/newsfirstlive-kannada/media/post_attachments/wp-content/uploads/2024/11/Chaithra_Rajat.jpg)
ತನ್ನನ್ನು ನಾಮಿನೇಷನ್ ಮಾಡಲು ಚೈತ್ರಾ ಕುಂದಾಪುರ ನೀಡಿದ ಕ್ಷುಲ್ಲಕ ಕಾರಣಕ್ಕೆ ರಜತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರಜತ್, ನಾನು ಬಾಸ್ ಎಂದು ಗೌರವದಿಂದಲೇ ಕರೆಯುತ್ತೀನಿ. ನೀವು ಇಂಥಹಾ ಕ್ಷುಲ್ಲಕ ಕಾರಣ ನೀಡಿ ನಾಮಿನೇಟ್ ಮಾಡಿದ್ದೀರಿ. ಅದಕ್ಕೇ ನೀವು ನನಗೆ ಬಾಸ್ ಎಂದು ಗೇಲಿ ಮಾಡಿದ್ರು. ಬಳಿಕ ನಿಮ್ಮನ್ನು ಹೊರಗೆ ಕಳಿಸಿಯೇ ನಾನು ಮನೆಗೆ ಹೋಗುವುದು ಬಾಸ್ ಎಂದು ಸವಾಲು ಹಾಕಿದ್ರು ರಜತ್.
ಚೈತ್ರಾ ಹಾಗೂ ರಜತ್ ಜಗಳ ಮುಂದುವರಿಯಿತು. ನೀವು ನಾಮಿನೇಷನ್ ಮಾಡಿರಲು ಕೊಟ್ಟಿರೋ ಕಾರಣ ಸರಿಯಿದೆ ಎಂದು ಸುದೀಪ್ ಸರ್ ಹೇಳಿಬಿಟ್ಟರೆ ನಾನು ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ. ಬಳಿಕ ಮನೆಯಿಂದ ಹೊರ ಹೋಗುತ್ತೇನೆ ಎಂದರು.
View this post on Instagram
ರಜತ್ ನಾಮಿನೇಷನ್ಗೆ ಚೈತ್ರಾ ನೀಡಿದ್ದ ಕಾರಣವೇನು?
ನಿನ್ನೆ ಮನೆಯಲ್ಲಿ ನಾಮಿನೇಷನ್ ನಡೆದಿದೆ. ಮಹಾಪ್ರಭು ಉಗ್ರಂ ಮಂಜು ಮುಂದೆ ಮನೆ ಸದಸ್ಯರು ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದಾರೆ. ಚೈತ್ರಾ ಮೊದಲಿಗೆ ರಜತ್ ಅವರನ್ನು ನಾಮಿನೇಟ್ ಮಾಡಿದ್ರು. ಇದಕ್ಕೆ ಅವರು ನೀಡಿದ ಕಾರಣ ಇಷ್ಟೇ. ರಜತ್ ನನ್ನನ್ನು ಬಾಸ್ ಎಂದು ಕರೆಯುತ್ತಾ ಗೇಲಿ ಮಾಡುತ್ತಾರೆ. ವ್ಯಂಗ್ಯ ಯಾವುದು? ಅವಮಾನ ಯಾವುದು ಎಂದು ಗೊತ್ತಿಲ್ಲದಷ್ಟು ಮುಗ್ಧೆ ನಾನಲ್ಲ ಎಂದು ಹೇಳಿದ್ರು.
ಕಿಚ್ಚನಿಂದ ಮಂಗಳಾರತಿ
ಕಳೆದ ವೀಕೆಂಡ್ನಲ್ಲಿ ನಾಮಿನೇಷನ್ ವಿಚಾರಕ್ಕೆ ಇಡೀ ಮನೆ ಮಂದಿಗೆಲ್ಲಾ ನಟ ಕಿಚ್ಚ ಸುದೀಪ್ ಮಂಗಳಾರತಿ ಮಾಡಿದ್ರು. ಬೇರೆಯವರ ಮಧ್ಯೆ ಏನೋ ಆಗಿದೆ ಎಂದಾಗ ಅದೇ ವಿಚಾರ ಇಟ್ಟುಕೊಂಡು ಯಾವುದೇ ಕಾರಣಕ್ಕೂ ನಾಮಿನೇಟ್ ಮಾಡಬಾರ್ದು ಎಂದು ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ರು. ಇಷ್ಟಾದ ಮೇಲೂ ಸ್ಪರ್ಧಿಗಳದ್ದು ಅದೇ ರಾಗ ಅದೇ ಹಾಡಾಗಿದೆ. ಈ ವಾರ ಕೂಡ ಮತ್ತೆ ಅದೇ ಕಾರಣ ನೀಡಿ ಎಲ್ಲರೂ ನಾಮಿನೇಷನ್ ಪ್ರಕ್ರಿಯೆ ನಡೆಸಿದ್ದಾರೆ.
ಅದೇ ರಾಗ ಅದೇ ಹಾಡು
ಕಳೆದ ವಾರ ರಜತ್ ಸುರೇಶ್ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ರು. ಈ ವಿಚಾರವನ್ನೇ ಇಟ್ಟುಕೊಂಡು ಎಲ್ಲರೂ ರಜತ್ ಅವರಿಗೆ ಕಳಪೆ ನೀಡಿದ್ರು. ಈ ವಿಚಾರವನ್ನು ಸುದೀಪ್ ಅವರು ವೀಕೆಂಡ್ನಲ್ಲಿ ಪ್ರಸ್ತಾಪ ಮಾಡಿ, ಇಂಥಾ ಕಾರಣ ನೀಡಿ ನಾಮಿನೇಟ್ ಮಾಡೋದು ತಪ್ಪು. ನೀವು ಜೋಕರ್ಗಳ ರೀತಿ ಕಾಣುತ್ತೀರಿ ಎಂದಿದ್ದರು ಸುದೀಪ್.
ಇದನ್ನೂ ಓದಿ:ಕಿಚ್ಚ ಸುದೀಪ್ ಮಂಗಳಾರತಿಗೂ ಕ್ಯಾರೇ ಎನ್ನದ ಚೈತ್ರಾ; ಮತ್ತೆ ಅದೇ ರಾಗ ಅದೇ ಹಾಡು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ