ಪ್ರಯಾಣಿಕರೇ ಎಚ್ಚರ.. ಮತ್ತೆ ಕಾಲ್ತುಳಿತದ ಭೀತಿ; ದೇಶದ ರೈಲು ನಿಲ್ದಾಣಗಳಲ್ಲಿ ಫುಲ್ ಅಲರ್ಟ್‌ ಘೋಷಣೆ

author-image
Gopal Kulkarni
Updated On
ಪ್ರಯಾಣಿಕರೇ ಎಚ್ಚರ.. ಮತ್ತೆ ಕಾಲ್ತುಳಿತದ ಭೀತಿ; ದೇಶದ ರೈಲು ನಿಲ್ದಾಣಗಳಲ್ಲಿ ಫುಲ್ ಅಲರ್ಟ್‌ ಘೋಷಣೆ
Advertisment
  • ಅಂತಿಮ ಹಂತಕ್ಕೆ ಬಂದಿರುವ ಮಹಾಕುಂಭಮೇಳದ ಪುಣ್ಯಸ್ನಾದ ಮಹೋತ್ಸವ
  • ಕೀ ಜಂಕ್ಷನ್​​ಗಳಲ್ಲಿ ಸೆಕ್ಯೂರಿಟಿ ಹೆಚ್ಚಿಸುವ ಮೂಲಕ ರೈಲ್ವೆ ಇಲಾಖೆ ಫುಲ್​ ಅಲರ್ಟ್​
  • ಹೆಚ್ಚುವರಿ ಪೊಲೀಸರ ನಿಯೋಜನೆ, ಸಿಸಿಟಿವಿ, ಟಿಕೆಟ್​ ಚೆಕ್ಕಿಂಕ್ ಅನೇಕ ವ್ಯವಸ್ಥೆಗಳು

ಮಹಾಕುಂಭಮೇಳವೆಂಭ ಮಹಾಮಹೋತ್ಸವದ ಈಗ ಅಂತಿಮ ಚರಣದಲ್ಲಿದೆ. ಈಗಾಗಲೇ 56 ಕೋಟಿ ಜನ ಭಕ್ತರು ಗಂಗೆಯಲ್ಲಿ ಮಿಂದೆದ್ದಿದ್ದಾರೆ. ಆದರೆ ಇನ್ನೂ ಕೂಡ ಪ್ರಯಾಗರಾಜ್​ಗೆ ಹರಿದು ಬರುವ ಭಕ್ತಾದಿಗಳ ಸಂಖ್ಯೆ ಹಾಗೆಯೇ ಮುಂದುವರಿದಿದೆ. ಈ ಮಹಾಕುಂಭಮೇಳದ ಪುಣ್ಯಸ್ನಾನವು ಫೆಬ್ರವರಿ 26ಕ್ಕೆ ಮುಗಿಯಲಿದೆ. ಅದರಲ್ಲೂ ಇದೇ ವಾರದಲ್ಲಿ ಮಹಾಶಿವರಾತ್ರಿಯೂ ಕೂಡ ಬರಲಿದ್ದು. ಪ್ರಯಾಗರಾಜ್​ಗೆ ಈ ಐದು ದಿನದಲ್ಲಿ ಹರಿದು ಬರುವ ಭಕ್ತಕೋಟಿಯ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಅದರಲ್ಲೂ ವಾರದ ಕೊನೆಗೆ ವಿಪರೀತ ಜನಸೇರುವ ನಿರೀಕ್ಷೆಯೂ ಇದೆ ಹೀಗಾಗಿ ರೈಲ್ವೆ ಇಲಾಖೆ ಈ ಹಿಂದಾದ ಕಾಲ್ತುಳಿತದಂತಹ ಹಾಗೂ ಪ್ರಯಾಣಿಕರು ಗ್ಲಾಸ್​ ಒಡೆದಂತ ದುರಂತಗಳು ನಡೆಯದಂತೆ ತುಂಬಾ ಕಟ್ಟುನಿಟ್ಟಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ.

publive-image

ಪಂಡಿತ್ ದೀನದಯಾಳ ಉಪಾಧ್ಯಾಯ್​ ಜಂಕ್ಷನ್ ಉತ್ತರಪ್ರದೇಶದಲ್ಲಿ ಅತಿಹೆಚ್ಚು ಬಿಗಿ ಭದ್ರತೆಯನ್ನು ಮಾಡಲಾಗಿದೆ. ಜನಜಂಗುಳಿಯನ್ನು ನಿಯಂತ್ರಣ ಮಾಡಲೆಂದೇ ಕೆಲವು ಸಿಬ್ಬಂದಗಳನ್ನು ರೈಲ್ವೆಸ್ಟೇಷನ್ ಆಚೆಗೆ ನಿಯೋಜಿಸಲಾಗಿದೆ. ಅದರಲ್ಲೂ ಬಿಹಾರ, ಪಶ್ಚಿಮ ಬಂಗಾಲ, ಜಾರ್ಖಂಡ್​ ಹಾಗೂ ಓಡಿಶಾದಿಂದ ಬರುವ ಕೀ ಗೇಟ್​ವೇಗಳನ್ನು ಬಹಳ ಕಟ್ಟುನಿಟ್ಟಾಗಿ ನಿಭಾಯಿಸುವಂತೆ ಭದ್ರತಾ ಪಡೆಯನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಮಹಾಕುಂಭಮೇಳ ಮುಗಿಸಿ ಅಯೋಧ್ಯೆಗೆ ತೆರಳುವಾಗ ಭೀಕರ ಅಪಘಾತ; ಒಂದೇ ಕುಟುಂಬದ 5 ಮಂದಿ ಸಾವು

ಇದರೊಂದಿಗೆ ದೀನ್ ದಯಾಳ ಉಪಾಧ್ಯಾಯ್ ರೈಲ್ವೆ ಜಂಕ್ಷನ್​ನಲ್ಲಿ ಅನಧಿಕೃತ ಪ್ರಯಾಣಿಕರನ್ನು ನಿರ್ಬಂಧಿಸಲಾಗಿದ್ದು ಟಿಕೆಟ್​ ಚೆಕ್ಕಿಂಗ್ ಹಾಗೂ ಸೆಕ್ಯೂರಿಟಿ ಸಿಬ್ಬಂದಿಯನ್ನು ಕೂಡ ಹೆಚ್ಚಿಸಲಾಗಿದೆ.

ಇದರ ಬಗ್ಗೆ ಮಾತನಾಡಿದ ಉತ್ತರ ಮಧ್ಯ ರೈಲ್ವೆ CPRO ಶಶಿಕಾಂತ್ ತ್ರಿಪಾಠಿ ರೈಲ್ವೆ ಇಲಾಖೆ ಮಹಾಕುಂಭಮೇಳದ ಆರಂಭಿದಿಂದಲೂ ಬಿಗಿಭದ್ರತೆಗೆ ಹೆಚ್ಚು ಪ್ರಧಾನ್ಯತೆಯನ್ನು ನೀಡಿದೆ. ಈ ಬಾರಿ ವಿಕೇಂಡ್​ನಲ್ಲಿ ಬರುವ ಜನದಟ್ಟಣೆಯನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಭರಸೆಯನ್ನು ಕೊಟ್ಟಿದ್ದಾರೆ.

publive-image

ಒಂದು ವೇಳೆ ಜನದಟ್ಟಣೆ ಹೆಚ್ಚಾದರೆ ರೈಲ್ವೆ ಸ್ಟೇಷನ್​ನಲ್ಲಿ ಒಂದೇ ಎಂಟ್ರಿ ಹಾಗೂ ಒಂದೇ ಎಕ್ಸಿಟ್​ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಪ್ರಯಾಣಿಕರನ್ನು ಒಂದು ಕಡೆಯಿಂದ ಪ್ರವೇಶ ಪಡೆದು ಮತ್ತೊಂದು ಕಡೆಯಿಂದ ಆಚೆ ಹೋಗುವ ವ್ಯವಸ್ಥೆಯನ್ನೂ ಕೂಡ ಈಗ ಮಾಡಿಕೊಳ್ಳಲಾಗಿದೆ ಎಂದು ತ್ರಿಪಾಠಿ ಹೇಳಿದ್ದಾರೆ.

ಇನ್ನು ಹಲವ ಬಣ್ಣಗಳ ಹೋಲ್ಡಿಂಗ್ಸ್​ಗಳನ್ನು ಪ್ರಯಾಣಿಕರಿಗೆ ಯಾವ ಕಡೆಗೆ ಹೋಗಬೇಕು ಎಂಬುದನ್ನು ತಿಳಿಸುವ ಸಲುವಾಗಿ ಅಳಡಿಸಲಾಗಿದೆ. ಈ ಮೂಲಕ ಹಲವು ಮಾರ್ಗಗಳನ್ನು ತೆರೆಯಲಾಗಿದ್ದು ಜನದಟ್ಟಣೆಯನ್ನು ಸರಳವಾಗಿ ನಿಯಂತ್ರಿಸಬಹುದು ಎಂದು ಹೇಳಲಾಗಿದೆ. ಒಂದು ವೇಳೆ ಅವಶ್ಯಕತೆ ಪ್ರಯಾಣಿಕರ ರೈಲು ಬರುವವರೆಗೂ ಅವರಿಗೆ ಉಳಿದುಕೊಳ್ಳಲು ಖುಸ್ರೋ ಭಾಗ್​ ಬಳಿ ವ್ಯವಸ್ಥೆಯನ್ನು ಮಾಡಲಾಗಿದೆ. ಅದರಲ್ಲೂ ರೈಲ್ವೆ ಇಲಾಖೆ ಮಹಾಶಿವರಾತ್ರಿ ದಿನದಂದು ಸರಳ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ದೇಶದ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಮಹಾಕುಂಭಮೇಳದಲ್ಲಿ ಒಬ್ಬ ಚಮತ್ಕಾರಿ ಬಾಬಾ; ಕಾಲಿನಿಂದ ಟಚ್‌ ಮಾಡಿದ್ರೆ ಸಾಕಂತೆ! ಏನಿವರ ಪವಾಡ?

ಇದಕ್ಕಾಗಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್​, ಗವರ್ನಮೆಂಟ್​ ರೈಲ್ವೆ ಪೊಲೀಸ್​, ಮತ್ತು ಆರ್​ಪಿಎಫ್​ ಹಾಗೂ ಕೊರಸ್​ನ್ನು ಕೂಡ ಜನದಟ್ಟಣೆ ನಿರ್ವಹಣೆಗೆ ನಿಯೋಜಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ರೈಲ್ವೆ ಅಧಿಕಾರಿಗಳಾದ ಡಿಎಂಆರ್​ ರಾಜೇಶ್ ಗುಪ್ತಾ, ಸಿನಯರ್ ಡಿಸಿಎಂ ಸುಧಾಂಶು ಕುಮಾರ್, ಸಿನಿಯರ್ ಡಿಒಎಮ್​ ಮಹಮ್ಮದ್ ಇಕ್ಬಾಳ್​ ಮತ್ತು ಆರ್​ಎಫ್​ ಕಮಾಂಡೆಂಟ್​ ಜತಿನ್​ ಬಿ ರಾಜ್ ಇವರೆಲ್ಲರೂ ಕೂಡ ಸರಳ ಮತ್ತು ಸುರಕ್ಷಿತವಾದ ರೈಲ್ವೆ ಪ್ರಯಾಣವನ್ನು ಭಕ್ತಾದಿಗಳಿಗೆ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಯೋಜನೆಗಳು ಸಿದ್ಧಗೊಳಿಸಿದ್ದು ಖುದ್ದ ಅವರೇ ಅದರ ಮೇಲೆ ನಿಗಾ ಇಟ್ಟುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment