ಬೆಂಗಳೂರಿಗೆ ರಾಹುಲ್ ಗಾಂಧಿ, ಕೋರ್ಟ್ಗೆ ಖುದ್ದು ಹಾಜರಿ
ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ, ಡಿಕೆಶಿ ಹಾಜರು ಫಿಕ್ಸ್
ಮಾರ್ಚ್ 11ರಂದು ಕೋರ್ಟ್ ಸಮನ್ಸ್, ಏನಿದು ಪ್ರಕರಣ..?
ಬಿಜೆಪಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಕೇಸ್ ವಿಚಾರಣೆಗೆ ಖುದ್ದಾಗಿ ರಾಹುಲ್ ಆಗಮಿಸಿದ್ದಾರೆ. ವಿಶೇಷ ಕೋರ್ಟ್ ಆದೇಶದಂತೆ ಬೆಳಗ್ಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ರಾಹುಲ್ಗೆ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಸಹ ಸಾಥ್ ನೀಡಲಿದ್ದಾರೆ. ಈಗಾಗಲೇ ಬೆಂಗಳೂರಿಗೆ ಆಗಮಿಸಿರುವ ರಾಹುಲ್ ಗಾಂಧಿಯನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ವರಿಷ್ಠರು, ಸಂಸದರು ಆದ @RahulGandhi ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಿಗೆ ಆತ್ಮೀಯವಾಗಿ ಬರಮಾಡಿಕೊಂಡು, ಕುಶಲೋಪರಿ ವಿಚಾರಿಸಿದೆ. pic.twitter.com/OQSSuzuv12
— Siddaramaiah (@siddaramaiah) June 7, 2024
ಬೆಂಗಳೂರಿಗೆ ರಾಹುಲ್ ಗಾಂಧಿ, ಕೋರ್ಟ್ಗೆ ಖುದ್ದು ಹಾಜರಿ
ಪೇಟಿಎಂ ಸರ್ಕಾರ, 40 ಪರ್ಸೆಂಟ್ ಗೌರ್ನಮೆಂಟ್.. ಇದು ವರ್ಷದ ಹಿಂದೆ ಕಾಂಗ್ರೆಸ್ ಪ್ರಯೋಗಿಸಿದ್ದ ಅಸ್ತ್ರ.. ಅದೇ ಅಸ್ತ್ರದಲ್ಲಿ ಶಸ್ತ್ರ ಹಿಡಿದು ಹೋರಾಡಿದ್ದ ಕಾಂಗ್ರೆಸ್ಗೆ ಈಗ ರಾಜ್ಯದ ಗದ್ದುಗೆ ದಕ್ಕಿದೆ. ಆದ್ರೆ, ಇದೇ ಆರೋಪ ಸಂಬಂಧ ಮಾನನಷ್ಟ ಮೊಕದ್ದಮೆ ಹೂಡಿದ ಬಿಜೆಪಿ, ಹಾಲಿ ಸರ್ಕಾರವನ್ನ ಕೋರ್ಟ್ ಕಟಕಟೆಗೆ ಎಳೆದಿದೆ.
ಇದನ್ನೂ ಓದಿ:ಚುನಾವಣೆ ಸೋಲು ಬೆನ್ನಲ್ಲೇ ಕೋಲಾಹಲ.. ಅಸ್ಥಿರಗೊಳ್ಳುವ ಆತಂಕದಲ್ಲಿ ಮಹಾರಾಷ್ಟ್ರ ಸರ್ಕಾರ..!
ಈಗಾಗಲೇ ಈ ಪ್ರಕರಣದಲ್ಲಿ ಸಿಎಂ ಮತ್ತು ಡಿಸಿಎಂ ಜಾಮೀನು ಪಡೆದು ರಿಲೀಫ್ ಆಗಿದ್ದಾರೆ. ಅವತ್ತು ಕೋರ್ಟ್ ಹಾಜರಾತಿಯಿಂದ ವಿನಾಯ್ತಿ ಪಡೆದಿದ್ದ ರಾಹುಲ್ ಗಾಂಧಿ, ಇವತ್ತು ಕೋರ್ಟ್ಗೆ ಹಾಜರಾಗಬೇಕಿದೆ. ಪ್ರಕರಣದ 4ನೇ ಆರೋಪಿಯಾದ ರಾಹುಲ್ ಬೆಳಗ್ಗೆ 10:30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಜನಪ್ರತಿನಿಧಿಗಳ ವಿಶೇಷ ಕೋರ್ಟ್ನ ವಿಚಾರಣೆಗೆ ಹಾಜರಾಗಲಿದ್ದಾರೆ.
ಕಾಂಗ್ರೆಸ್ ವಿರುದ್ಧ ಏನಿದು ಕೇಸ್?
2023ರ ವಿಧಾನಸಭೆ ಎಲೆಕ್ಷನ್ಗೂ ಮೊದಲು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಿರುದ್ಧ ಜಾಹೀರಾತು ನೀಡ್ಲಾಗಿತ್ತು. 2023ರ ಮೇ 5ರಂದು ಪತ್ರಿಕೆಗಳಲ್ಲಿ ಕಾಂಗ್ರೆಸ್ ನೀಡಿದ್ದ ಜಾಹೀರಾತಿನಲ್ಲಿ ಬಿಜೆಪಿಯನ್ನು ಭ್ರಷ್ಟ ಎಂದು ಉಲ್ಲೇಖಿಸಿತ್ತು.. ಕರ್ನಾಟಕದ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಪಡೆಯುತ್ತಿದೆ ಅಂತ ಆರೋಪಿಸಿತ್ತು.. ಈ ಜಾಹೀರಾತು ಸಾಕ್ಷಿ ಆಗಿಸಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.. ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ರು.. 2024ರ ಮಾರ್ಚ್ 11ರಂದು ಕಾಂಗ್ರೆಸ್ ನಾಯಕರಿಗೆ ಈ ಸಂಬಂಧ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು.
ಇದನ್ನೂ ಓದಿ:ಶತ್ರು ಸಂಹಾರಕ್ಕೆ ವೀರಸೇನಾನಿ ರೆಡಿ.. ಬಾಬರ್ ಅಝಂ ಪಡೆಗೆ ಇನ್ನಿಲ್ಲದ ನಡುಕ.. ಕಾರಣ ಇಲ್ಲಿದೆ..!
ಪ್ರಕರಣದಲ್ಲಿ ಜಾಮೀನು ಪಡೆಯದಿದ್ರೆ ಬಂಧನ ಸಾಧ್ಯತೆ ಇದೆ.. ಇಂದು ಕೋರ್ಟ್ ಮುಂದೆ ಹಾಜರಾಗುವ ರಾಹುಲ್ 2 ಬಾರಿ ನೀಡಿದ್ದ ಸಮನ್ಸ್ಗೆ ಉತ್ತರಿಸಿ ಕ್ಷಮೆ ಕೇಳಲಿದ್ದಾರೆ.. ಬಳಿಕ ಜಾಮೀನು ಪಡೆಯುವ ಸಾಧ್ಯತೆ ಇದೆ.. ಆನಂತರ ಮುಂದಿನ ದಿನಾಂಕಕ್ಕೆ ಟೈಂ ತೆಗೆದುಕೊಂಡು ಹೋಗಲಿದ್ದಾರೆ.
ಇದನ್ನೂ ಓದಿ:ಮಧ್ಯರಾತ್ರಿ ಭೀಕರ ಅಪಘಾತ.. ಮೂವರು ಸ್ಥಳದಲ್ಲೇ ಸಾವು.. ಮರಕ್ಕೆ ಸಿಲುಕಿ ನೇತಾಡಿದ ಮೃತದೇಹ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಂಗಳೂರಿಗೆ ರಾಹುಲ್ ಗಾಂಧಿ, ಕೋರ್ಟ್ಗೆ ಖುದ್ದು ಹಾಜರಿ
ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ, ಡಿಕೆಶಿ ಹಾಜರು ಫಿಕ್ಸ್
ಮಾರ್ಚ್ 11ರಂದು ಕೋರ್ಟ್ ಸಮನ್ಸ್, ಏನಿದು ಪ್ರಕರಣ..?
ಬಿಜೆಪಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಕೇಸ್ ವಿಚಾರಣೆಗೆ ಖುದ್ದಾಗಿ ರಾಹುಲ್ ಆಗಮಿಸಿದ್ದಾರೆ. ವಿಶೇಷ ಕೋರ್ಟ್ ಆದೇಶದಂತೆ ಬೆಳಗ್ಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ರಾಹುಲ್ಗೆ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಸಹ ಸಾಥ್ ನೀಡಲಿದ್ದಾರೆ. ಈಗಾಗಲೇ ಬೆಂಗಳೂರಿಗೆ ಆಗಮಿಸಿರುವ ರಾಹುಲ್ ಗಾಂಧಿಯನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ವರಿಷ್ಠರು, ಸಂಸದರು ಆದ @RahulGandhi ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಿಗೆ ಆತ್ಮೀಯವಾಗಿ ಬರಮಾಡಿಕೊಂಡು, ಕುಶಲೋಪರಿ ವಿಚಾರಿಸಿದೆ. pic.twitter.com/OQSSuzuv12
— Siddaramaiah (@siddaramaiah) June 7, 2024
ಬೆಂಗಳೂರಿಗೆ ರಾಹುಲ್ ಗಾಂಧಿ, ಕೋರ್ಟ್ಗೆ ಖುದ್ದು ಹಾಜರಿ
ಪೇಟಿಎಂ ಸರ್ಕಾರ, 40 ಪರ್ಸೆಂಟ್ ಗೌರ್ನಮೆಂಟ್.. ಇದು ವರ್ಷದ ಹಿಂದೆ ಕಾಂಗ್ರೆಸ್ ಪ್ರಯೋಗಿಸಿದ್ದ ಅಸ್ತ್ರ.. ಅದೇ ಅಸ್ತ್ರದಲ್ಲಿ ಶಸ್ತ್ರ ಹಿಡಿದು ಹೋರಾಡಿದ್ದ ಕಾಂಗ್ರೆಸ್ಗೆ ಈಗ ರಾಜ್ಯದ ಗದ್ದುಗೆ ದಕ್ಕಿದೆ. ಆದ್ರೆ, ಇದೇ ಆರೋಪ ಸಂಬಂಧ ಮಾನನಷ್ಟ ಮೊಕದ್ದಮೆ ಹೂಡಿದ ಬಿಜೆಪಿ, ಹಾಲಿ ಸರ್ಕಾರವನ್ನ ಕೋರ್ಟ್ ಕಟಕಟೆಗೆ ಎಳೆದಿದೆ.
ಇದನ್ನೂ ಓದಿ:ಚುನಾವಣೆ ಸೋಲು ಬೆನ್ನಲ್ಲೇ ಕೋಲಾಹಲ.. ಅಸ್ಥಿರಗೊಳ್ಳುವ ಆತಂಕದಲ್ಲಿ ಮಹಾರಾಷ್ಟ್ರ ಸರ್ಕಾರ..!
ಈಗಾಗಲೇ ಈ ಪ್ರಕರಣದಲ್ಲಿ ಸಿಎಂ ಮತ್ತು ಡಿಸಿಎಂ ಜಾಮೀನು ಪಡೆದು ರಿಲೀಫ್ ಆಗಿದ್ದಾರೆ. ಅವತ್ತು ಕೋರ್ಟ್ ಹಾಜರಾತಿಯಿಂದ ವಿನಾಯ್ತಿ ಪಡೆದಿದ್ದ ರಾಹುಲ್ ಗಾಂಧಿ, ಇವತ್ತು ಕೋರ್ಟ್ಗೆ ಹಾಜರಾಗಬೇಕಿದೆ. ಪ್ರಕರಣದ 4ನೇ ಆರೋಪಿಯಾದ ರಾಹುಲ್ ಬೆಳಗ್ಗೆ 10:30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಜನಪ್ರತಿನಿಧಿಗಳ ವಿಶೇಷ ಕೋರ್ಟ್ನ ವಿಚಾರಣೆಗೆ ಹಾಜರಾಗಲಿದ್ದಾರೆ.
ಕಾಂಗ್ರೆಸ್ ವಿರುದ್ಧ ಏನಿದು ಕೇಸ್?
2023ರ ವಿಧಾನಸಭೆ ಎಲೆಕ್ಷನ್ಗೂ ಮೊದಲು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಿರುದ್ಧ ಜಾಹೀರಾತು ನೀಡ್ಲಾಗಿತ್ತು. 2023ರ ಮೇ 5ರಂದು ಪತ್ರಿಕೆಗಳಲ್ಲಿ ಕಾಂಗ್ರೆಸ್ ನೀಡಿದ್ದ ಜಾಹೀರಾತಿನಲ್ಲಿ ಬಿಜೆಪಿಯನ್ನು ಭ್ರಷ್ಟ ಎಂದು ಉಲ್ಲೇಖಿಸಿತ್ತು.. ಕರ್ನಾಟಕದ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಪಡೆಯುತ್ತಿದೆ ಅಂತ ಆರೋಪಿಸಿತ್ತು.. ಈ ಜಾಹೀರಾತು ಸಾಕ್ಷಿ ಆಗಿಸಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.. ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ರು.. 2024ರ ಮಾರ್ಚ್ 11ರಂದು ಕಾಂಗ್ರೆಸ್ ನಾಯಕರಿಗೆ ಈ ಸಂಬಂಧ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು.
ಇದನ್ನೂ ಓದಿ:ಶತ್ರು ಸಂಹಾರಕ್ಕೆ ವೀರಸೇನಾನಿ ರೆಡಿ.. ಬಾಬರ್ ಅಝಂ ಪಡೆಗೆ ಇನ್ನಿಲ್ಲದ ನಡುಕ.. ಕಾರಣ ಇಲ್ಲಿದೆ..!
ಪ್ರಕರಣದಲ್ಲಿ ಜಾಮೀನು ಪಡೆಯದಿದ್ರೆ ಬಂಧನ ಸಾಧ್ಯತೆ ಇದೆ.. ಇಂದು ಕೋರ್ಟ್ ಮುಂದೆ ಹಾಜರಾಗುವ ರಾಹುಲ್ 2 ಬಾರಿ ನೀಡಿದ್ದ ಸಮನ್ಸ್ಗೆ ಉತ್ತರಿಸಿ ಕ್ಷಮೆ ಕೇಳಲಿದ್ದಾರೆ.. ಬಳಿಕ ಜಾಮೀನು ಪಡೆಯುವ ಸಾಧ್ಯತೆ ಇದೆ.. ಆನಂತರ ಮುಂದಿನ ದಿನಾಂಕಕ್ಕೆ ಟೈಂ ತೆಗೆದುಕೊಂಡು ಹೋಗಲಿದ್ದಾರೆ.
ಇದನ್ನೂ ಓದಿ:ಮಧ್ಯರಾತ್ರಿ ಭೀಕರ ಅಪಘಾತ.. ಮೂವರು ಸ್ಥಳದಲ್ಲೇ ಸಾವು.. ಮರಕ್ಕೆ ಸಿಲುಕಿ ನೇತಾಡಿದ ಮೃತದೇಹ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ