Advertisment

ಪ್ರತಿಭಟನೆ ವೇಳೆ ನೆಲಕ್ಕೆ ಬಿದ್ದ ಬಿಜೆಪಿ ಸಂಸದ..ಪ್ರತಾಪ್ ಚಂದ್ರ ಸಾರಂಗಿಯವರನ್ನ ತಳ್ಳಿದ್ರಾ ರಾಹುಲ್ ಗಾಂಧಿ?

author-image
Gopal Kulkarni
Updated On
ಪ್ರತಿಭಟನೆ ವೇಳೆ ನೆಲಕ್ಕೆ ಬಿದ್ದ ಬಿಜೆಪಿ ಸಂಸದ..ಪ್ರತಾಪ್ ಚಂದ್ರ ಸಾರಂಗಿಯವರನ್ನ ತಳ್ಳಿದ್ರಾ ರಾಹುಲ್ ಗಾಂಧಿ?
Advertisment
  • ಅಮಿತ್​ ಶಾ ವಿರುದ್ಧ ಇಂಡಿಯಾ ಒಕ್ಕೂಟದ ಪ್ರತಿಭಟನೆ
  • ರಾಹುಲ್​ ಗಾಂಧಿ ಬಿಜೆಪಿ ಸಂಸದರನ್ನ ತಳ್ಳಿದ ಆರೋಪ
  • ಬಿಜೆಪಿ ಪಕ್ಷದ ಸಂಸದ ಪ್ರತಾಪ ಚಂದ್ರ ಸಾರಂಗಿ​ಗೆ ಗಾಯ

ಇಂದು ಸಂಸತ್ ಭವನದ ಎದುರು ಕಾಂಗ್ರಸ್ ಹಾಗೂ ಬಿಜೆಪಿಯ ಹೈಡ್ರಾಮಾ ನಡೆದಿದೆ. ಅಂಬೇಡ್ಕರ್ ವಿಚಾರವಾಗಿ ಅಮಿತ್ ಶಾ ಆಡಿದ ಮಾತುಗಳನ್ನು ಹಿಡಿದುಕೊಂಡು ಉಭಯ ಪಕ್ಷಗಳು ಪ್ರತಿಭಟನೆಗೆ ಮುಂದಾಗಿವೆ. ಅಮಿತ್ ಶಾ ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದರೆ,

Advertisment

ಬಿಜೆಪಿ ತಿರುಚಿದ ವಿಡಿಯೋ ಹಾಕಿ ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆ ಎಂದು ದೂರುತ್ತಿದೆ. ಇದೇ ವಿಚಾರವಾಗಿ ಇಂದು ಸಂಸತ್ ಭವನದಲ್ಲಿ ಇಂಡಿಯಾ ಒಕ್ಕೂಟ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿಯವರನ್ನು ರಾಹುಲ್ ಗಾಂಧಿ ತಳ್ಳಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಇದನ್ನೂ ಓದಿ: ಡ್ರ್ಯಾಗನ್ ಅಂಗಳದಲ್ಲಿ ಭಾರತದ ಜೇಮ್ಸ್​ ಬಾಂಡ್​ ; ಚೀನಾ-ಭಾರತದ ಗಡಿ ತಂಟೆಗಳಿಗೆ ಬೀಳುತ್ತಾ ಬ್ರೇಕ್

ಸಂಸತ್ ಭವನದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಬಿಜೆಪಿ- ಕಾಂಗ್ರೆಸ್ ಉಭಯ ಪಕ್ಷಗಳು ದೊಡ್ಡ ಹೈಡ್ರಾಮಾ ನಡೆಸಿವೆ. ಪ್ರತಿಭಟನೆ ವೇಳೆ ಸಂಸದ ಪ್ರತಾಪ್ ಚಂದ್ರ ಸಾರಂಗಿಯವರನ್ನು ತಳ್ಳಿದ್ದಾರೆ ಎಂದು ಬಿಜೆಪಿ ಸಂಸದರು ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿ ತಳ್ಳಿದ್ದರಿಂದಲೇ ನಾನು ಆಯತಪ್ಪಿ ಬಿದ್ದಿದ್ದು  ಎಂದು ಸಾರಂಗಿ ಹೇಳುತ್ತಿದ್ದಾರೆ. ಸದ್ಯ ಬಿದ್ದು ಗಾಯಗೊಂಡಿರುವ ಪ್ರತಾಪ್ ಚಂದ್ರ ಸಾರಂಗಿಯವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಾಪ್ ಚಂದ್ರ ಸಾರಂಗಿ ನಾನು ತಳ್ಳಿದ್ದರಿಂದಲೇ ಬಿದ್ದಿದ್ದು, ನನ್ನಿಂದಾಗಿಯೇ ಅವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment