Advertisment

ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ -ರೈಲು ಅಪಘಾತದ ಬಗ್ಗೆ ಸಚಿವ ಸೋಮಣ್ಣ ಮಾಹಿತಿ

author-image
Ganesh
Updated On
ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ -ರೈಲು ಅಪಘಾತದ ಬಗ್ಗೆ ಸಚಿವ ಸೋಮಣ್ಣ ಮಾಹಿತಿ
Advertisment
  • ಮೈಸೂರು-ದರ್ಭಾಂಗ್​ ಎಕ್ಸ್‌ಪ್ರೆಸ್‌ ರೈಲು ಅಪಘಾತ
  • 45 ಮಂದಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ
  • ಸೂಕ್ತ ತನಿಖೆ ಮಾಡಲಾಗುತ್ತದೆ ಎಂದ ಕೇಂದ್ರ ಸಚಿವ

ತಮಿಳುನಾಡಿನ ತಿರುವಳ್ಳೂರಿನ ಬಳಿ ಮೈಸೂರು- ದರ್ಭಾಂಗ್​ ಎಕ್ಸ್‌ಪ್ರೆಸ್‌ ರೈಲು ಮತ್ತು ಗೂಡ್ಸ್ ಟ್ರೈನ್ ಡಿಕ್ಕಿಯಾಗಿ ಭಾರೀ ಅನಾಹುತ ಸಂಭವಿಸಿದೆ. ದುರ್ಘಟನೆಯಲ್ಲಿ 19 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸುಮಾರು 50 ಕ್ಕೂ ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Advertisment

ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಯೂ ನಡೆಯುತ್ತಿದೆ. ಒಟ್ಟು 45 ಮಂದಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುವುದು ಸದ್ಯದ ಮಾಹಿತಿ.

ಇದನ್ನೂ ಓದಿ:ಎರಡು ಟ್ರೈನ್​ಗಳ ಮಧ್ಯೆ ಭೀಕರ ಅಪಘಾತ; ಪ್ರಯಾಣಿಕರಿಗೆ ಗಂಭೀರ ಗಾಯ; ಆಗಿದ್ದೇನು?

ರೈಲ್ವೇ ಇಲಾಖೆಯ ರಾಜ್ಯ ಖಾತೆ ಸಚಿವ ದುರ್ಘಟನೆ ಬಗ್ಗೆ ಮಾತನಾಡಿ.. ರೈಲು ಅಪಘಾತದಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರು ಔಟ್ ಆಫ್ ಡೇಂಜರ್. ಅದೃಷ್ಟವಶಾತ್ ಯಾವ ಸಾವು-ನೋವು ಆಗಿಲ್ಲ. 13 ಬೋಗಿಗಳು ಹಳಿ ತಪ್ಪಿರುವ ಬಗ್ಗೆ ಮಾಹಿತಿ ಇದೆ. ತುಂಬಾ ಒಳ್ಳೆಯ ದಿನ, ಈ ಅಪಘಾತದಲ್ಲಿ ದೊಡ್ಡ ಅನಾಹುತ ಆಗಿಲ್ಲ. ಎಲ್ಲಾ ಪ್ರಯಾಣಿಕರನ್ನೂ ಮೆಮು ಟ್ರೈನ್ ಮೂಲಕ ಶಿಫ್ಟ್ ಮಾಡಲಾಗಿದೆ. ಪ್ರಯಾಣಿಕರಿಗೆ ಊಟ, ಉಳಿಯುವ ವ್ಯವಸ್ಥೆ ಮಾಡಲಾಗಿದೆ. ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ. ಯಾವ ಕಾರಣಕ್ಕೆ ಅಪಘಾತವಾಯ್ತು ಎಂದು ತನಿಖೆ ಆಗಬೇಕಿದೆ, ಮಾಡ್ತೀವಿ ಎಂದಿದ್ದಾರೆ.

Advertisment

ಇದನ್ನೂ ಓದಿ:ಮೈಸೂರು ದರ್ಭಾಂಗ್​ ಎಕ್ಸ್​ಪ್ರೆಸ್​​ ಅಪಘಾತ; ಹೊತ್ತಿ ಉರಿದ ಟ್ರೇನ್, ಅಸಲಿಗೆ ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment