/newsfirstlive-kannada/media/post_attachments/wp-content/uploads/2024/09/SAMIT-DRAVID-1.jpg)
ಮಹಾರಾಜ ಟಿ20 ಟ್ರೋಫಿ ಟೂರ್ನಿಯ ಹರಾಜಿನಲ್ಲಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಅನ್ಸೋಲ್ಡ್ ಆಗಿದ್ದಾರೆ. ಕಳೆದ ಸೀಸನ್ನಲ್ಲಿ ಮೈಸೂರು ವಾರಿಯರ್ಸ್ ಪರ ಸಮಿತ್ ದ್ರಾವಿಡ್ ಆಡಿದ್ರು. 7 ಪಂದ್ಯಗಳಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದ ಸಮಿತ್ ಕೇವಲ 82 ರನ್ಗಳಿಸಿದ್ರು.
ಇನ್ನು, ಬಿಡ್ಡಿಂಗ್ ವಾರ್ನಲ್ಲಿ ದೇವದತ್ ಪಡಿಕ್ಕಲ್ 13.20 ಲಕ್ಷ ರೂಪಾಯಿಗೆ ಹುಬ್ಬಳ್ಳಿ ಟೈಗರ್ಸ್ ಪಾಲಾದರು. ಮನೀಶ್ ಪಾಂಡೆ 12.20 ಲಕ್ಷಕ್ಕೆ ಮೈಸೂರ್ ವಾರಿಯರ್ಸ್ಗೆ ಸೇಲಾದ್ರೆ, ಅಭಿನವ್ ಮನೋಹರ್ ಸಹ 12.20 ಲಕ್ಷ ರೂಪಾಯಿಗೆ, ಹುಬ್ಬಳ್ಳಿ ಟೈಗರ್ಸ್ ತಂಡ ಸೇರಿಕೊಂಡ್ರು. ವೇಗಿ ವಿಧ್ವತ್ ಕಾವೇರಪ್ಪರನ್ನ ಶಿವಮೊಗ್ಗ ಲಯನ್ಸ್ 10.80 ಲಕ್ಷಕ್ಕೆ ಹರಾಜಿನಲ್ಲಿ ಖರೀದಿಸಿದ್ರೆ, ಲೆಗ್ಸ್ಪಿನ್ನರ್ ಶ್ರೇಯಸ್ ಗೋಪಾಲ್, 8.60 ಲಕ್ಷಕ್ಕೆ ಮಂಗಳೂರು ಡ್ರ್ಯಾಗನ್ಸ್ ಫ್ರಾಂಚೈಸಿಗೆ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ: KSCA Auction: ಪಡಿಕ್ಕಲ್, ಮನಿಶ್ ಪಾಂಡೆ ಭಾರೀ ಮೊತ್ತಕ್ಕೆ ಸೇಲ್.. ಯಾರು ಹೆಚ್ಚು ಮೊತ್ತಕ್ಕೆ ಬಿಕರಿ..?
ಆಟಗಾರರನ್ನ ಫ್ರಾಂಚೈಸಿ ಮಾಲೀಕರು ಹರಾಜಿನಲ್ಲಿ ಖರೀದಿಸಿದ್ರೆ, ತಂಡಗಳು ಕೆಲ ಆಟಗಾರರನ್ನ ರೀಟೈನ್ ಮಾಡಿಕೊಂಡಿವೆ. ಮಂಗಳೂರು ಡ್ರ್ಯಾಗನ್ಸ್, ಅಭಿಲಾಷ್ ಶೆಟ್ಟಿ, ಮ್ಯಾಕ್ನೀಲ್ ನೋರೋನ್ಹಾ, ಲೋಚನ್ ಗೌಡ, ಪರಾಸ್ ಆರ್ಯರನ್ನ ರೀಟೈನ್ ಮಾಡಿಕೊಂಡಿದ್ರೆ, ಬೆಂಗಳೂರು ಬ್ಲಾಸ್ಟರ್ಸ್ ಮಯಾಂಕ್ ಅಗರ್ವಾಲ್, ಶುಭಾಂಗ್ ಹೆಗ್ಡೆ, ನವೀನ್ ಎಂ.ಜಿ, ಸೂರಜ್ ಅಹುಜಾರನ್ನ ತಮ್ಮಲ್ಲೇ ಉಳಿಸಿಕೊಂಡಿತ್ತು. ಯುವ ಕ್ರಿಕೆಟಿಗರಿಗೆ ತಮ್ಮ ಟ್ಯಾಲೆಂಟ್ ತೋರಿಸಲು ಕೆಎಸ್ಸಿಎ ಮಹಾರಾಜ T20 ಟ್ರೋಫಿ, ಉತ್ತಮ ವೇದಿಕೆಯಾಗಿದೆ. ಈ ಪ್ರತಿಷ್ಟಿತ ಟೂರ್ನಿಯಲ್ಲಿ ಆಟಗಾರರು ಮಿಂಚಿದ್ರೆ, ಅದೃಷ್ಟ ಬದಲಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ: 114 ವರ್ಷದ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಹಿಟ್ ಅಂಡ್ ರನ್ ಕೇಸ್; ಆರೋಪಿ ಬಂಧನ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ