/newsfirstlive-kannada/media/post_attachments/wp-content/uploads/2025/05/Dravid-1.jpg)
ಐಪಿಎಲ್ 18ನೇ ಆವೃತ್ತಿಗೆ ರಾಜಸ್ಥಾನ್ ರಾಯಲ್ಸ್ ಗೆಲುವಿನೊಂದಿಗೆ ವಿದಾಯ ಹೇಳಿದೆ. ಕ್ರಿಕೆಟ್ ಜಗತ್ತಿಗೆ ವೈಭವ್ ಸೂರ್ಯವಂಶಿ ಅವರಂಥ ಅಮೂಲ್ಯ ಕೊಡುಗೆ, ಸವಿಸವಿ ನೆನಪಿನೊಂದಿಗೆ ಹಾಗೂ ಹೊಸ ಹೊಸ ಅನುಭವಗಳೊಂದಿಗೆ ಗುಡ್ಬೈ ಹೇಳಿದೆ.
ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಜಸ್ಥಾನ್ ರಾಯಲ್ಸ್ ಎದುರಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಸಿಎಸ್ಕೆ, 8 ವಿಕೆಟ್ ಕಳೆದುಕೊಂಡು 187 ರನ್ಗಳಿಸಿತ್ತು. ಈ ಗುರಿ ಬೆನ್ನು ಹತ್ತಿದ್ದ ರಾಜಸ್ಥಾನ್ ರಾಯಲ್ಸ್, 17.1 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಕಾಣ್ತು.
ಇದನ್ನೂ ಓದಿ: ಬೆಂಗಳೂರಲ್ಲಿ ಆರ್ಸಿಬಿ ಮುಂದಿನ ಮ್ಯಾಚ್ ರದ್ದು.. ಮತ್ತೆ ಎಲ್ಲಿ ನಡೆಯುತ್ತೆ..?
ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 36, ವೈಭವ್ ಸೂರ್ಯವಂಶಿ 57, ನಾಯಕ ಸಂಜು ಸ್ಯಾಮ್ಸನ್ 41 ರನ್ಗಳಿಸಿದರು. ಈ ಬಾರಿಯ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್, ಕೇವಲ 4 ಪಂದ್ಯ ಮಾತ್ರ ಗೆದ್ದುಕೊಂಡಿದೆ. 10 ಪಂದ್ಯಗಳಲ್ಲಿ ಸೋತಿರುವ ಆರ್ಆರ್, ಕೇವಲ 8 ಅಂಕದೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಸಂಜು ಸ್ಯಾಮ್ಸನ್ ಅವರ ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ಸಾಕಷ್ಟು ಪಂದ್ಯಗಳನ್ನ ಮುನ್ನಡೆಸಿದ ಅನುಭವ ಪಡೆದರು. ವಿಶೇಷವಾಗಿ ರಾಹುಲ್ ದ್ರಾವಿಡ್ ಅವರು ವ್ಹೀಲ್ ಚೇರ್ನಲ್ಲಿ ಬಂದು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿರೋದು, ಇಡೀ ಕ್ರಿಕೆಟ್ ಲೋಕದ ಹೃದಯ ಗೆದ್ದಿದೆ.
ಇದನ್ನೂ ಓದಿ: ನಟ ದರ್ಶನ್ ಟೀ ಶರ್ಟ್ ಸಿಕ್ಕಾಪಟ್ಟೆ ದುಬಾರಿ; ಅದರ ರೇಟ್ ಎಷ್ಟು? ಪವಿತ್ರಾ ಗೌಡ ಕೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ