/newsfirstlive-kannada/media/post_attachments/wp-content/uploads/2025/04/Markram.jpg)
2025ರ ಐಪಿಎಲ್ ಟೂರ್ನಿಯೂ ಯಶಸ್ವಿಯಾಗಿ ಸಾಗುತ್ತಿದ್ದು ಎಲ್ಲ ಟೀಮ್ಗಳು ಗೆಲುವನ್ನೇ ಗುರಿ ಮಾಡಿಕೊಂಡಿವೆ. ಆದರೆ ಪಂದ್ಯದಲ್ಲಿ ಕೆಲ ತಂಡಗಳು ಗೆಲ್ಲುವ ಹಂತಕ್ಕೆ ಹೋಗಿ ಮುಗ್ಗರಿಸಿ ಬೀಳುತ್ತಿವೆ. ಇದರಂತೆ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆದ ಪಂದ್ಯ ಮ್ಯಾಚ್ ಫಿಕ್ಸಿಂಗ್ ಆಗಿತ್ತು ಎನ್ನುವ ಆರೋಪ ಕೇಳಿ ಬಂದಿದೆ.
ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ (ಆರ್ಸಿಎ) ಸಂಚಾಲಕ ಜಯದೀಪ್ ಬಿಹಾನಿ ಅವರು, ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. ಏಪ್ರಿಲ್ 19 ರಂದು ಸಂಜೆ 7:30ಕ್ಕೆ ನಡೆದಿದ್ದ ಪಂದ್ಯದ ವೇಳೆ ಕೇವಲ 2 ರನ್ಗಳಿಂದ ರಾಜಸ್ಥಾನ್ ತಂಡ, ಲಕ್ನೋ ವಿರುದ್ಧ ಹೀನಾಯವಾಗಿ ಸೋತಿತ್ತು. ಲಕ್ನೋ ನೀಡಿದ್ದ 180 ರನ್ಗಳ ಟಾರ್ಗೆಟ್ ಅನ್ನು ಚೇಸ್ ಮಾಡುವಾಗ ಕೊನೆ ಓವರ್ನಲ್ಲಿ 9 ರನ್ಗಳು ಬೇಕಿದ್ದವು. ರಾಜಸ್ಥಾನ್ ಕೈಯಲ್ಲಿ ಇನ್ನು 6 ವಿಕೆಟ್ಗಳಿದ್ದವು. ಈ ವೇಳೆ ಕ್ರೀಸ್ನಲ್ಲಿದ್ದ ಧೃವ್ ಜುರೆಲ್ ಹಾಗೂ ಶುಭಮ್ ದುಬೆ ಕೇವಲ 5 ರನ್ಗಳಿಸಿದ್ದರಿಂದ ರಾಜಸ್ಥಾನ್ 2 ರನ್ಗಳಿಂದ ಸೋಲೋಪ್ಪಿಕೊಂಡಿತು.
ಇದನ್ನೂ ಓದಿ:ಕಿಂಗ್ ಕೊಹ್ಲಿಯ ಬ್ಯಾಟ್ ಗಿಫ್ಟ್ ಪಡೆದ ಆ ಯಂಗ್ ಪ್ಲೇಯರ್ ಯಾರು?
ಈ ಕುರಿತು ಆರೋಪ ಮಾಡಿರುವ ಸಂಚಾಲಕ ಜಯದೀಪ್ ಬಿಹಾನಿ ಅವರು, ಪಂದ್ಯದ ಫಲಿತಾಂಶವು ಪ್ರಶ್ನಾರ್ಹ ಆಗಿರಬಹುದು ಹಾಗೂ ಟ್ಯಾಂಪರಿಂಗ್ ಬಗ್ಗೆಯೂ ಸುಳಿವು ನೀಡುತ್ತದೆ. ಇದು ಮ್ಯಾಚ್ ಫಿಕ್ಸಿಂಗ್ ಕುರಿತು ಅನುಮಾನವಿದೆ ಎಂದು ಹೇಳಿದ್ದರು. ಇದು ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ ಹಾಗೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ನಡುವೆ ಬಿರುಕು ಮೂಡಿಸಿದೆ. ಈ ಗಂಭೀರ ಆರೋಪವು ಐಪಿಎಲ್ ಟೂರ್ನಿಯಲ್ಲಿ ಸದ್ಯಕ್ಕಂತೂ ಸಂಚಲನ ಮೂಡಿಸಿದೆ.
ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು, ಆರೋಪ ಮಾಡಿರುವ ಜಯದೀಪ್ ಬಿಹಾನಿ ವಿರುದ್ಧ ದೂರು ನೀಡಿದೆ. ರಾಜಸ್ಥಾನದ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಹಾಗೂ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋರ್ ಅವರಿಗೆ ದೂರು ನೀಡಿದೆ. ದೂರು ನೀಡಿದ ಪತ್ರದಲ್ಲಿ ಆರ್ಸಿಎ ಸಂಚಾಲಕ ಜೈದೀಪ್ ಬಿಹಾನಿ ಅವರಿಂದ ಭವಿಷ್ಯದಲ್ಲಿ ಇಂತಹ ಹೇಳಿಕೆಗಳು ಬರದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬರೆಯಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ