ದೀಪಾವಳಿ ಹಬ್ಬದಂದು ಹರಿದ ನೆತ್ತ*ರು.. ಮನೆ ಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಕೊ*ಲೆ

author-image
AS Harshith
Updated On
ದೀಪಾವಳಿ ಹಬ್ಬದಂದು ಹರಿದ ನೆತ್ತ*ರು.. ಮನೆ ಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಕೊ*ಲೆ
Advertisment
  • ದೀಪಾವಳಿ ಹಬ್ಬದಂದು ಬೆಳಕಿಗೆ ಬಂದ ಅಮಾನವೀಯ ಘಟನೆ
  • ಮನೆ ಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಶುರುವಾದ ಗಲಾಟೆ
  • ಹಬ್ಬದಂದು ನಡೆದ ಗಲಾಟೆಯಲ್ಲಿ ಓರ್ವ ಸಾ*ವು, ಇಬ್ಬರು ಗಂಭೀರ

ಮನೆ ಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಕೊ*ಲೆ ಮಾಡಿರೋ ಘಟನೆಯೊಂದು ನಡೆದಿದೆ. ರಾಯಚೂರು ನಗರದ ರಾಗಿಮಾನಗಡ್ಡ ಬಡಾವಣೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಪಟಾಕಿ ಹಚ್ಚುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. 7 ಯುವಕರ ಗುಂಪು ತಲ್ವಾರ್​, ಕಟ್ಟಿಗೆಯಿಂದ ನರಸಿಂಹಲು ಎಂಬಾತನಿಗೆ ಹೊಡೆದು ಕೊ*ಲೆಗೈದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ! ಹೆಚ್ಚುತ್ತಿದೆ ಪಟಾಕಿ ಸಿಡಿತ ಪ್ರಕರಣ.. ಸದ್ಯ ಗಾಯಾಳುಗಳ ಸಂಖ್ಯೆ ಎಷ್ಟಿದೆ ಗೊತ್ತಾ?

ಮನೆಯಲ್ಲಿ ಮಕ್ಕಳಿದ್ದಾರೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ 37 ವರ್ಷದ ನರಸಿಂಹಲು ಎಂಬಾತನನ್ನು ಕೊ*ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸ್ಕೂಟರ್​ನಲ್ಲಿ ತೆರಳುವಾಗ ಈರುಳ್ಳಿ ಬಾಂಬ್​ ಸ್ಫೋಟ.. ಓರ್ವ ಸಾ*ವು, ಆರು ಮಂದಿಗೆ ಗಾಯ

ವಿನೋದ, ರೋಹನ್, ಈಶ್ವರ್, ನರೇಶ, ಪ್ರಕಾಶ, ಚಿಂಟು, ಅಖಿಲ್ ಎಂಬುವವರು ಗಲಾಟೆ ಮಾಡಿ ಕೊ*ಲೆ ಮಾಡಿದ್ದಾರೆ. ಗಲಾಟೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳು ನವೋದಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೈದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment