ವೈಭವ್ ಅವರಂಥ ಅಮೂಲ್ಯ ಕೊಡುಗೆ.. ಗೆಲುವಿನೊಂದಿಗೆ ವಿದಾಯ ಹೇಳಿದ ರಾಜಸ್ಥಾನ್ ರಾಯಲ್ಸ್..!

author-image
Ganesh
Updated On
ವೈಭವ್ ಅವರಂಥ ಅಮೂಲ್ಯ ಕೊಡುಗೆ.. ಗೆಲುವಿನೊಂದಿಗೆ ವಿದಾಯ ಹೇಳಿದ ರಾಜಸ್ಥಾನ್ ರಾಯಲ್ಸ್..!
Advertisment
  • ವ್ಹೀಲ್​ಚೇರ್​ನಲ್ಲಿ ಬಂದು ಕರ್ತವ್ಯ ನಿಭಾಯಿಸಿದ ರಾಹುಲ್ ದ್ರಾವಿಡ್
  • ಮತ್ತೊಮ್ಮೆ ಕ್ರಿಕೆಟ್ ಲೋಕದ ಹೃದಯ ಗೆದ್ದ ಕನ್ನಡಿಗ ದ್ರಾವಿಡ್
  • ನಾಯಕತ್ವದ ಅನುಭವ ಪಡೆದ ರಿಯಾನ್ ಪರಾಗ್

ಐಪಿಎಲ್​ 18ನೇ ಆವೃತ್ತಿಗೆ ರಾಜಸ್ಥಾನ್ ರಾಯಲ್ಸ್​ ಗೆಲುವಿನೊಂದಿಗೆ ವಿದಾಯ ಹೇಳಿದೆ. ಕ್ರಿಕೆಟ್ ಜಗತ್ತಿಗೆ ವೈಭವ್ ಸೂರ್ಯವಂಶಿ ಅವರಂಥ ಅಮೂಲ್ಯ ಕೊಡುಗೆ, ಸವಿಸವಿ ನೆನಪಿನೊಂದಿಗೆ ಹಾಗೂ ಹೊಸ ಹೊಸ ಅನುಭವಗಳೊಂದಿಗೆ ಗುಡ್​ಬೈ ಹೇಳಿದೆ.

ಇಂದು ಚೆನ್ನೈ ಸೂಪರ್ ಕಿಂಗ್ಸ್​​ ತಂಡವನ್ನು ರಾಜಸ್ಥಾನ್ ರಾಯಲ್ಸ್ ಎದುರಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಸಿಎಸ್​​ಕೆ, 8 ವಿಕೆಟ್ ಕಳೆದುಕೊಂಡು 187 ರನ್​ಗಳಿಸಿತ್ತು. ಈ ಗುರಿ ಬೆನ್ನು ಹತ್ತಿದ್ದ ರಾಜಸ್ಥಾನ್ ರಾಯಲ್ಸ್, 17.1 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಕಾಣ್ತು.

ಇದನ್ನೂ ಓದಿ: ಬೆಂಗಳೂರಲ್ಲಿ ಆರ್​ಸಿಬಿ ಮುಂದಿನ ಮ್ಯಾಚ್​ ರದ್ದು.. ಮತ್ತೆ ಎಲ್ಲಿ ನಡೆಯುತ್ತೆ..?

publive-image

ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 36, ವೈಭವ್ ಸೂರ್ಯವಂಶಿ 57, ನಾಯಕ ಸಂಜು ಸ್ಯಾಮ್ಸನ್ 41 ರನ್​ಗಳಿಸಿದರು. ಈ ಬಾರಿಯ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್​, ಕೇವಲ 4 ಪಂದ್ಯ ಮಾತ್ರ ಗೆದ್ದುಕೊಂಡಿದೆ. 10 ಪಂದ್ಯಗಳಲ್ಲಿ ಸೋತಿರುವ ಆರ್​ಆರ್​, ಕೇವಲ 8 ಅಂಕದೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಸಂಜು ಸ್ಯಾಮ್ಸನ್ ಅವರ ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ಸಾಕಷ್ಟು ಪಂದ್ಯಗಳನ್ನ ಮುನ್ನಡೆಸಿದ ಅನುಭವ ಪಡೆದರು. ವಿಶೇಷವಾಗಿ ರಾಹುಲ್ ದ್ರಾವಿಡ್​ ಅವರು ವ್ಹೀಲ್​ ಚೇರ್​ನಲ್ಲಿ ಬಂದು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿರೋದು, ಇಡೀ ಕ್ರಿಕೆಟ್ ಲೋಕದ ಹೃದಯ ಗೆದ್ದಿದೆ.

ಇದನ್ನೂ ಓದಿ: ನಟ ದರ್ಶನ್‌ ಟೀ ಶರ್ಟ್‌ ಸಿಕ್ಕಾಪಟ್ಟೆ ದುಬಾರಿ; ಅದರ ರೇಟ್ ಎಷ್ಟು? ಪವಿತ್ರಾ ಗೌಡ ಕೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment