ಮಗನೊಂದಿಗೆ ಹೋದ ಅಪ್ಪನಿಗೂ ಆಪರೇಷನ್.. ವೈದ್ಯರ ಮಹಾ ಯಡವಟ್ಟು; ರೋಗಿ ಫುಲ್‌ ಕಂಗಾಲು!

author-image
admin
Updated On
ಮಗನೊಂದಿಗೆ ಹೋದ ಅಪ್ಪನಿಗೂ ಆಪರೇಷನ್.. ವೈದ್ಯರ ಮಹಾ ಯಡವಟ್ಟು; ರೋಗಿ ಫುಲ್‌ ಕಂಗಾಲು!
Advertisment
  • ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು ಅನ್ನೋ ಹಾಗಾಗಿದೆ
  • ಗಾಯಗೊಂಡ ಮಗನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಹೋದ ಅಪ್ಪ!
  • ಮಹಾ ಪ್ರಮಾದದ ಬಗ್ಗೆ ಇದೀಗ ಜಾಲತಾಣದಲ್ಲಿ ಬಹುದೊಡ್ಡ ಚರ್ಚೆ

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು ಅನ್ನೋ ಗಾದೆ ಮಾತನ್ನು ಕೇಳಿರ್ತೀರಿ, ಓದಿರ್ತೀರಿ. ಥೇಟ್​​ ಇದೇ ರೀತಿಯಲ್ಲೇ ರಾಜಸ್ಥಾನದ ವೈದ್ಯರು ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ಗಾಯಗೊಂಡ ಮಗನಿಗೆ ಚಿಕಿತ್ಸೆ ಕೊಡಿಸಲು ಹೋದ ಅಪ್ಪನಿಗೆ ಆಪರೇಷನ್ ಮಾಡಿ ಕೂರಿಸಿದ್ದರೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ರಾಜಸ್ಥಾನದ ವೈದ್ಯರನ್ನ ನೆಟ್ಟಿಗರು ಅಕ್ಷರಶಃ ರುಬ್ಬುತ್ತಿದ್ದಾರೆ.

ಆ್ಯಕ್ಸಿಡೆಂಟ್​​ ಆಗಿ ಆಸ್ಪತ್ರೆ ಸೇರಿದ್ದ ಮಗನ ಜತೆ ಅಪ್ಪ ಇದ್ರು
ರಾಜಸ್ಥಾನದ ಕೋಟಾ ಜಿಲ್ಲಾಸ್ಪತ್ರೆಯ ವೈದ್ಯರು ಬಹುದೊಡ್ಡ ಎಡವಟ್ಟು ಮಾಡಿದ್ದಾರೆ. ಪಾರ್ಶ್ವವಾಯು ಪೀಡಿತರಾಗಿದ್ದ ಜಗದೀಶ್​ ಆ್ಯಕ್ಸಿಡೆಂಟ್​​ನಿಂದ ಗಾಯಗೊಂಡಿದ್ದ ಮಗ ಮನೀಷ್​ನೊಂದಿಗೆ ಆಸ್ಪತ್ರೆಗೆ ಹೋಗಿದ್ದರು. ಇದೇ ಶನಿವಾರ ಅಪ್ಪನೊಂದಿಗೆ ಮಗನಿಗೂ ಶಸ್ತ್ರ ಚಿಕಿತ್ಸೆ ಮಾಡಿ ಆಸ್ಪತ್ರೆ ಬೆಡ್​​ ಮೇಲೆ ಇಬ್ಬರನ್ನೂ ಮಲಗಿಸಿದ್ದಾರೆ ವೈದ್ಯರು. ಇದೇ ಮಹಾ ಪ್ರಮಾದದ ಬಗ್ಗೆ ಇದೀಗ ಜಾಲತಾಣದಲ್ಲಿ ಬಹುದೊಡ್ಡ ಚರ್ಚೆಯೇ ನಡೀತಿದೆ.

ಇದನ್ನೂ ಓದಿ: ಪ್ರಾಣಿಗಳೂ ಕನಸು ಕಾಣುತ್ತವೆ.. ನಿದ್ರೆಯಲ್ಲಿದ್ದಾಗ ಅವು ಏನನ್ನು ನೋಡುತ್ತವೆ..? 

ಮಗನೊಂದಿಗೆ ಅಪ್ಪನಿಗೂ 5-6 ಸ್ಟಿಚ್​ ಹಾಕಿರೋ ವೈದ್ಯರು
ಶುಕ್ರವಾರ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಮನೀಷ್​​ ಜೊತೆಯಲ್ಲಿ ಯಾರೂ ಇಲ್ಲದ ಕಾರಣ ಅಪ್ಪನೊಂದಿಗೆ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಶನಿವಾರ ನಿಮಗೆ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ ಅಂತ ವೈದ್ಯರು ಹೇಳಿದ್ರು. ಇದೇ ಕಾರಣಕ್ಕೇ ಅಪ್ಪ ನೀವು ಆಪರೇಷನ್ ಥಿಯೇಟರ್​ ಹೊರಗೆ ಕಾಯುತ್ತಾ ಇರಿ ಅಂತ ಹೇಳಿದ್ದೆ. ಆದರೇ, ನನ್ನ ಆಪರೇಷನ್ ಮುಗಿದ ಮೇಲೆ ನೋಡಿದರೇ, ನನ್ನ ಅಪ್ಪನಿಗೂ 5-6 ಸ್ಟಿಚ್​ ಹಾಕಿರುವುದು ಗೊತ್ತಾಗಿದೆ ಎನ್ನುತ್ತಿದ್ದಾರೆ ಮನೀಷ್​.

publive-image

ಆಪರೇಷನ್​​ ಮಾಡಿದವರ ಹೆಸರು ಗೊತ್ತಿಲ್ಲ ಎಂದ ವೃದ್ಧ
ತನಗೆ ಆಪರೇಷನ್ ಮಾಡಿದ್ದು ಯಾರು ಅನ್ನೋದು ಗೊತ್ತಿಲ್ಲ ಎನ್ನುತ್ತಿರೋ ವೃದ್ಧ ಜಗದೀಶ್​ ಅಶಕ್ತರಾಗಿ ಬೆಡ್​ ಮೇಲೆ ಮಲಗಿದ್ದಾರೆ. ಈ ಪ್ರಮಾದದ ಬಗ್ಗೆ ಕೂಡಲೇ ಸಮಿತಿ ರಚಿಸಿ ತನಿಖೆ ಮಾಡುತ್ತೇವೆ ಅಂತ ಕೋಟಾ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾಕ್ಟರ್​ ಸಂಗೀತ ಸಕ್ಸೆನಾ ಹೇಳಿಕೆ ನೀಡಿದ್ದಾರೆ. ಮೂವರು ಸದಸ್ಯರ ಸಮಿತಿ ರಚಿಸಿದ್ದು, ಆದಷ್ಟು ಬೇಗ ತನಿಖೆಯ ವರದಿ ತರಿಸಿಕೊಳ್ಳುತ್ತೇನೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment