ಭಾರೀ ಭೂಕುಸಿತ.. ಸುಮಾರು 7 ಜನರು ಸಾವು, ಸಂಪರ್ಕ ಕಡಿತ
ವಾಯುಪಡೆಯ 2 ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಚರಣೆ
ಅಂಕೋಲಾದ ಶಿರೂರಿನಲ್ಲಿ ನಡೆದಂತೆಯೇ ಭಾರೀ ಭೂಕುಸಿತ
ಅಂಕೋಲಾದ ಶಿರೂರಿನಲ್ಲಿ ನಡೆದ ಗುಡ್ಡ ಕುಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅವಘಡ ನಡೆದಿದೆ. ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಭಾರೀ ಭೂಕುಸಿತ ಸಂಭವಿಸಿದ್ದು, ಸುಮಾರು 7 ಜನರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಜಿಲ್ಲೆಯ ಮೆಪ್ಪಾಡಿಯ ಮುಂಡಕ್ಕೈ ಮತ್ತು ಚೂರಲ್ಮಲಾದಲ್ಲಿ ಈ ದುರ್ಘಟನೆ ಸಂಭವಿಸಿದೆ. ಭೂಕುಸಿತದ ಪರಿಣಾಮ ಮಣ್ಣಿನಡಿಯಲ್ಲಿ ಹಲವಾರು ಜನರು ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಒಂದು ಮಗು ಸೇರಿದಂತೆ 7 ಮೃತದೇಹಗಳು ಪತ್ತೆಯಾಗಿವೆ.
ಇದನ್ನೂ ಓದಿ: ಮದ್ಯ ಪ್ರಿಯರಿಗೆ ಮತ್ತೊಮ್ಮೆ ಶಾಕ್.. ಬಿಯರ್ ಬೆಲೆ ಮತ್ತೆ ಏರಿಕೆ ಮಾಡಲು ನಿರ್ಧಾರ
ದುರಾದೃಷ್ಟವಶಾತ್ ಮುಂಡಕ್ಕೈ, ಚೂರಲ್ಮಾಲಕಾ, ಅಟ್ಟಮಾಲ ಮತ್ತು ನೂಲ್ಪಳ ಗ್ರಾಮಗಳು ಮಳೆಯಿಂದಾಗಿ ಭೂಕುಸಿತದಿಂದಾಗಿ ಹಾನಿಗೊಳಗಾಗಿವೆ. ಪರಿಣಾಮ ಸಂಪರ್ಕ ಕೂಡ ಕಡಿತಗೊಂಡಿವೆ.
ಇದನ್ನೂ ಓದಿ: 250 ಅಡಿ ಆಳದ ತೆರೆದ ಬೋರ್ವೆಲ್ಗೆ ಬಿದ್ದ 3 ವರ್ಷದ ಮಗು.. ಆರೋಗ್ಯ ಸ್ಥಿತಿ ಗಂಭೀರ
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತಾಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ರಕ್ಷಣೆಗಾಗಿ ವಾಯುಪಡೆಯ 2 ಹೆಲಿಕಾಪ್ಟರ್ ವಯನಾಡಿಗೆ ತೆರಳಲಿದೆ ಎಂದು ಬರೆದುಕೊಂಡಿದ್ದಾರೆ. ಭೂಕುಸಿತ ಸಂಬಂಧ ಅನೇಕ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಭಾರೀ ಭೂಕುಸಿತ.. ಸುಮಾರು 7 ಜನರು ಸಾವು, ಸಂಪರ್ಕ ಕಡಿತ
ವಾಯುಪಡೆಯ 2 ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಚರಣೆ
ಅಂಕೋಲಾದ ಶಿರೂರಿನಲ್ಲಿ ನಡೆದಂತೆಯೇ ಭಾರೀ ಭೂಕುಸಿತ
ಅಂಕೋಲಾದ ಶಿರೂರಿನಲ್ಲಿ ನಡೆದ ಗುಡ್ಡ ಕುಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅವಘಡ ನಡೆದಿದೆ. ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಭಾರೀ ಭೂಕುಸಿತ ಸಂಭವಿಸಿದ್ದು, ಸುಮಾರು 7 ಜನರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಜಿಲ್ಲೆಯ ಮೆಪ್ಪಾಡಿಯ ಮುಂಡಕ್ಕೈ ಮತ್ತು ಚೂರಲ್ಮಲಾದಲ್ಲಿ ಈ ದುರ್ಘಟನೆ ಸಂಭವಿಸಿದೆ. ಭೂಕುಸಿತದ ಪರಿಣಾಮ ಮಣ್ಣಿನಡಿಯಲ್ಲಿ ಹಲವಾರು ಜನರು ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಒಂದು ಮಗು ಸೇರಿದಂತೆ 7 ಮೃತದೇಹಗಳು ಪತ್ತೆಯಾಗಿವೆ.
ಇದನ್ನೂ ಓದಿ: ಮದ್ಯ ಪ್ರಿಯರಿಗೆ ಮತ್ತೊಮ್ಮೆ ಶಾಕ್.. ಬಿಯರ್ ಬೆಲೆ ಮತ್ತೆ ಏರಿಕೆ ಮಾಡಲು ನಿರ್ಧಾರ
ದುರಾದೃಷ್ಟವಶಾತ್ ಮುಂಡಕ್ಕೈ, ಚೂರಲ್ಮಾಲಕಾ, ಅಟ್ಟಮಾಲ ಮತ್ತು ನೂಲ್ಪಳ ಗ್ರಾಮಗಳು ಮಳೆಯಿಂದಾಗಿ ಭೂಕುಸಿತದಿಂದಾಗಿ ಹಾನಿಗೊಳಗಾಗಿವೆ. ಪರಿಣಾಮ ಸಂಪರ್ಕ ಕೂಡ ಕಡಿತಗೊಂಡಿವೆ.
ಇದನ್ನೂ ಓದಿ: 250 ಅಡಿ ಆಳದ ತೆರೆದ ಬೋರ್ವೆಲ್ಗೆ ಬಿದ್ದ 3 ವರ್ಷದ ಮಗು.. ಆರೋಗ್ಯ ಸ್ಥಿತಿ ಗಂಭೀರ
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತಾಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ರಕ್ಷಣೆಗಾಗಿ ವಾಯುಪಡೆಯ 2 ಹೆಲಿಕಾಪ್ಟರ್ ವಯನಾಡಿಗೆ ತೆರಳಲಿದೆ ಎಂದು ಬರೆದುಕೊಂಡಿದ್ದಾರೆ. ಭೂಕುಸಿತ ಸಂಬಂಧ ಅನೇಕ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ