಾಗಿದ್ದಲೂ ಅಷ್ಟೇ. ಟೀಮ್ ಇಂಡಿಯಾ ಹೆಡ್ಕೋಚ್ ಆಗಿ ಇತಿಹಾಸ ನಿರ್ಮಿಸಿದಾಗಲೂ ಅಷ್ಟೇ. ಸದಾ ಸಿಂಪಲ್. ಅಹಂ ಅನ್ನ ಮೂಟೆ ಕಟ್ಟಿ ಎಸೆದು, ಸರಳತೆಯ ಸಾಹುಕಾರ ಅನ್ನಿಸಿಕೊಂಡವರು. ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿದ ಚಾಂಪಿಯನ್ ಕೋಚ್ ಇದೀಗ ಸಿಂಪಲ್ ನಡೆಯಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ:ವಿನೇಶ್ ಫೋಗಟ್ ಬಳಿ ಕೋಟಿ ಕೋಟಿ ಆಸ್ತಿ.. ಕಾರಿನ ಮೇಲೆ ಭಾರೀ ಕ್ರೇಜ್.. ಎಷ್ಟು ಕೋಟಿ ಒಡತಿ ಗೊತ್ತೇ..?
ಬೌಲರ್ ಆಗಿ ಬದಲಾದ ಲೆಜೆಂಡ್ರಿ ಬ್ಯಾಟ್ಸ್ಮನ್
ದಿ ಗ್ರೇಟ್ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಹೆಡ್ಕೋಚ್ ಹುದ್ದೆಗೆ ಗುಡ್ಬೈ ಹೇಳಿದ್ದಾಗಿದೆ. ಮುಂದೇನ್ ಮಾಡ್ತಾರೆ ಅನ್ನೋ ಸಸ್ಪೆನ್ಸ್ ಆಗಿ ಉಳಿದಿದೆ. ಈ ನಡುವೆ ದ್ರಾವಿಡ್ ಹೊಸ ಅವತಾರ ಎತ್ತಿದ್ದಾರೆ. ಕಲಾತ್ಮಕ ಬ್ಯಾಟಿಂಗ್ನಿಂದ ಕ್ರಿಕೆಟ್ ಲೋಕವನ್ನ ಆಳಿದ್ದ ದ್ರಾವಿಡ್, ಇದೀಗ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ.
ಕ್ರಿಕೆಟ್ ದಂತಕಥೆ ದ್ರಾವಿಡ್ ಬಿಡುವಿನ ಸಮಯವನ್ನ ಎಂಜಾಯ್ ಮಾಡ್ತಿದ್ದಾರೆ. ಮಾಜಿ ಕೋಚ್ ದ್ರಾವಿಡ್ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿದ ಬಳಿಕ ಕೆಎಸ್ಸಿಎಗೆ ಬಂದಿದ್ದರು. ಈ ವೇಳೆ ಎನ್ಸಿಎ ಗ್ರೌಂಡ್ ಸ್ಟಾಫ್ ಜೊತೆ ಕ್ರಿಕೆಟ್ ಆಡಿ ಸಖತ್ ಎಂಜಾಯ್ ಮಾಡಿದ್ದಾರೆ.
ದ್ರಾವಿಡ್ ಬೌಲಿಂಗ್ ಮಾಡಿದ್ದು ನೋಡುಗರಿಗೆ ಸಖತ್ ಮಜಾ ಕೊಡ್ತಿದೆ. ದಿ ವಾಲ್ ಓಡಿ ಬಂದು ಬೌಲಿಂಗ್ ಮಾಡ್ತಿದ್ರೆ ಎನ್ಸಿಎ ಸ್ಟಾಫ್ ಮೆಂಬರ್ಸ್ ಅತೀವ ಖುಷಿಯಿಂದ ಬ್ಯಾಟ್ ಬೀಸಿದ್ದಾರೆ. ಅವರ ಸಂಭ್ರಮವನ್ನ ಹೇಳತೀರದು. ವಿಶ್ವದ ಸೂಪರ್ ಸ್ಟಾರ್ ಕ್ರಿಕೆಟರ್, ಜಗತ್ತೇ ಮೆಚ್ಚಿದ ಆಟಗಾರ ರಾಹುಲ್ ದ್ರಾವಿಡ್.. ದ್ರಾವಿಡ್ನ ನೋಡಬೇಕು, ಮಾತನಾಡಬೇಕು, ಆಟೋಗ್ರಾಫ್, ಫೋಟೋಗ್ರಾಫ್ಗೆ ಹಂಬಲಿಸೋ ಕೋಟ್ಯಂತರ ಮನಸ್ಸುಗಳಿವೆ. ಅಂತಾ ಆಟಗಾರನೊಂದಿಗೆ ಕ್ರಿಕೆಟ್ ಆಡೋ ಅವಕಾಶ ಸಿಕ್ಕರೆ ಪದಗಳಲ್ಲಿ ಆ ಸಂತೋಷವನ್ನ ಹಿಡಿದಿಡೋಕೆ ಆಗಲ್ಲ ಬಿಡಿ.
ಗ್ರೌಂಡ್ ಸ್ಟಾಫ್ ಅಂದ್ರೆ ದ್ರಾವಿಡ್ಗೆ ಸ್ಪೆಷಲ್ ಲವ್
ರಾಹುಲ್ ದ್ರಾವಿಡ್ ಎಷ್ಟೇ ಎತ್ತರಕ್ಕೆ ಬೆಳೆದ್ರೂ ಗ್ರೌಂಡ್ ಸ್ಟಾಫ್ ಮೇಲಿನ ಪ್ರೀತಿ ಮಾತ್ರ ಕೊಂಚವೂ ಕಮ್ಮಿ ಆಗಿಲ್ಲ. ಮೈದಾನ ಸಿಬ್ಬಂದಿ ಅಂದ್ರೆ ದಿ ವಾಲ್ಗೆ ಅದೇನೋ ಸ್ಪೆಷಲ್ ಲವ್. ಆಟಗಾರನಾಗಿ, ಭಾರತ ಎ ತಂಡದ ಕೋಚ್, ಅಂಡರ್-19 ಹೆಡ್ಕೋಚ್ ಹಾಗೂ ಟೀಮ್ ಇಂಡಿಯಾದ ಹೆಡ್ಕೋಚ್ ಆದರೂ ಗ್ರೌಂಡ್ ಸ್ಟಾಫ್ ಮೇಲಿನ ಗೌರವ ಮಾತ್ರ ಕಮ್ಮಿಯಾಗಿರಲ್ಲ. ಕ್ರಿಕೆಟರ್ ಆಗಿ ದ್ರಾವಿಡ್ ಗ್ರೌಂಡ್ ಸ್ಟಾಫ್ಗಳಿಗೆ ಕೊಡುವಷ್ಟು ಗೌರವವನ್ನ ಮತ್ತೋರ್ವ ಕ್ರಿಕೆಟರ್ ಕೊಡಲಾರ. ಆ ಮಟ್ಟಿಗೆ ದ್ರಾವಿಡ್ ಗೌರವಿಸ್ತಾರೆ.
ಸ್ಪರ್ಧಾತ್ಮಕ ಪಿಚ್ಗಾಗಿ ಗ್ರೌಂಡ್ ಸ್ಟಾಫ್ಗೆ 35 ಸಾವಿರ ರೂಪಾಯಿ
ಇದೊಂದು ನಿದರ್ಶನ ಸಾಕು. ದ್ರಾವಿಡ್ಗೆ ಗ್ರೌಂಡ್ ಸ್ಟಾಫ್ ಮೇಲೆ ಅದ್ಯಾವ ಮಟ್ಟಿಗೆ ಪ್ರೀತಿ ಇದೆ ಅನ್ನೋದಕ್ಕೆ. 2021 ರಲ್ಲಿ ನ್ಯೂಜಿಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಕಾನ್ಪುರದಲ್ಲಿ ಮೊದಲ ಟೆಸ್ಟ್ ನಡೆದಿತ್ತು. ಸ್ಪರ್ಧಾತ್ಮಕ ಪಿಚ್ ನಿರ್ಮಿಸಿದ್ದಕ್ಕೆ ಖುಷಿಗೊಂಡಿದ್ದ ಹೆಡ್ ಕೋಚ್ ದ್ರಾವಿಡ್ ಉತ್ತರ ಪ್ರದೇಶ ಕ್ರಿಕೆಟ್ ಅಸೋಷಿಯೇಷನ್ನ ಮೈದಾನದ ಸಿಬ್ಬಂದಿಗೆ ವೈಯಕ್ತಿಕವಾಗಿ 35 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ರು. ಈ ನಡೆಯಿಂದ ದ್ರಾವಿಡ್ ಎಲ್ಲರ ದಿಲ್ ಗೆದ್ದಿದ್ರು.
ಇದನ್ನೂ ಓದಿ:ವಿದೇಶಿ IPL ಆಟಗಾರರ ವಿರುದ್ಧ ರೊಚ್ಚಿಗೆದ್ದ ಅಶ್ವಿನ್.. ದುಬಾರಿ ಆಟಗಾರರ ಅಸಲಿ ತಂತ್ರ ರಿವೀಲ್..!
ಮೈದಾನ ಸಿಬ್ಬಂದಿ ಅವಿರತ ಪರಿಶ್ರಮಕ್ಕೆ ದ್ರಾವಿಡ್ ಮೆಚ್ಚುಗೆ
2022ರಲ್ಲಿ ಇಂತಹದ್ದೇ ಮತ್ತೊಂದು ನಡೆಯಿಂದ ರಾಹುಲ್ ದ್ರಾವಿಡ್ ಮೆಚ್ಚುಗೆ ಗಳಿಸಿದ್ರು. ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಮೈದಾನದ ಸಿಬ್ಬಂದಿ ಪಂದ್ಯ ಮರು ಆರಂಭಕ್ಕೆ ಇನ್ನಿಲ್ಲದ ಪರಿಶ್ರಮ ಹಾಕಿದ್ರು. ಮಧ್ಯರಾತ್ರಿ 1 ಗಂಟೆ ಪಂದ್ಯ ಆರಂಭಗೊಂಡು ಸರಣಿ 1-1 ರಲ್ಲಿ ಸಮಗೊಳ್ತು. ಪಂದ್ಯ ಮುಕ್ತಾಯದ ಬಳಿಕ ಮೈದಾನದ ಸಿಬ್ಬಂದಿ ಜೊತೆ ಫೋಟೋ ತೆಗೆಸಿಕೊಂಡು ಅವರ ಕಾರ್ಯವನ್ನ ಶ್ಲಾಘಿಸಿದ್ರು.
ರಾಹುಲ್ ದ್ರಾವಿಡ್ ಗ್ರೌಂಡ್ ಸ್ಟಾಫ್ಗಳನ್ನ ಎಷ್ಟು ಪ್ರೀತಿಸ್ತಾರೋ, ಅವರು ಸಹ ದಿ ವಾಲ್ರನ್ನ ಅಷ್ಟೇ ಇಷ್ಟಪಡ್ತಾರೆ. ಭಾರತದಲ್ಲಿ ಎಲ್ಲೆ ಪಂದ್ಯ ನಡೆದ್ರೂ, ವಾಲ್ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿ ಬೀಳ್ತಿದ್ರೂ ದ್ರಾವಿಡ್ ಎಂದೂ ಅವರನ್ನ ಬೇಸರಗೊಳಿಸಿಲ್ಲ. ಇದೇ ಕಾರಣಕ್ಕೆ ರಾಹುಲ್ ದ್ರಾವಿಡ್ಗೆ ಜಂಟಲ್ಮನ್ ಗೇಮ್ನ ರಿಯಲ್ ಜಂಟಲ್ಮನ್ ಅನಿಸಿಕೊಂಡಿರೋದು.
ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಕರೆತರಲು NASA ಪ್ಲಾನ್; ಇಲ್ಲಿ ಎಲಾನ್ ಮಸ್ಕ್ ಅವರ SpaceX ಕೆಲಸ ಏನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಬೌಲರ್ ಆಗಿ ಬದಲಾದ ಲೆಜೆಂಡ್ರಿ ಬ್ಯಾಟ್ಸ್ಮನ್
ದಿಗ್ಗಜನ ಜೊತೆ ಆಟ..ಗ್ರೌಂಡ್ ಸ್ಟಾಫ್ ಫುಲ್ ಖುಷ್..!
ಇವರೆಂದರೆ ರಾಹುಲ್ ದ್ರಾವಿಡ್ಗೇಕೆ ಅಚ್ಚುಮೆಚ್ಚು..?
ಎಂತಹ ಕ್ಯಾರಕ್ಟರ್ ಕಣ್ರಿ. ನಿಜಕ್ಕೂ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ರಂತವರು ಕೋಟಿಗೊಬ್ಬರೇ. ಅಪಾರ ಜನಮನ್ನಣೆ ಸಿಕ್ಕಿದೆ. ನೇಮ್, ಫೇಮ್ ಎಲ್ಲಾ ಇದೆ. ಇಷ್ಟಾದ್ರೂ ದ್ರಾವಿಡ್ ಮಾತ್ರ ಬದಲಾಗಿಲ್ಲ. ಸ್ಟಾರ್ಗಿರಿ ಮೈಗೂಡಿಸಿಕೊಳ್ಳದೆ ಸಿಂಪಲ್ ಆಗಿ ಇದ್ರೂ ಎಲ್ಲರ ಹೃದಯಕ್ಕೆ ಹತ್ತಿರವಾಗ್ತಿದ್ದಾರೆ.
ರಾಹುಲ್ ದ್ರಾವಿಡ್! ಜಂಟಲ್ಮನ್ ಗೇಮ್ನ ರಿಯಲ್ ಜಂಟಲ್ಮನ್! ಈ ಗ್ರೇಟೆಸ್ಟ್ ಬ್ಯಾಟ್ಸ್ಮನ್ ಯಶಸ್ಸನ್ನ ಎಂದೂ ತಲೆಗೇರಿಸಿಕೊಂಡವರಲ್ಲ. ಅದು ಅಟಗಾರನಾಗಿದ್ದಲೂ ಅಷ್ಟೇ. ಟೀಮ್ ಇಂಡಿಯಾ ಹೆಡ್ಕೋಚ್ ಆಗಿ ಇತಿಹಾಸ ನಿರ್ಮಿಸಿದಾಗಲೂ ಅಷ್ಟೇ. ಸದಾ ಸಿಂಪಲ್. ಅಹಂ ಅನ್ನ ಮೂಟೆ ಕಟ್ಟಿ ಎಸೆದು, ಸರಳತೆಯ ಸಾಹುಕಾರ ಅನ್ನಿಸಿಕೊಂಡವರು. ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿದ ಚಾಂಪಿಯನ್ ಕೋಚ್ ಇದೀಗ ಸಿಂಪಲ್ ನಡೆಯಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ:ವಿನೇಶ್ ಫೋಗಟ್ ಬಳಿ ಕೋಟಿ ಕೋಟಿ ಆಸ್ತಿ.. ಕಾರಿನ ಮೇಲೆ ಭಾರೀ ಕ್ರೇಜ್.. ಎಷ್ಟು ಕೋಟಿ ಒಡತಿ ಗೊತ್ತೇ..?
ಬೌಲರ್ ಆಗಿ ಬದಲಾದ ಲೆಜೆಂಡ್ರಿ ಬ್ಯಾಟ್ಸ್ಮನ್
ದಿ ಗ್ರೇಟ್ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಹೆಡ್ಕೋಚ್ ಹುದ್ದೆಗೆ ಗುಡ್ಬೈ ಹೇಳಿದ್ದಾಗಿದೆ. ಮುಂದೇನ್ ಮಾಡ್ತಾರೆ ಅನ್ನೋ ಸಸ್ಪೆನ್ಸ್ ಆಗಿ ಉಳಿದಿದೆ. ಈ ನಡುವೆ ದ್ರಾವಿಡ್ ಹೊಸ ಅವತಾರ ಎತ್ತಿದ್ದಾರೆ. ಕಲಾತ್ಮಕ ಬ್ಯಾಟಿಂಗ್ನಿಂದ ಕ್ರಿಕೆಟ್ ಲೋಕವನ್ನ ಆಳಿದ್ದ ದ್ರಾವಿಡ್, ಇದೀಗ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ.
ಕ್ರಿಕೆಟ್ ದಂತಕಥೆ ದ್ರಾವಿಡ್ ಬಿಡುವಿನ ಸಮಯವನ್ನ ಎಂಜಾಯ್ ಮಾಡ್ತಿದ್ದಾರೆ. ಮಾಜಿ ಕೋಚ್ ದ್ರಾವಿಡ್ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿದ ಬಳಿಕ ಕೆಎಸ್ಸಿಎಗೆ ಬಂದಿದ್ದರು. ಈ ವೇಳೆ ಎನ್ಸಿಎ ಗ್ರೌಂಡ್ ಸ್ಟಾಫ್ ಜೊತೆ ಕ್ರಿಕೆಟ್ ಆಡಿ ಸಖತ್ ಎಂಜಾಯ್ ಮಾಡಿದ್ದಾರೆ.
ದ್ರಾವಿಡ್ ಬೌಲಿಂಗ್ ಮಾಡಿದ್ದು ನೋಡುಗರಿಗೆ ಸಖತ್ ಮಜಾ ಕೊಡ್ತಿದೆ. ದಿ ವಾಲ್ ಓಡಿ ಬಂದು ಬೌಲಿಂಗ್ ಮಾಡ್ತಿದ್ರೆ ಎನ್ಸಿಎ ಸ್ಟಾಫ್ ಮೆಂಬರ್ಸ್ ಅತೀವ ಖುಷಿಯಿಂದ ಬ್ಯಾಟ್ ಬೀಸಿದ್ದಾರೆ. ಅವರ ಸಂಭ್ರಮವನ್ನ ಹೇಳತೀರದು. ವಿಶ್ವದ ಸೂಪರ್ ಸ್ಟಾರ್ ಕ್ರಿಕೆಟರ್, ಜಗತ್ತೇ ಮೆಚ್ಚಿದ ಆಟಗಾರ ರಾಹುಲ್ ದ್ರಾವಿಡ್.. ದ್ರಾವಿಡ್ನ ನೋಡಬೇಕು, ಮಾತನಾಡಬೇಕು, ಆಟೋಗ್ರಾಫ್, ಫೋಟೋಗ್ರಾಫ್ಗೆ ಹಂಬಲಿಸೋ ಕೋಟ್ಯಂತರ ಮನಸ್ಸುಗಳಿವೆ. ಅಂತಾ ಆಟಗಾರನೊಂದಿಗೆ ಕ್ರಿಕೆಟ್ ಆಡೋ ಅವಕಾಶ ಸಿಕ್ಕರೆ ಪದಗಳಲ್ಲಿ ಆ ಸಂತೋಷವನ್ನ ಹಿಡಿದಿಡೋಕೆ ಆಗಲ್ಲ ಬಿಡಿ.
ಗ್ರೌಂಡ್ ಸ್ಟಾಫ್ ಅಂದ್ರೆ ದ್ರಾವಿಡ್ಗೆ ಸ್ಪೆಷಲ್ ಲವ್
ರಾಹುಲ್ ದ್ರಾವಿಡ್ ಎಷ್ಟೇ ಎತ್ತರಕ್ಕೆ ಬೆಳೆದ್ರೂ ಗ್ರೌಂಡ್ ಸ್ಟಾಫ್ ಮೇಲಿನ ಪ್ರೀತಿ ಮಾತ್ರ ಕೊಂಚವೂ ಕಮ್ಮಿ ಆಗಿಲ್ಲ. ಮೈದಾನ ಸಿಬ್ಬಂದಿ ಅಂದ್ರೆ ದಿ ವಾಲ್ಗೆ ಅದೇನೋ ಸ್ಪೆಷಲ್ ಲವ್. ಆಟಗಾರನಾಗಿ, ಭಾರತ ಎ ತಂಡದ ಕೋಚ್, ಅಂಡರ್-19 ಹೆಡ್ಕೋಚ್ ಹಾಗೂ ಟೀಮ್ ಇಂಡಿಯಾದ ಹೆಡ್ಕೋಚ್ ಆದರೂ ಗ್ರೌಂಡ್ ಸ್ಟಾಫ್ ಮೇಲಿನ ಗೌರವ ಮಾತ್ರ ಕಮ್ಮಿಯಾಗಿರಲ್ಲ. ಕ್ರಿಕೆಟರ್ ಆಗಿ ದ್ರಾವಿಡ್ ಗ್ರೌಂಡ್ ಸ್ಟಾಫ್ಗಳಿಗೆ ಕೊಡುವಷ್ಟು ಗೌರವವನ್ನ ಮತ್ತೋರ್ವ ಕ್ರಿಕೆಟರ್ ಕೊಡಲಾರ. ಆ ಮಟ್ಟಿಗೆ ದ್ರಾವಿಡ್ ಗೌರವಿಸ್ತಾರೆ.
ಸ್ಪರ್ಧಾತ್ಮಕ ಪಿಚ್ಗಾಗಿ ಗ್ರೌಂಡ್ ಸ್ಟಾಫ್ಗೆ 35 ಸಾವಿರ ರೂಪಾಯಿ
ಇದೊಂದು ನಿದರ್ಶನ ಸಾಕು. ದ್ರಾವಿಡ್ಗೆ ಗ್ರೌಂಡ್ ಸ್ಟಾಫ್ ಮೇಲೆ ಅದ್ಯಾವ ಮಟ್ಟಿಗೆ ಪ್ರೀತಿ ಇದೆ ಅನ್ನೋದಕ್ಕೆ. 2021 ರಲ್ಲಿ ನ್ಯೂಜಿಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಕಾನ್ಪುರದಲ್ಲಿ ಮೊದಲ ಟೆಸ್ಟ್ ನಡೆದಿತ್ತು. ಸ್ಪರ್ಧಾತ್ಮಕ ಪಿಚ್ ನಿರ್ಮಿಸಿದ್ದಕ್ಕೆ ಖುಷಿಗೊಂಡಿದ್ದ ಹೆಡ್ ಕೋಚ್ ದ್ರಾವಿಡ್ ಉತ್ತರ ಪ್ರದೇಶ ಕ್ರಿಕೆಟ್ ಅಸೋಷಿಯೇಷನ್ನ ಮೈದಾನದ ಸಿಬ್ಬಂದಿಗೆ ವೈಯಕ್ತಿಕವಾಗಿ 35 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ರು. ಈ ನಡೆಯಿಂದ ದ್ರಾವಿಡ್ ಎಲ್ಲರ ದಿಲ್ ಗೆದ್ದಿದ್ರು.
ಇದನ್ನೂ ಓದಿ:ವಿದೇಶಿ IPL ಆಟಗಾರರ ವಿರುದ್ಧ ರೊಚ್ಚಿಗೆದ್ದ ಅಶ್ವಿನ್.. ದುಬಾರಿ ಆಟಗಾರರ ಅಸಲಿ ತಂತ್ರ ರಿವೀಲ್..!
ಮೈದಾನ ಸಿಬ್ಬಂದಿ ಅವಿರತ ಪರಿಶ್ರಮಕ್ಕೆ ದ್ರಾವಿಡ್ ಮೆಚ್ಚುಗೆ
2022ರಲ್ಲಿ ಇಂತಹದ್ದೇ ಮತ್ತೊಂದು ನಡೆಯಿಂದ ರಾಹುಲ್ ದ್ರಾವಿಡ್ ಮೆಚ್ಚುಗೆ ಗಳಿಸಿದ್ರು. ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಮೈದಾನದ ಸಿಬ್ಬಂದಿ ಪಂದ್ಯ ಮರು ಆರಂಭಕ್ಕೆ ಇನ್ನಿಲ್ಲದ ಪರಿಶ್ರಮ ಹಾಕಿದ್ರು. ಮಧ್ಯರಾತ್ರಿ 1 ಗಂಟೆ ಪಂದ್ಯ ಆರಂಭಗೊಂಡು ಸರಣಿ 1-1 ರಲ್ಲಿ ಸಮಗೊಳ್ತು. ಪಂದ್ಯ ಮುಕ್ತಾಯದ ಬಳಿಕ ಮೈದಾನದ ಸಿಬ್ಬಂದಿ ಜೊತೆ ಫೋಟೋ ತೆಗೆಸಿಕೊಂಡು ಅವರ ಕಾರ್ಯವನ್ನ ಶ್ಲಾಘಿಸಿದ್ರು.
ರಾಹುಲ್ ದ್ರಾವಿಡ್ ಗ್ರೌಂಡ್ ಸ್ಟಾಫ್ಗಳನ್ನ ಎಷ್ಟು ಪ್ರೀತಿಸ್ತಾರೋ, ಅವರು ಸಹ ದಿ ವಾಲ್ರನ್ನ ಅಷ್ಟೇ ಇಷ್ಟಪಡ್ತಾರೆ. ಭಾರತದಲ್ಲಿ ಎಲ್ಲೆ ಪಂದ್ಯ ನಡೆದ್ರೂ, ವಾಲ್ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿ ಬೀಳ್ತಿದ್ರೂ ದ್ರಾವಿಡ್ ಎಂದೂ ಅವರನ್ನ ಬೇಸರಗೊಳಿಸಿಲ್ಲ. ಇದೇ ಕಾರಣಕ್ಕೆ ರಾಹುಲ್ ದ್ರಾವಿಡ್ಗೆ ಜಂಟಲ್ಮನ್ ಗೇಮ್ನ ರಿಯಲ್ ಜಂಟಲ್ಮನ್ ಅನಿಸಿಕೊಂಡಿರೋದು.
ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಕರೆತರಲು NASA ಪ್ಲಾನ್; ಇಲ್ಲಿ ಎಲಾನ್ ಮಸ್ಕ್ ಅವರ SpaceX ಕೆಲಸ ಏನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್