Advertisment

CSK ಅಭಿಮಾನಿಗಳ ಹೃದಯವನ್ನೂ ಗೆದ್ದ RCB ಕ್ಯಾಪ್ಟನ್; ‘ನೀವು ಇಷ್ಟವಾದ್ರಿ’ ಅಂತಾ ಬಹುಪರಾಕ್..! ವಿಡಿಯೋ

author-image
Ganesh
Updated On
CSK ಅಭಿಮಾನಿಗಳ ಹೃದಯವನ್ನೂ ಗೆದ್ದ RCB ಕ್ಯಾಪ್ಟನ್; ‘ನೀವು ಇಷ್ಟವಾದ್ರಿ’ ಅಂತಾ ಬಹುಪರಾಕ್..! ವಿಡಿಯೋ
Advertisment
  • ಧೋನಿ ಮೇಲೆ ಆರ್​ಸಿಬಿ ಕ್ಯಾಪ್ಟನ್​ಗೆ ಇದೆಂಥ ಗೌರವ
  • ಪಂದ್ಯ ಮುಗಿದ ನಂತರ ನಡೆದುಕೊಂಡ ರೀತಿಗೆ ಫಿದಾ
  • ಕ್ರಿಕೆಟ್ ಅಭಿಮಾನಿಗಳ ಹೃದಯಗೆದ್ದ ರಜತ್ ಪಾಟೀದಾರ್

ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್​ಗಳ ಅಮೋಘವಾದ ಗೆಲುವು ಪಡೆದಿದೆ. ಆರ್​ಸಿಬಿ ನೀಡಿದ್ದ 197 ರನ್​ಗಳ ಟಾರ್ಗೆಟ್ ತಲುಪಲಾಗದೇ ಚೆನ್ನೈ ಹೀನಾಯವಾಗಿ ಸೋತಿದೆ. 2008ರ ಬಳಿಕ ಚೆನ್ನೈ ವಿರುದ್ಧ ಆರ್​ಸಿಬಿ ಗೆಲವು ಪಡೆದು ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ.

Advertisment

ಇನ್ನು, ಪಂದ್ಯ ಮುಗಿದ ಬಳಿಕ ಆರ್​ಸಿಬಿ ಆಟಗಾರರು ಮೈದಾನದಲ್ಲಿ ಸಂಭ್ರಮಿಸಿದರು. ಇದೇ ವೇಳೆ ಮೈದಾನದಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ವಿರಾಟ್ ಕೊಹ್ಲಿ ಹಗ್ ಮಾಡಿಕೊಂಡರು. ಪರಸ್ಪರ ಅಪ್ಪುಗೆಯ ಈ ವಿಡಿಯೋ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಇದನ್ನೂ ಓದಿ: ಕೊನೆಯಲ್ಲಿ RCB ಸ್ಕೋರ್​​ ಹೆಚ್ಚಿಸಿದ್ದೇ ಟಿಮ್ ಡೇವಿಡ್.. ಚಾಣಕ್ಯ ಧೋನಿ ಕೈಚಳಕ ಹೇಗಿತ್ತು..? Video

ಇದೇ ವೇಳೆ ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್​ ಕೂಡ ಅಭಿಮಾನಿಗಳ ಹೃದಯ ಗೆದ್ದರು. ಪಂದ್ಯ ಗೆದ್ದ ಸಂಭ್ರಮದಲ್ಲಿದ್ದ ಪಾಟೀದಾರ್​, ಧೋನಿ ಬಳಿ ಬರುತ್ತಿದ್ದಂತೆಯೇ, ತಲೆ ಮೇಲಿದ್ದ ಕ್ಯಾಪ್​ ತೆಗೆದು ಧೋನಿ ಕೈಕುಲುಕಿದ್ದಾರೆ. ರಜತ್ ಪಾಟೀದಾರ್, ಹಿರಿಯ ಆಟಗಾರ ಧೋನಿಗೆ ನೀಡಿದ ಗೌರವ ಕಂಡು ಸಿಎಸ್​ಕೆ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ರಜತ್ ಪಾಟೀದಾರ್​​ ಅವರ ಈ ಗೌರವದ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

Advertisment

ಇನ್ನು ನಿನ್ನೆಯ ಪಂದ್ಯದಲ್ಲಿ ಧೋನಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. 16 ಬಾಲ್​​ನಲ್ಲಿ ಎರಡು ಸಿಕ್ಸರ್, ಮೂರು ಬೌಂಡರಿಯೊಂದಿಗೆ 30 ರನ್​ಗಳಿಸಿ ಗಮನ ಸೆಳೆದರು. ಧೋನಿಯ ಆಟದ ಹೊರತಾಗಿಯೂ, ಸಿಎಸ್​​ಕೆ ತಂಡ ಆರ್​ಸಿಬಿ ಎದುರು 50 ರನ್​ಗಳಿಂದ ಸೋತಿತು.

ಇದನ್ನೂ ಓದಿ: 21 ರನ್​ ನೀಡಿ 3 ವಿಕೆಟ್ ಕಿತ್ತ ಹೇಜಲ್​ವುಡ್..​ ವಿನ್ನಿಂಗ್ ದೃಶ್ಯ ಹಂಚಿಕೊಂಡ ಆರ್​ಸಿಬಿ -VIDEO

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment